ಭಾರತೀಯ ಸಂಸ್ಕೃತಿಯನ್ನು ವಾಸವಿ ಸಂಘ ಉಳಿಸುತ್ತಿದೆ: ಕನ್ನಿಕಾ ಪರಮೇಶ್ವರ್
Team Udayavani, Jun 4, 2022, 6:05 PM IST
ಕೊರಟಗೆರೆ: ಭಾರತೀಯ ಸಂಸ್ಕೃತಿ ಪರಂಪರೆ ವಿಶ್ವದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು ಅದನ್ನು ವಾಸವಿ ಸಂಘವು ಉಳಿಸಿಕೊಂಡು ಹೋಗುತ್ತಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರರವರ ಪತ್ನಿ ಕನ್ನಿಕಾ ಪರಮೇಶ್ವರ್ ತಿಳಿಸಿದರು.
ಕನ್ನಿಕಾ ಮಹಲ್ನಲ್ಲಿ ತಾಲೂಕು ಆರ್ಯವೈಶ್ಯ ಮಂಡಲಿ ವತಿಯಿಂದ ನಡೆದ ಶ್ರೀ ಕನ್ನಿಕಾಪರಮೇಶ್ವರಿ ಪ್ರತಿಪ್ಠಾಪನಾ ೫೦ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಾಸಕರಾದ ಡಾ.ಜಿ.ಪರಮೇಶ್ವರರವರು ಬರಬೇಕಿತ್ತು ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರುವುದರಿಂದ ಅವರ ಪ್ರತಿನಿಧಿಯಾಗಿ ನಾನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ, ವಾಸವಿ ಮಹಿಳಾ ಸಂಘವು ಸನಾತನ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದೆ, ಹೆಣ್ಣು ಮಕ್ಕಳಿಗೆ ಬಾಗಿನ ಅರ್ಪಿಸುವ ಕಾರ್ಯ ಹಿಂದು ಸಂಸ್ಕೃತಿಯಲ್ಲಿ ಸ್ತ್ರೀ ಯರಿಗೆ ನೀಡುವ ಗೌರವವಾಗಿದೆ, ಇದಕ್ಕೆ ಜಾತಿ ಮತ ಭೇದವಿರುವುದಿಲ್ಲ ನನಗೂ ಈ ಶಾಸ್ತ್ರವನ್ನು ಸಂಘವು ಮಾಡಿರುವುದು ಅತೀವ ಸಂತಸವಾಗಿದೆ, ಈ ಧಾರ್ಮಿಕ ದೇವತಾ ಕಾರ್ಯದಿಂದ ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಆರ್ಯವೈಶ್ಯ ಜನಾಂಗದ ವಿಯಟ್ನಾಂ ದೇಶದ ರಾಯಭಾರಿ ಶ್ರೀನಿವಾಸಮೂರ್ತಿ ಮಾತನಾಡಿ ರಾಜ್ಯದಲ್ಲಿ ಆರ್ಯ ವೈಶ್ಯ ಮಹಾಸಭಾ ಜನಾಂಗದ ಬಡ ಮಕ್ಕಳಿಗೆ ಸಾಕಷ್ಟು ಉತ್ತಮ ಕೆಲಸ ಮಾಡುತ್ತಿದೆ, ಆರ್ಯ ವೈಶ್ಯರು ಶ್ರಮವಹಿಸಿ ದುಡಿಯುತ್ತಿದ್ದು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ ಇದರೊಂದಗೆ ಸಮಾಜದಲ್ಲಿ ಸಾಕಷ್ಟು ಸೇವೆಗಳನ್ನು ಧಾನಗಳನ್ನು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅದ್ಯಕ್ಷರಾಗಿ ಮಂಡಲಿಯ ತಾಲೂಕು ಪ್ರದಾನ ಕಾರ್ಯದರ್ಶಿ ಚಿನ್ನಿವೆಂಕಟಾಶಟ್ಟಿ ವಹಿಸಿದ್ದರು ಕಾರ್ಯಕ್ರದಲ್ಲಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ನಿರ್ದೆಶಕ ಸಂಪಂಗಿ ಕೃಷ್ಣಯ್ಯಶಟ್ಟಿ, ವೈಶ್ಯಕೋಪರೇಟಿವ್ ಸೊಸೈಟಿ ಉಪಾದ್ಯಕ್ಷ ನಾಗೇಂದ್ರಬಾಬು, ಪ.ಪಂ ಸದಸ್ಯ ಪ್ರದೀಪ್ಕುಮಾರ್, ಸುವರ್ಣ ಮಹೋತ್ಸವದ ಅದ್ಯಕ್ಷ ಎಂ.ಜಿ. ಸುಧೀರ್, ಮುಖಂಡರುಗಳಾದ ಶ್ರೀನಿವಾಸಶಟ್ಟಿ, ಬದ್ರಿಪ್ರಸಾದ್, ಅಶೋಕ್, ನಂಜುಂಡ ಶಟ್ಟಿ, ನರೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.