ಗೃಹರಕ್ಷಕ ದಳದಿಂದ ಇನ್ಫ್ಲೆಟೇಬಲ್ ಬೋಟ್ಗಳ ಪ್ರಾಯೋಗಿಕ ಬಳಕೆ
Team Udayavani, Jun 3, 2022, 10:28 AM IST
ಕೂಳೂರು: ದ.ಕ ಜಿಲ್ಲಾ ಗೃಹ ರಕ್ಷಕದಳ ಹಾಗೂ ಪೌರರಕ್ಷಣೆ ತಂಡಕ್ಕೆ ಕೇಂದ್ರ ಕಚೇರಿಯಿಂದ ನೀಡಲಾದ ಎರಡು ಇನ್ಫ್ಲೆಟೇಬಲ್ ಬೋಟ್ಗಳ ಪ್ರಾಯೋ ಗಿಕ ಬಳಕೆ ಮತ್ತು ಅಣುಕು ಪ್ರದರ್ಶನವು ಗುರುವಾರ ಕೂಳೂರು ಬಳಿಯ ಗುರುಪುರ ನದಿಯ ಹಿನ್ನೀರಿನಲ್ಲಿ ಜರಗಿತು.
ಹೊಸ ಬೋಟ್ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬು ದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಯವರ ಆದೇಶದಂತೆ ಟ್ರಯಲ್ ರನ್ ಮತ್ತು ಅಣುಕು ಪರೀಕ್ಷೆ ಮಾಡಲಾಗಿದೆ. ಎಲ್ಲ ಬೋಟ್ಗಳು ಸುಸ್ಥಿತಿಯಲ್ಲಿವೆ ಎಂದರು.
ಗೃಹ ರಕ್ಷಕದಳದ ಉಪ ಸಮಾದೇಷ್ಟರಾದ ರಮೇಶ್ ಬೋಟ್ನ ಕಾರ್ಯಕ್ಷಮತೆಯ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ, ಪ್ರವಾಹ ರಕ್ಷಣಾ ತಂಡದ ಸದಸ್ಯರಾದ ದಿವಾಕರ್, ಪ್ರಸಾದ್, ನಿಖೀಲ್, ಕನಕಪ್ಪ, ವಿನಯ್, ಪ್ರದೀಪ್, ಲೀಲಾಧರ್ ಉಪಸ್ಥಿತರಿದ್ದರು. ಪೌರರಕ್ಷಣಾ ಕಾರ್ಯಕರ್ತರಾದ ಸಂತೋಷ್ ಪೀಟರ್, ನಿತಿನ್, ಅಜಯ್, ಅಂಜನ್, ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ರಕ್ಷಣೆಗೆ ಬೋಟ್ಗಳ ಬಳಕೆ
ಜಿಲ್ಲಾಡಳಿತ ಕಳೆದ ವರ್ಷ ಗೃಹರಕ್ಷಕದಳಕ್ಕೆ 3 ಇನ್ಫ್ಲೆಟೇಬಲ್ ಬೋಟ್ಗಳನ್ನು ನೀಡಿತ್ತು. ಕೇಂದ್ರ ಕಚೇರಿಯಿಂದ ಮತ್ತೆ ಎರಡು ಬೋಟ್ಗಳು ಸೇರ್ಪಡೆಯಾಗಿವೆ. ಗೃಹರಕ್ಷಕದಳದಲ್ಲಿ ಒಟ್ಟು 6 ಬೋಟ್ಗಳಿವೆ. ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಂಟ್ವಾಳ, ಮೂಲ್ಕಿಯಲ್ಲಿ ತಲಾ 1 ಹಾಗೂ ಮಂಗಳೂರಿನಲ್ಲಿ 2 ಬೋಟ್ಗಳಿವೆ. ಇದರಲ್ಲಿ ನುರಿತ ಈಜುಪಟುಗಳು, ಚಾಲಕರು ಇರುತ್ತಾರೆ. ನೆರೆ ಸಂದರ್ಭ ಜಿಲ್ಲಾಧಿಕಾರಿಯವರ ಆದೇಶದಂತೆ ಅಗ್ನಿಶಾಮಕದಳದೊಂದಿಗೆ ಸೇರಿ ಜನರು ಮತ್ತು ಆಸ್ತಿ ಪಾಸ್ತಿಗಳ ರಕ್ಷಣೆಗೆ ಬಳಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾ ದೇಷ್ಟರಾದ ಡಾ| ಮುರಳಿ ಮೋಹನ್ ಚೂಂತಾರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸೈಬರ್ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ
Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ
Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.