ಮತ್ತೆ ಸುರಿದ ವರುಣ: ನಿಟ್ಟುಸಿರು ಬಿಟ್ಟ ರೈತರು

ಬಿಸಿಲಿನ ತಾಪಕ್ಕೆ ಕಮರುವ ಸ್ಥಿತಿಯಲ್ಲಿತ್ತು ಹೆಸರು ಬೆಳೆ

Team Udayavani, Jun 2, 2022, 2:31 PM IST

15

ಕುಷ್ಟಗಿ: ಬಿತ್ತನೆ ಮಾಡಿದ ಹೆಸರು ಬೆಳೆಗೆ ಸಕಾಲಿಕವಾಗಿ ಮಳೆಯಾಗದೇ ಆತಂಕದಲ್ಲಿದ್ದ ರೈತರಿಗೆ, ತಡರಾತ್ರಿ ಸುರಿದ ಚದುರಿದ ಮಳೆಯಿಂದ ನಿರಾತಂಕರಾಗಿದ್ದಾರೆ.

ಕಳೆದ ಮೇ 19ರಂದು ಅಸನಿ ಚಂಡಮಾರುತ ಮಳೆಯಿಂದಾಗಿ ಸಾಕಷ್ಟು ತೇವಂಶವಾಗಿತ್ತು. ನಂತರ ಬಿತ್ತನೆಗೆ ಪೂರಕ ತೇವಾಂಶ ಗಮನಿಸಿ ಬಹುತೇಕ ರೈತರು ಹೆಸರು, ಎಳ್ಳು, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಈ ನಡುವೆ ಹವಮಾನ ತಜ್ಞರು, ಕೃಷಿ ಇಲಾಖೆಯ ಮೂಲಕ ಮುಂಗಾರು ಮಳೆ ಪ್ರವೇಶಕ್ಕೆ ಕಾಲವಾಕಾಶವಿದೆ. ಇದು ಮುಂಗಾರು ಪೂರ್ವದ ಮಳೆಯಾಗಿದ್ದು, ರೈತರು ಬಿತ್ತನೆಗೆ ಅವಸರ ಮಾಡಬೇಡಿ. ಬಿತ್ತನೆ ಮಾಡಿದರೆ ನಂತರದ ತಾಪಮಾನಕ್ಕೆ ಅಗಿ ಸಾಯುವ ಸಾಧ್ಯತೆಗಳ ಸಲಹೆ ನೀಡಿದ್ದರು.

ಹವಾಮಾನ ಇಲಾಖೆಯ ಮಾಹಿತಿಯಂತೆ ಬಿತ್ತನೆ ನಂತರ ಮಳೆ ಆಗದೇ ಅಂದಾಜು 15 ದಿನದ ಮೊಳಕೆಯೊಡೆದ ಹೆಸರು ಬೆಳೆಗೆ ಮಳೆ ತೀರ ಅಗತ್ಯ ಆಗಿತ್ತು. ಈ ಸಂದರ್ಭದಲ್ಲಿ ಕೆಲವೆಡೆ ಮಳೆ ಕೊರತೆ ಎದುರಿಸುವ ಪರಿಸ್ಥಿತಿಯಲ್ಲಿ ಹಲವೆಡೆ ಹೆಸರು ಬೆಳೆ ಬಿಸಿಲಿನ ತಾಪಕ್ಕೆ ಕಮರುವ ಸ್ಥಿತಿಯಲ್ಲಿತ್ತು.

ರೈತರ ನಿರೀಕ್ಷೆಯಂತೆ ಮೇ 31 ತಡರಾತ್ರಿ ತಾಲೂಕಿನಾದ್ಯಂತ ಚದುರಿದ ಮಳೆಯಾಗಿದೆ. ಹವಾಮಾನ ಇಲಾಖೆ ಜೂನ್‌ 5ಕ್ಕೆ ಮುಂಗಾರು ಪ್ರವೇಶದ ಬಗ್ಗೆ ಮಾಹಿತಿ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಹವಾಮಾನ ಇಲಾಖೆ ನಂತರ ಮತ್ತೂಂದು ಪ್ರಕಟಣೆಯಲ್ಲಿ ರಾಜ್ಯಕ್ಕೆ ನಾಲ್ಕು ದಿನ ಮೊದಲೇ ಮುಂಗಾರು ಪ್ರವೇಶದ ಪ್ರಕಟಣೆ ನೀಡಿದ್ದರು. ವೈದ್ಯರು ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದು ಹಾಲು ಅನ್ನ ಎನ್ನುವಂತೆ ತಾಲೂಕಿನಲ್ಲಿ ಅಲ್ಪಸ್ವಲ್ಪ ಮಳೆಯಾಗಿರುವುದು ಬೆಳೆ ಚೇತರಿಕೆ ಸಾಧ್ಯವಾಗಿದೆ.

ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಮಾತನಾಡಿ, ತಾಲೂಕಿನ 6 ಮಳೆ ಮಾಪನಾ ಕೇಂದ್ರ ವ್ಯಾಪ್ತಿಯ ಕುಷ್ಟಗಿ 4.4 ಮಿ.ಮೀ. ಹನುಮಸಾಗರ 16.2 ಮಿ.ಮೀ., ದೋಟಿಹಾಳ 19.3 ಮಿ.ಮೀ., ಕಿಲ್ಲಾರಹಟ್ಟಿಯಲ್ಲಿ 28.2 ಮೀ ನಷ್ಟು ಹಾಗೂ ತಾವರಗೇರಾ 12 ಮಿ.ಮೀ ನಷ್ಟು ಮಳೆಯಾಗಿದೆ. ಈ ಮಳೆಯಿಂದ ಹಿಂದಿನ ಮಳೆ ಹಾಗೂ ಈಗಿನ ಮಳೆ ಹಸಿ ಕಲೆತು ಹೆಸರು, ಎಳ್ಳು, ಸೂರ್ಯಕಾಂತಿ ಹೆಸರಿಗೆ ಪೂರಕವಾಗಿದೆ ಎಂದರು.

ಅಡವಿಯಲ್ಲಿ ಗುರ್ಜಿ ಪೂಜೆ: ಬಿತ್ತನೆ ಬಳಿಕ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ಕಳೆದ ಮೇ 29ರಂದು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ಆಚರಿಸಿದ್ದರು. ಇದಾದ ಮೂರನೇ ದಿನ ಮೇ 31 ತಡರಾತ್ರಿ ಚದುರಿದಂತೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಗುರ್ಜಿಯ ಫಲಶ್ರುತಿ ಸಂಭ್ರಮದಲ್ಲಿ ಸದರಿ ಆಚರಣೆಗೆ ದೇವಸ್ಥಾನ ಆವರಣದಲ್ಲಿ ಅನ್ನ ಸಂತರ್ಪಣೆ ಮೂಲಕ ತೆರೆ ಗುರ್ಜಿ ಪೂಜೆಗೆ ತೆರೆ ಎಳೆದರು. ತಾಲೂಕಿನ ಅಡವಿ ಗ್ರಾಮದ ರೈತ ಮಲ್ಲಿಕಾರ್ಜುನ ದೋಟಿಹಾಳ ಪ್ರತಿಕ್ರಿಯಿಸಿ ನಮ್ಮೂರಲ್ಲಿ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ ಕಳೆದ ಎರಡ್ಮೂರು ದಿನಗಳಲ್ಲಿ ಮಳೆ ಆಗದೇ ಇದ್ದರೆ ಹೆಸರು ಬೆಳೆ ಕೈ ಕೊಡುವ ಸಾಧ್ಯತೆಗಳಿದ್ದವು. ನಮ್ಮೂರಲ್ಲಿ ಮಳೆರಾಯನಿಗಾಗಿ ಗ್ರಾಮಸ್ಥರು ಗುರ್ಜಿ ಅಚರಣೆ ಮಾಡಿದ್ದವು. ರೈತರ ಪ್ರಾರ್ಥನೆಗೆ ಸಾಧಾರಣ ಮಳೆಯಾಗಿದೆ. ಹೀಗಾಗಿ ರೈತರು ಖುಷಿಯಾಗಿ ಜೂನ್‌ 1ರಂದು ಗುರ್ಜಿಯ ಸಂಪನ್ನ ಕಾರ್ಯಕ್ರಮದ ಮೊದಲೇ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.