ಮಣ್ಣು ಪರೀಕ್ಷಿಸಿ ಪೋಷಕಾಂಶಗಳ ನಿರ್ವಹಣೆ ಮಾಡಿ: ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್.
ರೈತ ಮಹಿಳೆಯರಿಗೆ ಮಾವಿನ ಹಣ್ಣು ಸಂಸ್ಕರಣೆ ಕಾರ್ಯಾಗಾರ
Team Udayavani, Jun 13, 2022, 3:37 PM IST
ರಾಣಿಬೆನ್ನೂರ: ಉತ್ತಮ ಗುಣಮಟ್ಟದ ಹಾಗೂ ಶುಚಿ-ರುಚಿಯಾದ ಸಂಸ್ಕರಿಸಿದ ತಿನಿಸುಗಳನ್ನು ಪಡೆಯಲು ಗುಣಮಟ್ಟದ ಮಾವಿನ ಹಣ್ಣುಗಳು ಅತ್ಯವಶ್ಯಕ. ಇದಕ್ಕಾಗಿ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶಗಳ ನಿರ್ವಹಣೆ ಮಾಡುವುದರ ಜೊತೆಗೆ ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಮಾವಿನ ಬೆಳೆಗೆ ಬಳಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್. ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾನಗಲ್ಲ ತಾಲೂಕಿನ ಹುಡೆ ಗ್ರಾಮದಲ್ಲಿ ಮಾವಿನ ಹಣ್ಣುಗಳ ಸಂಸ್ಕರಣೆ ಕುರಿತು ರೈತ ಮಹಿಳೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿವಿಧ ಸಂಸ್ಕರಿಸಿದ ಮಾವಿನ ಕಾಯಿ ಮತ್ತು ಹಣ್ಣುಗಳ ಪದಾರ್ಥಗಳು ವರ್ಷದಲ್ಲಿ ಕೇವಲ 3-4 ತಿಂಗಳುಗಳ ಕಾಲ ಮಾತ್ರ ದೊರಕುವುದರಿಂದ ಈ ಹಣ್ಣಿಗೆ ಸಂಸ್ಕರಣೆ ಅತ್ಯಗತ್ಯವಾಗಿದೆ. ಇದರಿಂದ ವರ್ಷಪೂರ್ತಿ ಮಾವನ್ನು ಸವಿಯಬಹುದಾಗಿದೆ. ಜೊತೆಗೆ ಮಾರುಕಟ್ಟೆ ಕಂಡುಕೊಂಡರೆ, ಸಣ್ಣ ಉಧ್ಯಮವನ್ನಾಗಿ ಇದನ್ನು ಪರಿವರ್ತಿಸಿ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದರು.
ಕೇಂದ್ರದ ವಿಜ್ಞಾನಿ ಡಾ| ಸಂತೋಷ್ ಎಚ್. ಎಂ., ದೇವಿಹೊಸೂರಿನ ಸಹಾಯಕ ಪ್ರಾಧ್ಯಾಪಕ ಡಾ| ತಿಪ್ಪಣ್ಣ ಮತ್ತು ಡಾ| ಪೂಜಾರ ಅವರು, ರೈತ ಮಹಿಳೆಯರಿಗೆ ಮನೆಯಲ್ಲೇ ಬೆಳೆದ ಮಾವಿನ ಹಣ್ಣುಗಳನ್ನು ಬಳಸಿ ಜಾಮ್ ತಯಾರಿಕೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು.
ಜಾಮ್ ತಯಾರಿಸಲು ಪ್ರತಿ 1 ಕೆಜಿ ಹಣ್ಣಿನ ತಿರುಳಿಗೆ 750-800 ಗ್ರಾಂ ಸಕ್ಕರೆ ಬೆರೆಸಿ, ಅದರ ಮಿಶ್ರಣವನ್ನು ಕುದಿಸಿ, ಅದು ದ್ರವರೂಪದಿಂದ ಸ್ವಲ್ಪ ಮಟ್ಟಿಗೆ ಘನರೂಪಕ್ಕೆ ಬರುವಂತೆ ಮಾಡಲು ಪೆಕ್ಟಿನ್ ಪುಡಿ (1 ಗ್ರಾಂ) ಸೇರಿಸಬೇಕೆಂದು ತಿಳಿಸಿದರು.
ರೈತ ಮಹಿಳೆ ಪ್ರೇಮಾ ರಾವಳ ಅವರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ತರಬೇತಿ ಶಿಬಿರದಲ್ಲಿ ಸುಮಾರು 25 ರೈತ ಮಹಿಳೆಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.