![1-prayag](https://www.udayavani.com/wp-content/uploads/2025/02/1-prayag-415x248.jpg)
![1-prayag](https://www.udayavani.com/wp-content/uploads/2025/02/1-prayag-415x248.jpg)
Team Udayavani, Jun 5, 2022, 7:14 PM IST
ಮಾಲ್ಡಾ: “ನಾವು ಬಡಿಗೆಗಳಿಂದ ಪಂಚಾಯತಿಯನ್ನು ವಶಪಡಿಸಿಕೊಳ್ಳಬೇಕಾಗುತ್ತದೆ, ಆದಿವಾಸಿಗಳು, ರಾಜಬಂಷಿಗಳು, ಮಹಿಳೆಯರು ಪೊರಕೆ-ಕೊಡಲಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಟಿಎಂಸಿ ಗೂಂಡಾಗಳು ಮತಗಳನ್ನು ಲೂಟಿ ಮಾಡಲು ಬಂದರೆ, ನೀವು ಅವರನ್ನು ಹೊರಹಾಕಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವಿವಾದಕ್ಕೆ ಗುರಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ , ಬಿಜೆಪಿಯವರು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದೆ. ಸಿಬಿಐ ಇದನ್ನು ನೋಡುವುದಿಲ್ಲವೇ? ಎಂದು ತೃಣಮೂಲ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮುಂದಿನ ವರ್ಷ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು,ಮಾಲ್ಡಾದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಸುಕಾಂತ, ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲವನ್ನು ಬೇರು ಸಮೇತ ಕಿತ್ತೊಗೆಯುವಂತೆ ಕರೆ ನೀಡಿದರು. ‘ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕು, ಕೇಂದ್ರ ಕಳುಹಿಸುವ ಸಾರ್ವಜನಿಕ ಕಲ್ಯಾಣದ ಹಣವನ್ನು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ, ಟಿಎಂಸಿಯನ್ನು ಬಂಗಾಳದಿಂದ ಓಡಿಸಬೇಕು’ ಎಂದಿದ್ದರು.
You seem to have an Ad Blocker on.
To continue reading, please turn it off or whitelist Udayavani.