“ತಮ್ಮನ ಸಾವಿಗೆ ಪ್ರತೀಕಾರವಾಗಿ ಸಿಧು ಹತ್ಯೆ’: ಸಚಿನ್ ಬಿಷ್ಣೋಯಿ
ಸಿಧು ಗುಂಪಿನ ಇನ್ನೂ ಹಲವರನ್ನು ಕೊಲ್ಲುತ್ತೇವೆ: ಬೆದರಿಕೆ!
Team Udayavani, Jun 3, 2022, 7:45 PM IST
ನವದೆಹಲಿ: ಇತ್ತೀಚೆಗೆ ಹತ್ಯೆಗೊಳಗಾದ ಗಾಯಕ ಸಿಧು ಮೂಸೆವಾಲನ ಹತ್ಯೆ ಮಾಡಿದ್ದು ತಾನೇ ಎಂದು ಪಾತಕಿ ಸಚಿನ್ ಬಿಷ್ಣೋಯಿ ಟೀವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ.
ತನ್ನ ಕೈಯಾರೆ ಸಿಧುವನ್ನು ಕೊಂದಿದ್ದೇನೆ. ಆತ ನನ್ನ ತಮ್ಮ ವಿಕ್ರಮ್ಜಿತ್ ಸಿಂಗ್ ಮಿಡ್ಡುಖೇರಾ ಹತ್ಯೆ ಮಾಡಿಸಿದ್ದಾನೆ. ಅದಕ್ಕೆ ನಾವು ಹೀಗೆ ಮಾಡಬೇಕಾಯಿತು ಎಂದು ಸಚಿನ್ ನೇರವಾಗಿ ಹೇಳಿಕೊಂಡಿದ್ದಾನೆ. ಅಕಾಲಿದಳದ ನಾಯಕ ಮಿಡ್ಡುಖೇರಾನನ್ನು 2021 ಆಗಸ್ಟ್ನಲ್ಲಿ ಮೊಹಾಲಿಯಲ್ಲಿ ಕೊಲ್ಲಲಾಗಿತ್ತು.
ಕಾರಾಗೃಹದಲ್ಲಿ ಗಲಾಟೆ
ಸಿಧು ಹತ್ಯೆಯಿಂದ ಪಂಜಾಬ್ನ ಫಿರೋಜ್ಪುರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಭಾರೀ ಸಂಘರ್ಷ ನಡೆದಿದೆ. ನಾಲ್ಕು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ನಾಲ್ವರನ್ನು ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಿಧು ಸಾವಿಗೆ ಒಂದು ಸಂತಾಪ ಸೂಚಿಸುತ್ತಿದ್ದಾಗ, ಇನ್ನೊಂದು ಗುಂಪು ಅದನ್ನು ವಿರೋಧಿಸಿದ್ದೇ ಈ ಘರ್ಷಣೆಗೆ ಕಾರಣ ಎನ್ನಲಾಗಿದೆ.
ಸಿಧು ಮನೆಗೆ ಭೇಟಿ ನೀಡಿದ ಪಂಜಾಬ್ ಸಿಎಂ
ಪಂಜಾಬ್ನ ನೂತನ ಮುಖ್ಯಮಂತ್ರಿ, ಆಮ್ ಆದ್ಮಿಪಕ್ಷದ ಭಗವಂತ್ ಮಾನ್ ಮಾನ್ಸಾ ಜಿಲ್ಲೆಯ ಮೂಸಾದಲ್ಲಿರುವ ಸಿಧು ಮನೆಗೆ ಭೇಟಿ ನೀಡಿದ್ದಾರೆ. ಜನರ ಪ್ರತಿಭಟನೆಯ ನಡುವೆಯೂ ಪೊಲೀಸರ ಬಿಗಿಭದ್ರತೆಯಲ್ಲಿ ಭಗವಂತ್, ಸಿಧು ಮನೆ ಪ್ರವೇಶಿಸಿ ಅವರ ಪೋಷಕರೊಂದಿಗೆ ಮಾತುಕತೆಯಾಡಿದರು. ಒಟ್ಟಾರೆ ಒಂದು ಗಂಟೆ ಸಿಧು ಮನೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!
Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!
Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ
ಇಂದು ಮಹಾರಾಷ್ಟ್ರಕ್ಕೆ ಪ್ರಧಾನಿ:ಪಿಎಂ-ಕಿಸಾನ್ ನಿಧಿ ವರ್ಗಾವಣೆ
Apple New Shop; ಬೆಂಗಳೂರು ಸೇರಿ 4 ನಗರದಲ್ಲಿ ಮಳಿಗೆ: ಆ್ಯಪಲ್ ಘೋಷಣೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!
Sanatana Dharma Warning: ಆಂಧ್ರ, ತಮಿಳುನಾಡು ಡಿಸಿಎಂಗಳ ನಡುವೆ ಸನಾತನ ಜಟಾಪಟಿ!
Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ
Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್ ಪುನಾರಂಭ.. ಡಿ.28ಕ್ಕೆ ಕೂಟ ಶುರು
Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.