ಪಣಂಬೂರು: ಬೀಚ್ ನಲ್ಲಿ ಈಜಲು ಇಳಿದಿದ್ದ ಮೈಸೂರು ಮೂಲದ ಇಬ್ಬರು ನೀರುಪಾಲು
Team Udayavani, May 30, 2022, 12:02 PM IST
ಪಣಂಬೂರು: ಈಜಲು ತೆರಳಿದ್ದ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾದ ಘಟನೆ ಪಣಂಬೂರು ಬೀಚ್ ನಲ್ಲಿ ಸೋಮವಾರ ( ಮೇ. 30 ರಂದು) ನಡೆದಿದೆ.
ಮೈಸೂರು ಮೂಲದ ದಿವಾಕರ್ ಆರಾಧ್ಯ (45), ನಿಂಗಪ್ಪ (60) ಮೃತ ದುರ್ಧೈವಿಗಳೆಂದು ತಿಳಿದು ಬಂದಿದೆ.
ಮೈಸೂರಿನ ಅವಿನಾಶ್ ಮತ್ತು ಅವರ ಮೂವರು ಸ್ನೇಹಿತರು ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳಕ್ಕೆ ಶುಕ್ರವಾರ ( ಮೇ 27 ರಂದು) ಸಂಜೆ ಬಂದಿದ್ದು, ಸೋಮವಾರ ( ಮೇ 30) ರಂದು ಬೆಳಗ್ಗಿನ 7:30 ರ ವೇಳೆಗೆ ಪಣಂಬೂರು ಬೀಚ್ ಗೆ ವಿಹಾರಕ್ಕೆಂದು ಬಂದಿದ್ದಾರೆ. ಬೀಚ್ ನಲ್ಲಿ ಈಜಲು ಇಳಿದ ನಾಲ್ವರಲ್ಲಿ ಆರಾಧ್ಯ ಹಾಗೂ ನಿಂಗಪ್ಪ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.
ನೀರುಪಾಲಾದ ಇಬ್ಬರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಅವಿನಾಶ್ ಕೊಟ್ಟ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.