49,000 ಎಕರೆ ಜಾಗ ತುಂಬಿದ ಒಂದೇ ಗಿಡ! ಇದು ವಿಶ್ವದ ಅತಿ ವಿಶಾಲವಾದ ಸಸ್ಯ
Team Udayavani, Jun 5, 2022, 7:15 AM IST
ಕೆನ್ಬೆರ್ರಾ: ಒಂದು ಗಿಡ ಎಷ್ಟು ವಿಸ್ತಾರವಾಗಿ ಬೆಳೆಯಬಹುದು? 1 ಕಿ.ಮೀ ಅಥವಾ 2 ಕಿ.ಮೀ ಎಂದು ನೀವು ಲೆಕ್ಕ ಹಾಕಬಹುದು. ಆದರೆ ಆಸ್ಟ್ರೇಲಿಯಾದ ಸಮುದ್ರದ ಅಡಿಯಲ್ಲಿರುವ ಈ ಸಸ್ಯ ಬೆಳೆದಿರುವುದು ಬರೋಬ್ಬರಿ 180ಕಿ.ಮೀ. ವಿಸ್ತಾರದಷ್ಟು!
20,000 ಹೆಕ್ಟೇರ್(49,400 ಎಕರೆ) ಜಾಗದಷ್ಟು ವಿಸ್ತಾರವಾಗಿದೆ ಈ ಹುಲ್ಲು.
ಹೌದು. ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿರುವ “ಶಾರ್ಕ್ ಬೇ’ನ ಸಮುದ್ರದಡಿಯಲ್ಲಿ ರಿಬ್ಬನ್ ವೀಡ್ (ಪೊಸಿಡೋನಿಯಾ ಆಸ್ಟ್ರೇಲಿಸ್) ಹೆಸರಿನ ಹುಲ್ಲು ಇಷ್ಟೊಂದು ವಿಸ್ತಾರವಾಗಿ ಹರಡಿಕೊಂಡಿದೆ.
ಈ ಸಸ್ಯದ ಬಗ್ಗೆ ಫ್ಲಿಂಡರ್ಸ್ ವಿಶ್ವವಿದ್ಯಾಲಯ ಮತ್ತು ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಸಂಶೋಧನೆ ಮಾಡಿದ್ದು, ಅನೇಕ ಸತ್ಯಾಂಶಗಳನ್ನು ಹೊರತೆಗೆದಿದ್ದಾರೆ.
ಅಂದ ಹಾಗೆ ಈ ಹುಲ್ಲಿಗೆ ಬರೋಬ್ಬರಿ 4,500 ವರ್ಷ ವಯಸ್ಸಾಗಿದೆಯಂತೆ. ಇದೇ ಜಾತಿಯ ಬೇರೆ ಹುಲ್ಲಿನಲ್ಲಿರುವ ಕ್ರೋಮೋಜೋಮ್ಗೆ ಹೋಲಿಸಿದರೆ ಇದರಲ್ಲಿರುವ ಕ್ರೋಮೋಜೋಮ್ ಎರಡು ಪಟ್ಟಿದೆ. ಎಲ್ಲ ಸಸ್ಯಗಳು ತನ್ನ ಎರಡೂ ಪೋಷಕರಿಂದ ತಲಾ ಶೇ.50 ಜಿನೋಮ್ ತೆಗೆದುಕೊಂಡು ಬೇಳೆದರೆ, ಈ ಸಸಿ ಒಂದೇ ಪೋಷಕರಿಂದ ಶೇ.100 ಜಿನೋಮ್ ಪಡೆದಿದೆ.
180 ಕಿ.ಮೀ.ನಷ್ಟು ವಿಸ್ತಾರವಾಗಿ ಹರಡಿಕೊಂಡಿದ್ದ ಹುಲ್ಲಿನ ಹಲವು ಭಾಗಗಳನ್ನು ತೆಗೆದುಕೊಂಡು ಬಂದು ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ಈ ಪೂರ್ತಿ ಹುಲ್ಲು ಒಂದೇ ಸಸ್ಯ ಎನ್ನುವುದು ತಿಳಿದುಬಂದಿದೆ. ಪ್ರತಿ ವರ್ಷ ಈ ಹುಲ್ಲು 35 ಸೆಂ.ಮೀ.ನಷ್ಟು ವಿಸ್ತಾರ ಹೆಚ್ಚಿಸಿಕೊಳ್ಳುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಪಯೋಗವೇನು?
ಸಮುದ್ರದಡಿಯಲ್ಲಿರುವ ಹುಲ್ಲಿನಿಂದ ನಮಗೇನು ಲಾಭ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಈ ಹುಲ್ಲಿನಿಂದಾಗಿ ಮನುಕುಲಕ್ಕೆ ಸಾಕಷ್ಟು ಒಳಿತಿದೆ. ಈ ಹುಲ್ಲಿನಿಂದಾಗಿ ಕರಾವಳಿ ಭಾಗದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಹಾಗೆಯೇ ಈ ಹುಲ್ಲು ಇಂಗಾಲದ ಡೈ ಆಕ್ಸೆ„ಡ್ ಹೀರಿಕೊಂಡು ಗಾಳಿಯನ್ನು ಶುದ್ಧವಾಗಿಸುವುದರ ಜತೆ ನೀರನ್ನೂ ಶುದ್ಧವಾಗಿಡುತ್ತದೆ ಎಂದಿದ್ದಾರೆ ಸಂಶೋಧಕರು.
ಅತಿ ವಿಶಾಲವಾದ ಸಸ್ಯಗಳು
ರಿಬ್ಬನ್ ವೀಡ್- 49,400 ಎಕರೆ ವಿಸ್ತೀರ್ಣ
ವಿಶ್ವದ ಅತ್ಯಂತ ವಿಸ್ತಾರದ ಸಸ್ಯ
ಕ್ಲೋನಲ್ ಕಾಲೊನಿ-107 ಎಕರೆ ವಿಸ್ತೀರ್ಣ
ವಿಶ್ವದ 2ನೇ ಅತಿ ದೊಡ್ಡ ವಿಸ್ತಾರದ ಮರ
ದಿ ಗ್ರೇಟ್ ಬನ್ಯಾನ್-3.48 ಎಕರೆ ವಿಸ್ತೀರ್ಣ
ಭಾರತದ ಅತಿ ಹೆಚ್ಚು ವಿಸ್ತಾರದ ಮರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ
Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ
Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ
Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!
Pakistan; ಬಲೂಚ್ನಲ್ಲಿ 7 ಕಾರ್ಮಿಕರ ಗುಂಡಿಟ್ಟು ಹ*ತ್ಯೆ ಮಾಡಿದ ಉಗ್ರರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.