ಹತ್ಯೆಯಾದ ದಲಿತನ ಕುಟುಂಬಕ್ಕೆ ಸರ್ಕಾರಿ ಹುದ್ದೆ
Team Udayavani, Jun 9, 2022, 10:25 AM IST
ವಾಡಿ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಆಕೆಯ ಸಹೋದರನಿಂದಲೇ ಕೊಲೆಯಾಗಿದ್ದ ಇಲ್ಲಿನ ಭೀಮನಗರ ಬಡಾವಣೆಯ ದಲಿತ ಯುವಕ ವಿಜಯ ಕಾಂಬಳೆ ಮನೆ ಬಾಗಿಲಿಗೆ ಸರ್ಕಾರಿ ನೌಕರಿ ಹುಡುಕಿ ಬಂದಿದ್ದು, ನೌಕರಿ ಪಡೆಯ ಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ ತಾಯಿ ಮತ್ತು ಮಗಳು.
ರಾಜೇಶ್ವರಿ ಸುರೇಶ ಕಾಂಬಳೆಗೆ ಹತ್ಯೆಯಾದ ವಿಜಯ ಕಾಂಬಳೆ ಹೊರತಾಗಿ ಇಬ್ಬರು ಹೆಣ್ಣುಮಕ್ಕಳು. ಪುತ್ರಿಯರನ್ನು ಗುಜರಾತ್ ಮೂಲದವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿರುವ ಅವರಿಗೆ ಮಗನ ಹತ್ಯೆ ಬಳಿಕ ಬದುಕಿನ ಚಿಂತೆ. ಈಗಾಗಲೇ 4.12 ಲಕ್ಷ ರೂ. ಪರಿಹಾರ ಸಿಕ್ಕಿದೆ. ವಸತಿ ಸೌಲಭ್ಯ ಹಾಗೂ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಲಾಗಿತ್ತು. ಅಂತೆಯೇ ಮನೆ ಬಾಗಿಲಿಗೆ ಸರ್ಕಾರಿ ನೌಕರಿ ಹುಡುಕಿಕೊಂಡು ಬಂದಿದೆ.
ಅದರೆ ಅದಕ್ಕೆ ಬೇಕಾದ ಅರ್ಹ ವಯಸ್ಸು ಮೀರಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬುಧವಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಜೆ.ಕೆ.ರಶ್ಮಿ ಅವರು ಮನೆಯಲ್ಲಿದ್ದ ರಾಜೇಶ್ವರಿ ಮತ್ತು ಪುತ್ರಿ ಜತೆ ಮಾತುಕತೆ ನಡೆಸಿದರು.
ಇರಲು ಮನೆ ಸಮಸ್ಯೆಯಿದ್ದರೆ ಸರ್ಕಾರದಿಂದ ಮನೆ ನಿರ್ಮಿಸಿ ಕೊಡುವವರೆಗೂ ಸ್ಥಳೀಯ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಊಟ, ವಸತಿಯ ವ್ಯವಸ್ಥೆ ಮಾಡುತ್ತೇವೆ. ಬದುಕಿನ ಆಸರೆಗಾಗಿ ಸರ್ಕಾರಿ ಕೆಲಸ ನೀಡಬೇಕೆಂದರೆ ನಿಗದಿತ ವಯಸ್ಸು ಮೀರಿದೆ. ಹೀಗಾಗಿ ಮಗಳಿಗೆ ನೌಕರಿ ನೀಡಲು ಅವಕಾಶವಿದೆ ಎಂಬ ಅಭಿಪ್ರಾಯ ಮುಂದಿಟ್ಟರು.
ಅಧಿಕಾರಿಗಳು ನೀಡಲು ಬಂದ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಒಪ್ಪಿಗೆ ನೀಡಲಾಗದೇ ಮತ್ತು ತಿರಸ್ಕರಿಸಲೂ ಸಾಧ್ಯವಾಗದೇ ತಾಯಿ-ಮಗಳು ಗೊಂದಲಕ್ಕೀಡಾದ ಪ್ರಸಂಗ ಕಂಡು ಬಂತು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ್ವರಿ ಮಗಳು, ನನ್ನ ತಾಯಿ ಒಬ್ಬಳನ್ನೇ ವಸತಿ ನಿಲಯದಲ್ಲಿರಲು ಬಿಡುವುದಿಲ್ಲ. ಗುಜರಾತ್ಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡುತ್ತೇನೆ ಎಂದರೆ, ಮತ್ತೂಮ್ಮೆ ಸರ್ಕಾರಿ ಹುದ್ದೆ ಸ್ವೀಕರಿಸಲು ಪತಿಯ ಮನೆಯವರಿಂದ ಒಪ್ಪಿಗೆ ಪಡೆದ ಬಳಿಕ ತೀರ್ಮಾನ ತಿಳಿಸುತ್ತೇನೆ ಎಂದಳು.
ಆದಷ್ಟು ಬೇಗ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ ಅಧಿಕಾರಿ ರಶ್ಮಿ, ಮನೆ ಬಾಗಿಲಿಗೆ ಬಂದಿರುವ ಹುದ್ದೆಯನ್ನು ತಿರಸ್ಕರಿಸದೇ ಸಿಕ್ಕಿರುವ ಅವಕಾಶ ಒಪ್ಪಿಕೊಂಡರೆ ಉತ್ತಮ ಜೀವನ ನಡೆಸಬಹುದು. ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿದರು.
ತಾಪಂ ಇಒ ನೀಲಗಂಗಾ ಬಬಲಾದ, ಪುರಸಭೆ ಕಿರಿಯ ಆರೋಗ್ಯ ನೈರ್ಮಲ್ಯಾಧಿಕಾರಿ ಬಸವರಾಜ ಪೂಜಾರಿ, ದಲಿತ ಮುಖಂಡರಾದ ಶ್ರವಣಕುಮಾರ ಮೊಸಲಗಿ, ಸಂದೀಪ ಕಟ್ಟಿ, ಸಂತೋಷ ಒಡೆಯರ, ಕ್ರೈಂ ಪಿಎಸ್ಐ ಶಿವಕಾಂತ ಕಮಲಾಪುರ, ಎಎಸ್ಐ ಚೆನ್ನಮಲ್ಲಪ್ಪಗೌಡ ಪಾಟೀಲ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Recipe: ಫಾಸ್ಟ್ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.