![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 2, 2022, 2:16 PM IST
ಕೊಪ್ಪಳ: ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯದ ಚಟುವಟಿಕೆಗಳನ್ನು ಇಂದಿಗೂ ಜೀವಂತವಾಗಿರಿಸಿದೆ ಎಂದು ಪ್ರೊ| ಶರಣಬಸಪ್ಪ ಬಿಳಿಎಲೆ ಅವರು ಹೇಳಿದರು.
ನಂದೀಶ್ವರ ಶಾಲೆ ನಂದಿ ನಗರದಲ್ಲಿ ನಡೆದ ಕಸಾಪ ಜಿಲ್ಲಾ, ತಾಲೂಕು ಸಾಹಿತ್ಯ ಪರಿಷತ್ನಿಂದ ಕಸಾಪ ದತ್ತಿ ಉಪನ್ಯಾಸ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪದಲ್ಲಿ ಶ್ರಮಿಸಿದ ಹಿರಿಯರ ಆಶಯದಂತೆ, ಅವರ ಚಿಂತನೆ ಜೀವ ತುಂಬುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮುಂದಿದೆ. ದತ್ತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಇಂದಿಗೂ ಜೀವಂತವಾಗಿಸಿದೆ. ಇನ್ನೂ ಹೆಚ್ಚು ಹೆಚ್ಚು ದತ್ತಿ ಸ್ಥಾಪಿಸುವ ಮೂಲಕ ಸಾಹಿತ್ಯ ಪರಿಷತ್ತಿನ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ರಾಜೇಶ ಸಸಿಮಠ ಮಾತನಾಡಿ, ವಚನ ಸಾಹಿತ್ಯ ಅನುಭವ ಜನ್ಯವಾದದ್ದು, ಸರ್ವಕಾಲಿಕವಾಗಿ ಜನ ಬದುಕಿನ ಮಜಲುಗಳಲ್ಲಿ ಹಾಸು ಹೊಕ್ಕಾಗಿದೆ. ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸಿರುವ ಮೂಲಕ ಜನ ಜನಿತವಾಗಿವೆ ಎಂದರು.
ಬಿ.ಪಿ. ಮರಿಗೌಡ ಮಾತನಾಡಿ, ಇಂದಿನ ಸಂವಿಧಾನ ವ್ಯವಸ್ಥೆಗೆ ಅನುಭವ ಮಂಟಪದ ಶರಣರ ಚಟುವಟಿಕೆಗಳೇ ಪ್ರೇರಣೆಯಾಗಿದೆ. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಗೆ ಇಂದಿನ ಸಮಾಜದಲ್ಲಿನ ಮೌಡ್ಯ, ಜಡತೆ ಹೋಗಲಾಡಿಸಲು ಪ್ರೇರಣೆಯಾಗಲಿ ಎಂದರು.
ದಿ. ಮರಿಗೌಡ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿ ಹಾಗೂ ದಿ. ಅಂದಮ್ಮ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಗಳನ್ನು ಈ ವೇಳೆ ಜಿಲ್ಲಾ ಕಸಾಪ ಘಟಕ ಪ್ರಕಟಿಸಿತು. ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ಪ್ರಶಸ್ತಿಗೆ 7 ಜನ ಲೇಖಕರು, 9 ಪುಸ್ತಕಗಳನ್ನು ನೋಂದಾಯಿಸಿಕೊಂಡಿದ್ದರು. ಈಶ್ವರ ಹತ್ತಿ ಅವರ ಅನಿಮಲ್ ಫಾರ್ಮ್ ಕೃತಿ ಆಯ್ಕೆಗೊಂಡಿದೆ. ದಿ. ಅಂದಮ್ಮ ಮಲ್ಲನಗೌಡರ ಸ್ಮಾರಕ ದತ್ತಿ ಪ್ರಶಸ್ತಿಗೆ 6 ಜನ ಮಹಿಳಾ ಲೇಖಕಿಯರು 7 ಪುಸ್ತಕಗಳನ್ನು ನೋಂದಾಯಿಸಿಕೊಂಡಿದ್ದರು. ಮುಮ್ತಾಜ್ ಬೇಗಂ ಅವರ “ಕೊಂದ ಕನಸುಗಳ ಕೇಸು’ ಪುಸ್ತಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
ಜೊತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ ಪಾಟೀಲ ಮಾತನಾಡಿ, ಕಸಾಪ ವಿಭಿನ್ನವಾಗಿ ದತ್ತಿ ಉಪನ್ಯಾಸ ಆಯೋಜಿಸಲು ಪ್ರಯತ್ನಿಸುತ್ತಾ ಬಂದಿದೆ. ಆಸಕ್ತರು ಹೆಚ್ಚಿನ ದತ್ತಿಗಳನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಹಕಾರ ನೀಡಬೇಕು. ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನಿಸಿದವರನ್ನು ಬಂಧಿಸಲು ಆಗ್ರಹಿಸಿದರು.
ಸಮಾರಂಭದಲ್ಲಿ ಚನ್ನಬಸಪ್ಪ ಕಡ್ಡಿಪುಡಿ, ರಮೇಶ ಕುಲಕರ್ಣಿ, ಸಾವಿತ್ರಿ ಮುಜುಂದಾರ, ವೀರಣ್ಣ ಹುರಕಡ್ಲಿ, ಈರಪ್ಪ ಬಿಜಲಿ, ಶಿವಕುಮಾರ ಕುಕನೂರು, ನಂದೀಶ್ವರ ಪ್ರಾಥಮಿಕ ಶಾಲೆಯ ಸುರೇಶ ಉಪಸ್ಥಿತರಿದ್ದರು.
ಈ ವೇಳೆ ಶಂಕ್ರಪ್ಪ ಬಂಗಾರಿ ಅವರು ತಮ್ಮ ಭಾಗದಲ್ಲಿ 880 ಮಹಾಮನೆ ಕಾರ್ಯಕ್ರಮ ಆಯೋಜಿಸಿ ಪ್ರತಿವಾರ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವರನ್ನು ಕಸಾಪ ಸನ್ಮಾನಿಸಿತು. ಕೊಪ್ಪಳ ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಅವರು ಪ್ರಾಸ್ತಾವಿಕ ಮಾತನಾಡಿದರು. ಸಂಗಪ್ಪ ಚಕ್ರಸಾಲಿ ನಿರೂಪಿಸಿದರು. ಮಲ್ಲಿಕಾರ್ಜುನ ಹ್ಯಾಟಿ ಅವರು ಸ್ವಾಗತಿಸಿದರು. ಬಸವರಾಜ ಶಿರಗುಪ್ಪಿಶೆಟ್ಟರ್ ವಂದಿಸಿದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.