ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಗೆ ಆದೇಶ ನೀಡಿದ್ದ ವಾರಾಣಸಿ ಜಡ್ಜ್ ಗೆ ಬೆದರಿಕೆ ಪತ್ರ

ಡೆಪ್ಯುಟಿ ಕಮಿಷನರ್ ವರುಣಾ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Team Udayavani, Jun 8, 2022, 4:42 PM IST

ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಗೆ ಆದೇಶ ನೀಡಿದ್ದ ವಾರಾಣಸಿ ಜಡ್ಜ್ ಗೆ ಬೆದರಿಕೆ ಪತ್ರ

ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಕೈಬರಹದ ಪತ್ರ ಬಂದಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿ ಕಳಿಸಿದ್ದಾರೆ, ಮುಂದೆ ಕರ್ನಾಟಕದಲ್ಲಿ ಲಂಗೋಟಿ ಸರದಿ : ಆರಗ

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ವಾರಾಣಸಿ ಪೊಲೀಸ್ ಕಮಿಷನರ್ ಗೆ ಬರೆದ ಪತ್ರದಲ್ಲಿ, ತನಗೆ ಇಸ್ಲಾಮಿಕ್ ಅಗಾಝ್ ಚಳವಳಿಯ ಪರವಾಗಿ ಕಾಶಿಫ್ ಅಹ್ಮದ್ ಸಿದ್ಧಿಖಿ ಎಂಬಾತ ಬೆದರಿಕೆ ಪತ್ರ ಬರೆದಿದ್ದು, ಅದನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿರುವುದಾಗಿ ವಿವರಿಸಿದ್ದಾರೆ. ಈ ಬಗ್ಗೆ ವಾರಾಣಸಿ ಪೊಲೀಸ್ ಕಮಿಷನರ್ ಸತೀಶ್ ಗಣೇಶ್ ಖಚಿತಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಡೆಪ್ಯುಟಿ ಕಮಿಷನರ್ ವರುಣಾ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಗೆ ಒಟ್ಟು ಒಂಬತ್ತು ಪೊಲೀಸ್ ಸಿಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಸತೀಶ್ ಗಣೇಶ್ ತಿಳಿಸಿದ್ದಾರೆ.

ಜಡ್ಜ್ ಗೆ ಬರೆದ ಪತ್ರದಲ್ಲಿ, ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಪರಿಶೀಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ನೀವು ಹೇಳಿಕೆ ನೀಡಿದ್ದೀರಿ. ನೀವು ವಿಗ್ರಹ ಆರಾಧಕರು, ನೀವು ಮಸೀದಿಯನ್ನು ಮಂದಿರ ಎಂದು ಘೋಷಿಸುತ್ತೀರಿ. ಕಾಫಿರ್..ಮೂರ್ತಿ ಪೂಜಕ ಹಿಂದೂ ನ್ಯಾಯಾಧೀಶರಿಂದ ಸೂಕ್ತ ನ್ಯಾಯವನ್ನು ಯಾವೊಬ್ಬ ಮುಸಲ್ಮಾನರೂ ನಿರೀಕ್ಷಿಸುವುದಿಲ್ಲ..ಇದಕ್ಕೆ ತಕ್ಕ ಬೆಲೆ ತೆರಬೇಕಾಗಲಿದೆ ಎಂದು” ಉಲ್ಲೇಖಿಸಲಾಗಿದೆ.

ಟಾಪ್ ನ್ಯೂಸ್

fishermen

Banned ಮೀನುಗಾರಿಕೆ ಈಗಲೂ ಸಕ್ರಿಯ

TRAIN-Acci

Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Omar-Abdulla-Run

CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್‌!

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

CHandrababu-Naidu

Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್‌!

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TRAIN-Acci

Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!

Omar-Abdulla-Run

CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್‌!

CHandrababu-Naidu

Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್‌!

Accident-logo

Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!

Kashi

Foundation: ಕಾಶಿಯಲ್ಲಿ ದೀಪಾವಳಿ ಮುನ್ನ ಅಭಿವೃದ್ಧಿ ಹಬ್ಬ: ಪ್ರಧಾನಿ ನರೇಂದ್ರ ಮೋದಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

fishermen

Banned ಮೀನುಗಾರಿಕೆ ಈಗಲೂ ಸಕ್ರಿಯ

TRAIN-Acci

Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Omar-Abdulla-Run

CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್‌!

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.