ಶಿರಸಿ: ಜಿಪಿಎಗೆ ಬೆಲೆ ಇಲ್ಲ; ಸರ್ವರ್‌ ಮೊದಲೇ ಇಲ್ಲ!

ಬೆಳೆಸಾಲ ಬದಲಿಗೆ ಬೆವರು ಸಾಲವಾಯ್ತು!

Team Udayavani, May 29, 2022, 11:39 AM IST

8

ಶಿರಸಿ: ಕೋವಿಡೋತ್ತರ ಕಾಲದಲ್ಲಿ ಕೂಡ ಸರಳವಾಗಿ ರೈತರಿಗೆ ಫಸಲು ಸಾಲ ಸಿಗಬೇಕು ಎಂಬ ಆಶಯಕ್ಕೇ ಈಗ ಬೆಂಕಿ ಬಿದ್ದಿದೆ.

ರೈತರು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ದಿನವೂ ತೆರಳಿ ಬೆಳೆ ಸಾಲದ ಪಡೆದುಕೊಳ್ಳುವ ಬದಲಿಗೆ ಸರ್ವರ್‌ ಸಮಸ್ಯೆ, ಸರತಿ ಕಾರಣದಿಂದ “ಬೆವರು’ ಸಾಲವಾಗುತ್ತಿದೆ.

ರಾಜ್ಯದಲ್ಲಿನ ಕೋಟ್ಯಾಂತರ ರೈತರಿಗೆ ನೆರವಾಗುವ ಬೆಳೆ ಸಾಲವನ್ನು ರಾಜ್ಯ ಸರಕಾರ ಪ್ರತಿ ರೈತರಿಗೆ ಅವರವರ ಕೃಷಿ ಭೂಮಿ ಆಧರಿಸಿ ಶೂನ್ಯ ಬಡ್ಡಿಯಲ್ಲಿ ಗರಿಷ್ಠ ಮೂರು ಲಕ್ಷ ರೂ. ತನಕ ನಗದು ನೀಡುತ್ತಿತ್ತು. ಇದು ರೈತರಿಗೆ ಮುಂದಿನ ಬೆಳೆ ಕೊಯ್ಲು ಹಾಗೂ ಸಂಸ್ಕರಣೆ, ಸಂರಕ್ಷಣೆಗೆ ನೆರವಾಗುತ್ತಿದ್ದವು.

ರಾಜ್ಯ ಸರಕಾರ ನೀಡುವ ಬೆಳೆ ಸಾಲ ಶೂನ್ಯ ಬಡ್ಡಿದರ ಆಗಿರುವ ಹಿನ್ನೆಲೆಯಲ್ಲಿ ಇದರ ದುರ್ಬಳಕೆ ತಪ್ಪಿಸಬೇಕು ಎಂಬ ಕಾರಣಕ್ಕೆ ಸಹಕಾರ ಇಲಾಖೆ ಈ ಬಾರಿ ಇ.ಸಾಲ ಎಂಬ ಹೊಸ ಪದ್ಧತಿ ಜಾರಿಗೆ ತಂದಿದೆ. ಇ ಸಾಲದಲ್ಲಿನ ಫ್ರುಟ್ಸ್‌ ಐಡಿ ಮಾಡಿ ಸಾಲ ಪಡೆದರೆ ಅದು ಪಹಣಿಗೂ ದಾಖಲಾಗುತ್ತದೆ.

ಇ.ಸಾಲ ಪಡೆಯಲು ಪಹಣಿದಾರ ರೈತ ಆಯಾ ವ್ಯಾಪ್ತಿಯ ಸೇವಾ ಸಹಕಾರಿ ಸಂಘಕ್ಕೆ ತೆರಳಿ ಬೆಳೆಸಾಲ ಪಡೆಯಬೇಕು. ಸಾಲ ಪಡೆಯಲು ಆರ್‌ಟಿಸಿ ಜೊತೆಗೆ ಆಧಾರ ಕಾರ್ಡ್‌, ಪಾನ್‌ ಕಾರ್ಡ್‌ ಹಾಗೂ ರೇಶನ್‌ ಕಾರ್ಡ್‌ ಒಯ್ಯಬೇಕು. ಆಧಾರ ಮೊಬೈಲ್‌ ಲಿಂಕ್‌ ಇರದೇ ಇದ್ದರೆ ಒಟಿಪಿ ಸಮಸ್ಯೆ ಕೂಡ ಆಗುತ್ತದೆ.

ಇ.ಸಾಲ ಪಡೆಯಲು ಕೃಷಿ ಕ್ಷೇತ್ರ, ಬೆಳೆಸಾಲ ಮೊತ್ತ ಎಲ್ಲ ಅಂತರ್ಜಾಲದ ಮೂಲಕ ಫ್ರುಟ್ಸ್‌ ಐಡಿ ದಾಖಲಿಸಿದ ಬಳಿಕ ರೈತರು ಬೆರಳಚ್ಚು ಕೊಡಬೇಕು. ಆದರೆ, ಎಷ್ಟೋ ರೈತರಿಗೆ ಥಂಬ್‌ ಕೊಟ್ಟರೂ ಅದು ತೆಗೆದುಕೊಳ್ಳುತ್ತಿಲ್ಲ. ಈ ಮಧ್ಯೆ ಹತ್ತು ಸರ್ವೆ ನಂಬರಗಿಂತ ಹೆಚ್ಚಿದ್ದರೆ ರೈತರ ನೋಂದಣಿಯ ಫ್ರುಟ್ಸ್‌ ಐಡಿ ಇನ್ನೊಂದು ಮಾಡಬೇಕು. ಅದು ಆಗದೇ ಇದ್ದರೆ ಕೃಷಿ, ತೋಟಗಾರಿಕಾ ಇಲಾಖೆ ಕಚೇರಿಗೆ ಅಲೆದು ಫ್ರುಟ್ಸ್‌ ಐಡಿ ಸೃಷ್ಟಿಸಿಕೊಳ್ಳಬೇಕು.

ಜಂಟಿಖಾತೆ ಇದ್ದರೆ ಈ ಮೊದಲು ಬಳಕೆ ಇದ್ದ ಕಾರ್ಯ ನಿರ್ವಹಣಾ ಹಕ್ಕುಪತ್ರ ಜಿಪಿಎಗೆ ಈಗ ಬೆಲೆ ಇಲ್ಲ. ಬದಲಿಗೆ ಆರ್‌ಟಿಸಿಯಲ್ಲಿ ಇರುವ ಎಲ್ಲರ ಹೆಸರಿನ ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಓಟಿಪಿ ಬರುವ ಮೊಬೈಲ್‌ ಬೇಕು. ಎಷ್ಟೋ ಕುಟುಂಬದ ಹೆಣ್ಮಕ್ಕಳು ಮದುವೆ ಆಗಿ ದೂರದ ಊರಲ್ಲಿದ್ದರೂ ಅವರು ಬರಬೇಕು, ಪಾಸ್‌ಬುಕ್‌ ಕೊಡಬೇಕು. ಫ್ರುಟ್ಸ್‌ ಐಡಿ ಸೃಷ್ಟಿಸಿಕೊಳ್ಳಬೇಕು. ಈ ಮಧ್ಯೆ ಕಳೆದ 24 ಗಂಟೆಗಳಿಂದ ಫ್ರುಟ್ಸ್‌ ಐಡಿ ಸೃಷ್ಟಿಸುವ ಸರ್ವರ್‌ ಕೆಲಸವನ್ನೇ ಮಾಡುತ್ತಿಲ್ಲ. ಇದರಿಂದ ರೈತರು ಬೆಳೆ ಸಾಲ ಪಡೆಯಲು ಬಂದವರು ವಾಪಸ್‌ ಹೋಗುತ್ತಿದ್ದಾರೆ.

ಈಗಾಗಲೇ ಕಳೆದ ಏ.30 ರೊಳಗೆ ತುಂಬಿದ ರೈತರಿಗೆ ಮತ್ತೆ ಸಾಲ ಸಿಗದೆ ಸಮಸ್ಯೆ ಆಗುತ್ತಿದೆ. ಹಳೆ ಪದ್ಧತಿಯಲ್ಲಿ ವಾರದೊಳಗೆ ಸಿಗುತ್ತಿದ್ದ ಸಾಲ ಈಗ ಸರ್ವರ್‌ ಇದ್ದಾಗ ಪಡೆಯುವ ಸ್ಥಿತಿ ಬಂದಿದೆ. ವೃದ್ದರು, ಮಹಿಳೆಯರೂ ಸಹಕಾರಿ ಸಂಘಗಳಿಗೆ ಅಲೆದಾಟ ಮಾಡುವಂತೆ ಆಗಿದೆ.

ಹಳೆ ಮಾದರಿಯಲ್ಲಿ ಬೆಳೆಸಾಲ ನೀಡುವಂತೆ ಅದರ ದಾಖಲೆ ಜೊತೆಗೆ ಇ ಸಾಲಕ್ಕೂ ಕೆಲಸ ನೀಡಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್‌, ಇಂಟ್ರನೆಟ್‌ ಸರಿ ಇಲ್ಲದೇ ಸಮಸ್ಯೆ ಆಗುತ್ತಿದೆ. ಸರ್ವರ್‌ ಕೂಡ ಕೈಕೊಟ್ಟಿದೆ.  –ಎಂ.ಎಸ್‌. ಹೆಗಡೆ, ಸೊಸೈಟಿ ನೌಕರ

ಹಳೇ ಪದ್ಧತಿ ಉತ್ತಮ. ಹೊಸ ಪದ್ಧತಿಯಿಂದ ನನ್ನ ಅಕ್ಕ ತಂಗಿಯರ ಫ್ರುಟ್ಸ್‌ ಐಡಿ ಮಾಡಿಸಬೇಕಾಗಿದೆ. ಸಿಗೋ ಸಾಲಕ್ಕೆ ಅಕ್ಕ ತಂಗಿ ಕರೆಸಿ ಕಳಿಸಲೂ 5-6 ಸಾವಿರ ವೆಚ್ಚ ಆಗುತ್ತದೆ.  -ಜಿ.ಎಲ್‌. ಹೆಗಡೆ ರೈತ

 -ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.