![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 17, 2022, 2:18 PM IST
ನರಗುಂದ: ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಚಾಲನೆ ಸೇರಿದಂತೆ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆ ಗಳ ಪರಿಹಾರಕ್ಕೆ ಒತ್ತಾಯಿಸಿ ಮಹದಾಯಿ ಹೋರಾಟಗಾರರು ಜೂ.21ರಂದು ಬೆಂಗ ಳೂರು ಚಲೋಗೆ ನಿರ್ಧರಿಸಿದ್ದಾರೆ.
ಗುರುವಾರ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 2527ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆ, 11 ತಾಲೂಕುಗಳ ರೈತರ ಸಭೆಯ ಬಳಿಕ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ವೇದಿಕೆಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಖ್ಯೆಯ ಮಹದಾಯಿ ಹೋರಾಟ ಗಾರರನ್ನುದ್ದೇಶಿಸಿ ಮಾತನಾಡುತ್ತ ಈ ವಿಷಯ ಘೋಷಿಸಿದರು.
ರೈತರಿಗೆ ಸೂಚನೆ: ಜೂ.21ರಂದು ಬೆಂಗಳೂರು ಚಲೋನಲ್ಲಿ ಪಾಲ್ಗೊಳ್ಳುವ ರೈತರು ಅಗತ್ಯ ಬಟ್ಟೆ, ಎರಡು ದಿನಕ್ಕೆ ಬೇಕಾಗುವಷ್ಟು ರೊಟ್ಟಿ ಬುತ್ತಿಯೊಂದಿಗೆ ಅಂದು ಮ.12 ಗಂಟೆಯೊಳಗೆ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸೇರಬೇಕು. ಅಂದು ಮ.12.45ಕ್ಕೆ ಹೊರಡುವ ರೈಲ್ವೆ ಮೂಲಕ ಬೆಂಗಳೂರಿಗೆ ತೆರಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ರಾತ್ರಿಯಿಂದಲೇ ಧರಣಿ: ಜೂ.21ರಂದು ತಡರಾತ್ರಿ 12 ಗಂಟೆಗೆ ಬೆಂಗಳೂರು ತಲುಪಲಿದ್ದು, ಅಲ್ಲಿನ ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಮೂಲಕ ಬೆಂಗಳೂರಿನ ನೀರಾವರಿ ಮುಖ್ಯ ಕಚೇರಿವರೆಗೆ ತೆರಳಿ ಅಂದು ರಾತ್ರಿಯಿಂದಲೇ ಧರಣಿ ಪ್ರಾರಂಭಿಸಲಾಗುವುದು. ಸುಮಾರು 1 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಮೇ 30ರಂದು ಬೆಂಗಳೂರಿಗೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಮಹದಾಯಿ ಯೋಜನೆಗೆ ಶೀಘ್ರ ಚಾಲನೆ ನೀಡಬೇಕೆಂಬ ಬೇಡಿಕೆಯೊಂದಿಗೆ 10 ದಿನಗಳ ಗಡುವು ನೀಡಲಾಗಿತ್ತು. ತಪ್ಪಿದಲ್ಲಿ ಬೆಂಗಳೂರಿನ ನೀರಾವರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಅಂದೇ ಮನವಿ ಪತ್ರದಲ್ಲಿ ತಿಳಿಸಿದಂತೆ ಇದೀಗ ಬೆಂಗಳೂರು ಚಲೋ ನಡೆಸಲಾಗುತ್ತಿದೆ ಎಂದು ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದರು. ಕಷ್ಟದ ಕಾಲದಲ್ಲಿ ಕಣ್ಣೀರು ಸುರಿಸುವ ರೈತರ ಸಂಕಷ್ಟಗಳ ಪರಿಹಾರಕ್ಕೆ ನಾವು ಮುಂದಾಗಿದ್ದೇವೆ. ಸುದೀರ್ಘ ಏಳನೇ ವರ್ಷದಲ್ಲಿ ಸಾಗಿಬಂದ ಈ ಹೋರಾಟ ನಮಗೆ ಎಲ್ಲವನ್ನೂ ಕಲಿಸಿದೆ. 1976ರಲ್ಲಿ ಹುಟ್ಟಿಕೊಂಡ ಮಹದಾಯಿ ಯೋಜನೆಗೆ ಇಂದು ನ್ಯಾಯಾಧಿಕರಣವೇ 4 ಟಿಎಂಸಿ ನೀರು ಹಂಚಿಕೆ ಮಾಡಿದ್ದರೂ, ಅದನ್ನು ಮಲಪ್ರಭೆಗೆ ಕೂಡಿಸುವ ಪ್ರಯತ್ನ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಶಿವಪ್ಪ ಹೊರಕೇರಿ, ಪಂಚಪ್ಪ ಹನಸಿ, ಗಿರಿಯಪ್ಪ ಹಂಜಿ, ಅಶೋಕ ಸಾತಣ್ಣವರ, ಮುತ್ತಣ್ಣ ಪಾಟೀಲ, ಮಲ್ಲಣ್ಣ ಆಲೇಕರ, ಗುರು ರಾಯನಗೌಡ್ರ, ಶೇಖಣ್ಣ ಹುಲಿಕಟ್ಟಿ, ಬಸವರಾಜ ಗುಡಿ, ಯಲ್ಲಪ್ಪ ಶಿವಪ್ಪನವರ, ಮಹೇಶ ನಾವಳ್ಳಿ, ಬಿಷ್ಠನಗೌಡ ಹೊಸಮನಿ, ಮೃತ್ಯುಂಜಯ ಅರವಟಗಿಮಠ, ಉಮೇಶ ಹಳ್ಯಾಳ, ಶರೀಫ ಕಲಬುರ್ಗಿ, ಅಲ್ಲಿಸಾಬ ದಿಲಾವರಸಾಬ, ಚಿದಾನಂದ ಹರ್ತಿ, ಹೇಮಕ್ಕ ಗಾಳಿ, ಶಿವಪ್ಪ ಕಡಿಯವರ, ವೆಂಕನಗೌಡ ಪಾಟೀಲ, ಲಚ್ಚಮ್ಮ ಜೋತೆಣ್ಣವರ, ಮಲಪ್ರಭೆ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಕಾರ್ಯದರ್ಶಿ ಎಸ್.ಬಿ.ಜೋಗಣ್ಣವರ, ವಾಸು ಚವ್ಹಾಣ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಅರ್ಜುನ ಮಾನೆ ಮುಂತಾದವರಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.