76 ಸಾವಿರ ಕೋ.ರೂ.ಗಳ ಯುದ್ಧ ಸಲಕರಣೆ; ರಕ್ಷಣ ಸಚಿವರ ಅಧ್ಯಕ್ಷತೆಯ ಡಿಎಸಿ ವತಿಯಿಂದ ಸಮ್ಮತಿ
Team Udayavani, Jun 7, 2022, 12:19 AM IST
ಹೊಸದಿಲ್ಲಿ: “ಆತ್ಮನಿರ್ಭರ ಭಾರತ’ ಪರಿ ಕಲ್ಪನೆಯಡಿ ಭಾರತೀಯ ಸೇನಾ ಪಡೆಗಳ ಆಧುನೀಕರಣಕ್ಕಾಗಿ ಸಲ್ಲಿಸಲಾಗಿದ್ದ 76 ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗೆ ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣ ಸಾಮಗ್ರಿ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆಯಲ್ಲಿ, ಭಾರತೀಯ ನೌಕಾಪಡೆಗೆ
ಯುದ್ಧ ಹಡಗುಗಳನ್ನು ಪೂರೈಸುವ ಯೋಜನೆಯೂ ಸೇರಿದೆ.
ಈ ಒಪ್ಪಿಗೆಯಿಂದಾಗಿ, ಯುದ್ಧ ಸಾಮಗ್ರಿ ಗಳಿಗಾಗಿ ಭಾರತ, ವಿದೇಶಗಳ ಮೇಲೆ ಅವಲಂಬಿತವಾಗುವುದು ತಪ್ಪಲಿದೆ ಎಂದು ಮೂಲಗಳು ತಿಳಿಸಿವೆ.
ಯಾವ್ಯಾವುದಕ್ಕೆ ಒಪ್ಪಿಗೆ?
ರಫ್ ಟರೈನ್ ಫೋರ್ಕ್ ಲಿಫ್ಟ್ ಟ್ರಕ್ಗಳು (ಆರ್ಟಿಎಫ್ಎಲ್ಟಿ), ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ಗಳು (ಬಿಎಲ್ಟಿ), ವ್ಹೀಲ್ಡ್ ಆರ್ಮರ್ಡ್ ಫೈಟಿಂಗ್ ಟ್ರಕ್ಗಳು (ಡಬ್ಲ್ಯುಎಚ್ ಎಎಫ್ವಿ), ಆ್ಯಂಟಿ- ಟ್ಯಾಂಕ್ಡ್ ಗೈಡೆಡ್ ಕ್ಷಿಪಣಿಗಳು (ಎಟಿಜಿಎಂ), ವೆಪನ್ ಲೊಕೇಟಿಂಗ್ ರೇಡಾರ್ಗಳನ್ನು (ಡಬ್ಲ್ಯುಎಲ್ಆರ್) ಭಾರತೀಯ ಸೇನೆಗಾಗಿ ದೇಶೀಯ ಕಂಪೆನಿಗಳಿಂದ ಕೊಳ್ಳಲು ಪ್ರಸ್ತಾವನೆ.
ಭಾರತೀಯ ನೌಕಾಪಡೆಗೆ ಮುಂದಿನ ತಲೆಮಾರಿನ ಯುದ್ಧ ನೌಕೆಗಳನ್ನು (ಎನ್ಜಿಸಿ) 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ. ಅದರ ಜತೆಗೆ ಕಣ್ಗಾವಲಿಗೆ, ಭದ್ರತಾ ಕಾರ್ಯಾಚರಣೆಗೆ, ಸಫೇìಸ್ ಆ್ಯಕ್ಷನ್ ಗ್ರೂಪ್ಗೆ (ಎನ್ಎಜಿ), ಸರ್ಚ್ ಆ್ಯಂಡ್ ಅಟ್ಯಾಕ್ಗೆ, ಕೋಸ್ಟಲ್ ಡಿಫೆನ್ಸ್ಗಾಗಿ ಬೇಕಿರುವ ಸಲಕರಣೆಗಳು.
ಕೇಂದ್ರ ಸರಕಾರದ ನವರತ್ನ ಕಂಪೆನಿಗಳಲ್ಲೊಂದಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವತಿಯಿಂದ ಡೋರ್ನಿಯರ್ ಹಾಗೂ ಸುಖೋಯ್ ಯುದ್ಧ ವಿಮಾನಗಳಿಗಾಗಿ ಎಂಜಿನ್ ತಯಾರಿಕ ಯೋಜನೆ.
ರಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ, ಭೇದಿಸಲು ಅಸಾಧ್ಯವಾದ ಡಿಜಿಟಲ್ ತಂತ್ರಜ್ಞಾನದ ಚೌಕಟ್ಟಿನೊಳಗೆ ತರುವ ಡಿಜಿಟಲ್ ಕೋಸ್ಟ್ ಗಾರ್ಡ್ ಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ
Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ…
Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್ರಾಜ್ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್?
Muslims; ಹಿಮಾಚಲ ಸೇಬು ಬಹಿಷ್ಕರಿಸಿ: ಒವೈಸಿ ಪಕ್ಷದ ನಾಯಕನ ವಿವಾದ
Love; ಒಟ್ಟಿಗಿರಲು ಭಿಕ್ಷುಕನನ್ನು ಸುಟ್ಟು ಪ್ರೇಮಿಗಳ ನಾಟಕ!!: 27 ವರ್ಷದ ಯುವತಿ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Murphy: ʼಮರ್ಫಿʼಗೆ ಸಾಥ್ ನೀಡಿದ ನಟಿಮಣಿಯರು
UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ
Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ
Women’s T20 World Cup: ಆಸೀಸ್ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ
Hunasuru: ಜ್ವರಕ್ಕೆ ಮದ್ದು ತರಲು ಹೋಗುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ, ಬಾಲಕಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.