ಸನಾತನ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿ: ಕುಂ.ವೀರಭದ್ರಪ್ಪ
Team Udayavani, Jun 12, 2022, 6:52 PM IST
ಗಂಗಾವತಿ: ಸನಾತನಿಗಳ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿಯಾಗಿದೆ. ಇತಿಹಾಸ ತಿರುಚುವ ಕೆಲಸವಾಗುತ್ತಿದೆ. ಪಠ್ಯರಚನಾ ಸಮಿತಿ ಅಧ್ಯಕ್ಷನಿಗೆ ಕನ್ನಡ ನಾಡಿನ ಇತಿಹಾಸ ಗೊತ್ತಿಲ್ಲ ಎಂದು ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಹೇಳಿದರು.
ಅವರು ನಗರದ ಲಯನ್ಸ್ ಕ್ಲಬ್ ಭವನದಲ್ಲಿ ಶಿಕ್ಷಕ ಛತ್ರಪ್ಪ ತಂಬೂರಿ ಬರೆದ “ದೂರದಲ್ಲಿ ತೀರವಿದೆ” ಕವನ ಸಂಕಲ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನ್ನಡ ನಾಡು ಶಾಂತಿಯ ಹೂದೋಟ. ಇಲ್ಲಿ ಅನೇಕ ಧರ್ಮ, ಜಾತಿ, ಭಾಷೆಯನ್ನಾಡುವ ಜನರಿದ್ದಾರೆ. ರಾಜ್ಯ ಸರಕಾರ ಇತಿಹಾಸ ಗೊತ್ತಿಲ್ಲ. ವ್ಯಕ್ತಿಗೆ ಪಠ್ಯ ರಚನಾ ಸಮಿತಿ ಅಧ್ಯಕ್ಷ ಸ್ಥಾನ ನೀಡಿ, ಮಹರ್ಷಿ ವಾಲ್ಮೀಕಿ, ಕನಕದಾಸ, ಕುವೆಂಪು, ಸಂಗೊಳ್ಳಿ ರಾಯಣ್ಣ ಸೇರಿ ಪ್ರಮುಖ ಖ್ಯಾತ ಕವಿಗಳು, ಇತಿಹಾಸಕಾರರನ್ನು ಅವಮಾನಿಸುವಂತೆ ಪಠ್ಯ ರಚನೆ ಮಾಡಲಾಗಿದೆ. ಮಕ್ಕಳ ತಲೆಯಲ್ಲಿ ವೈಚಾರಿಕತೆ ತುಂಬದೇ ಅಜ್ಞಾನ ಮೂಡನಂಬಿಕೆಗಳ ಸುತ್ತ ಪಠ್ಯ ರಚನೆ ಮಾಡಲಾಗಿದೆ. ರಾಜ್ಯದಲ್ಲಿ ಪಠ್ಯ ರಚನೆ ಕುರಿತು ಆಕ್ಷೇವಿದ್ದು ರಾಜ್ಯದಾದ್ಯಂತ ಹೋರಾಟಗಳು ನಿರಂತರವಾಗಿದ್ದು ನೂತನ ಪಠ್ಯ ಪುಸ್ತಕಗಳ ಕುರಿತು ಸರಕಾರ ಸ್ಪಷ್ಟನೆ ನೀಡುವ ಮೊದಲೇ ಪಠ್ಯಪುಸ್ತಕ ಮುದ್ರಿಸಿ ಶಾಲೆಗಳಿಗೆ ಕಳಿಸಲಾಗುತ್ತಿದೆ. ಹೆದ್ದಾರಿಯ ಲೇಖಕರಾಗದೇ ಪಳಹಾದಿಯ ಬರಹಗಾರರಾಗಬೇಕು. ಸಾಮಾಜದಲ್ಲಿ ನಡೆಯುವ ಸಂಘಟನೆಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಲೇಖಕನಾದನು ಹೆದರದೇ ಪ್ರಶ್ನಿಸುವ ವ್ಯಕ್ತಿಯಾಗಬೇಕು. ಸುರಕ್ಷಿತ ವಲಯದಲ್ಲಿದ್ದು ಪ್ರಶಸ್ತಿಗಾಗಿ ಬರವಣಿಗೆ ಕಾರ್ಯ ನಡೆಸಬಾರದು. ಆಳುವ ಸರಕಾರವನ್ನು ಪ್ರಶ್ನಿಸುವ ಲೇಖಕರಿಂದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.
ಇದನ್ನೂ ಓದಿ: ಬೆದರಿಕೆ ಕರೆ ಮತ್ತು ಪತ್ರಗಳಿಗೆ ಹೆದರುವುದಿಲ್ಲ:ಕುಂ.ವೀರಭದ್ರಪ್ಪ
ಮಾತೃ ಭಾಷೆಯಲ್ಲಿ ಮಕ್ಕಳನ್ನು ಓದಿಸಿದರೆ ಅವರಿಂದ ವಾತ್ಸಲ್ಯ ಹಾಗೂ ಗೌರವ ಪ್ರತಿಗಳು ಲಭಿಸುತ್ತವೆ. ಕಾನ್ವೆಂಟ್ ಶಾಲೆಯಲ್ಲಿ ಓದಿದವರಿಗೆ ಪ್ರೀತಿ ವಾತ್ಸಲ್ಯಗಳ ಕುರಿತು ಅರಿವು ಇರುವುದಿಲ್ಲ. ಕವಿ ಅಥವಾ ಲೇಖಕನಾಗುವವರು ಕನ್ನಡ ಸಾಹಿತಿದ ನಿರಂತರ ಅಧ್ಯಾಯನ ಮಾಡಬೇಕು. ರನ್ನ, ಪಂಪ, ರಾಘವಾಂಕ, ಹರಿಹರ ಸೇರಿ ಹಳೆಹನ್ನಡ ನಡುಗನ್ನಡ, ಹೊಸಗನ್ನಡ ಸೇರಿ ಆಧುನೀಕ ಸಾಹಿತ್ಯ ಕೃತಿಗಳ ಅಧ್ಯಾಯನದಿಂದ ಬರೆಯಲು ವಿಷಯಗಳು ದೊರಕುತ್ತದೆ. ನೈಜತೆಯಿಂದ ಬರಹ ಮಾಡಿ ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರಬೇಕೆಂದರು.
ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಶಿಕ್ಷಕ ಹಾಗೂ ಲೇಖಕ ಛತ್ರಪ್ಪ ತಂಬೂರಿ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ, ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಎನ್ಪಿಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ನಾಗನಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಂ.ಅಭಿಷೇಕ, ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ, ಬಿಇಒ ಸೋಮಶೇಕರಗೌಡ, ಸಮನ್ವಾಯಾಧಿಕಾರಿ ವೀರಭದ್ರಪ್ಪ ಗೊಂಡಬಾಳ, ಸಾಹಿತಿ ಅಜಮೀರ್ ನಂದಾಪೂರ, ಬಂಜಾರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯಕ್, ಶಿಕ್ಷಕರ ಸಂಘದ ಅಧ್ಯಕ್ಷ ಚಾಂದ್ ಪಾಷಾ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಛಾಯಪ್ಪ ಸೇರಿ ಅನೇಕರಿದ್ದರು.
ಸಾಹಿತ್ಯ ಸೇವೆ ಪವಿತ್ರವಾದದ್ದು ಕನ್ನಡ ಭಾಷೆ ಮತ್ತು ಸಾಹಿತ್ಯ ದೇಶದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ಆದ್ದರಿಂದ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿವೆ. ನಾನು ಸಹ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದುವ ಸಂದರ್ಭದಲ್ಲಿ ಕುಂ.ವೀರಭದ್ರಪ್ಪ ಸೇರಿ ನಾಡಿನ ಪ್ರಮುಖ ಸಾಹಿತಿಗಳ ಕಥೆ ಕವನ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಈಗ ಕಾರ್ಯಕ್ಷೇತ್ರ ಬದಲಾಗಿದ್ದರಿಂದ ಓದಲು ಆಗುತ್ತಿಲ್ಲ. ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಎಲ್ಲರ ಜನತೆಯ ಸಹಕಾರದಿಂದ ಅತ್ಯುತ್ತಮವಾಗಿ ಮಾಡಿದ ಹೆಮ್ಮೆ ಇದೆ.-ಪರಣ್ಣ ಮುನವಳ್ಳಿ ಶಾಸಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Case; ಮತಾಂತರಗೊಂಡ ಜಗನ್ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ
Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ
Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ
West Bengal ಕೋರ್ಟ್ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ
Hampankatta: ಪಾರ್ಕಿಂಗ್ ಸಮಸ್ಯೆಗೆ ‘ಮಲ್ಟಿ ಲೆವೆಲ್’ ಉತ್ತರ!
Tirupati Case; ಮತಾಂತರಗೊಂಡ ಜಗನ್ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.