ಮೆಕ್ಯಾನಿಕಲ್ ಎಂಜಿನಿಯರ್ನ ಅಣಬೆ ಕೃಷಿ
Team Udayavani, Jun 15, 2022, 5:08 PM IST
ಮಾದನಹಿಪ್ಪರಗಾ: ಇಲ್ಲೊಬ್ಬ ಮೆಕ್ಯಾನಿಕಲ್ ಎಂಜಿನಿಯರ್ ಅಣಬೆ ಕೃಷಿ ಕೈಗೊಂಡು ಲಾಭ ಗಳಿಸಿ, ಇನ್ನಿತರ ರೈತರಿಗೆ ಮಾದರಿಯಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಗ್ರಾಮದ ಶಿವಶರಣಪ್ಪ ಖಂಡಪ್ಪ ಪರೇಣಿ ಎನ್ನುವರೇ ಅಣಬೆ ಕೃಷಿಯಲ್ಲಿ ಲಾಭ ಕಂಡುಕೊಂಡವರು. ಇವರು ತಮ್ಮ ಕಂಪನಿ ಮುಖಾಂತರ ಆನ್ಲೈನ್ಲ್ಲಿ ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಬೋಧನೆ ಮಾಡುತ್ತಾರೆ. ಇವರಿಗಿರುವುದು ಕೇವಲ ಅರ್ಧ ಎಕರೆ ಜಮೀನು. ತಂದೆ-ತಾಯಿ ಇದರಲ್ಲಿಯೇ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕಂಪನಿ (ವರ್ಕ್ ಫ್ರಂ ಹೋಂ) ಮನೆಯಿಂದ ಕಚೇರಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಾಗ ಅವರು ಅಣಬೆ ಕೃಷಿಗೆ ಕೈ ಹಾಕಿದರು. ಸದ್ಯ 50×100 ಅಡಿ ಅಳತೆಯ ಶೆಡ್ ಬಾಡಿಗೆ ಪಡೆದಿದ್ದಾರೆ. ಮೂಲ ಬಂಡವಾಳ 50 ಸಾವಿರ ರೂ. ಹಾಕಿದ್ದಾರೆ. 5 ತಿಂಗಳಲ್ಲಿ 3 ಲಕ್ಷ ರೂ. ಲಾಭಪಡೆದಿದ್ದಾರೆ. 110ರೂ.ಗಳಂತೆ ಅಣಬೆ ಬೀಜ ಖರೀದಿ ಮಾಡುತ್ತಿದ್ದಾರೆ. ಇವರು ಬೆಳೆದ ಅಣಬೆ ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ ಸ್ಟಾರ್ ಹೋಟೆಲ್ಗಳಿಗೆ ಮತ್ತು ಡಾಬಾಗಳಿಗೆ ಸರಬರಾಜು ಮಾಡುತ್ತಿದ್ದಾರೆ.
ಒಂದು ಕಿಲೋ ಅಣಬೆಗೆ ಒಂದು ಸಾವಿರ ರೂ. ಆದರೆ ಒಂದು ಕೆ.ಜಿ ಅಣಬೆ ಪೌಡರ್ ಬೆಲೆ 1500 ರೂ. ಇದೆ. 25 ಡಿಗ್ರಿ ತಾಪಮಾನದಲ್ಲಿ ಬೆಳೆಯುವ ಈ ಬೆಳೆ ಎರಡು ತಿಂಗಳ ಒಳಗೆ ಮಾರಾಟಕ್ಕೆ ಬರುತ್ತದೆ. ಇದನ್ನು ಆನ್ ಲೈನ್ ಮೂಲಕ ಖರೀದಿಸುತ್ತಿದ್ದಾರೆ.
-ಪರಮೇಶ್ವರ ಭೂಸನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.