ಪುರುಷರ ನರಳಿಕೆಗೆ ಕಣ್ಣಾದ ವೆಡ್ಡಿಂಗ್ ಗಿಫ್ಟ್ ಟ್ರೈಲರ್!

ಕಥೆ ಬರೆದರೆ ಅದಕ್ಕೆ ಎಷ್ಟು ಬೇಕಾದರೂ ಒಗ್ಗರಣೆ ಹಾಕಬಹುದು.

Team Udayavani, Jun 17, 2022, 3:24 PM IST

ಪುರುಷರ ನರಳಿಕೆಗೆ ಕಣ್ಣಾದ ವೆಡ್ಡಿಂಗ್ ಗಿಫ್ಟ್ ಟ್ರೈಲರ್!

ಬೆಂಗಳೂರು:ಗಂಡು-ಹೆಣ್ಣು ಎಂಬ ವಿಚಾರದಲ್ಲಿ ಈ ಹಿಂದೆಯೆಲ್ಲಾ ಹೆಣ್ಣಿನ ಮೇಲೆ ಸಾಕಷ್ಟು ದೌರ್ಜನ್ಯ ನಡೆದಿದೆ. ಅಷ್ಟೆ ಅನ್ಯಾಯಗಳು ಆಗಿದೆ. ಮದುವೆಯಾದ ಮೇಲೆ ಗಂಡನ ಮಾತಷ್ಟೇ ವೇದ ವಾಕ್ಯವಾಗಿತ್ತು. ದೌರ್ಜನ್ಯ ನಡೆದರು ಉಸಿರೆತ್ತುವ ಹಾಗಿರಲಿಲ್ಲ. ಕಾಲ ಬದಲಾದಂತೆ ಕಾಯ್ದೆಗಳು ಬಂತು. ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆ ವಿಧಿಸಲಾಗಿತ್ತು. ಆರಂಭದಲ್ಲಿ ಈ ಕಾಯ್ದೆ ನ್ಯಾಯಯುತವಾಗಿಯೇ ಉಪಯೋಗವಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಸ್ವಾರ್ಥಕ್ಕೂ ಉಪಯೋಗವಾಗುತ್ತಿದೆ, ದ್ವೇಷಕ್ಕೂ ಬಲಿಯಾಗುತ್ತಿದೆ. ಇಷ್ಟೆಲ್ಲಾ ಹೇಳಲು ಕಾರಣ ವೆಡ್ಡಿಂಗ್ ಗಿಫ್ಟ್ ಟ್ರೇಲರ್.

ಮೇಲೆ ಹೇಳಿದ ಅಷ್ಟು ವಿಚಾರ ನೈಜ ಘಟನೆ. ಈ ಅನ್ಯಾಯದ ಒಂದಷ್ಟು ಮಗ್ಗಲುಗಳನ್ನು ಎಲ್ಲರ ಮುಂದೆ ಅನಾವರಣ ಮಾಡಬೇಕೆಂಬ ಧ್ಯೇಯದಿಂದ ವಿಕ್ರಂ ಪ್ರಭು, 498-A ಕಾಯ್ದೆಯನ್ನು ಸಿನಿಮಾ ರೂಪದಲ್ಲಿ ತರಲು ಹೊರಡಿದ್ದಾರೆ. ಕಥೆ ಬರೆದರೆ ಅದಕ್ಕೆ ಎಷ್ಟು ಬೇಕಾದರೂ ಒಗ್ಗರಣೆ ಹಾಕಬಹುದು. ಪ್ರೇಕ್ಷಕರ ಮನಸ್ಸಿಗೆ ಹಿತವೆನಿಸುವ ಕಾಮಿಡಿಯನ್ನು ನೀಡಬಹುದು. ಆದರೆ ನೈಜ ಘಟನೆಯನ್ನು ಸಿನಿಮಾವಾಗಿಸಿ, ನೋಡುಗರ ಮನಸ್ಸಿನಾಳಕ್ಕೆ ಇಳಿಸುವ ಕೆಲಸ ಸುಲಭವಲ್ಲ. ಅದಕ್ಕೊಂದಿಷ್ಟು ಶ್ರದ್ಧೆ ಬೇಕು, ಸಾಕಷ್ಟು ತಯಾರಿ ಇರಬೇಕು. ಹಲವು ವರ್ಷಗಳಿಂದ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ್ದ ವಿಕ್ರಂ ಪ್ರಭು ಈ ವಿಚಾರದಲ್ಲಿ ಆಸಕ್ತಿ ಬಂದಿದೆ. ತೆರೆ ಮೇಲೆ ಮುಗ್ಧ ಗಂಡು ಮಕ್ಕಳ ಜೀವನ ತರಲು ಹೊರಟಿದ್ದಾರೆ.

ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಡು ಜನರ ಜೀವನಗಾಥೆಯನ್ನು ನೆನಪಿಸುತ್ತಿದೆ. ನನ್ನ ಜೀವನದಲ್ಲೂ ಹೀಗೆ ಅನುಭವಿಸಿದೆ ಅಲ್ವಾ, ಛೇ ನಂಗೂ ಪ್ರೇಮಾ ಅಂತ ಲಾಯರ್ ಅವತ್ತು ಸಿಗಬೇಕಿತ್ತು ಅಲ್ವಾ ಎಂಬ ನೋವಿನ ನೆನಪುಗಳು ಗಂಡು ಮಕ್ಕಳಿಗಾದರೆ, ಇತ್ತ ಆ ರೀತಿ ಅನ್ಯಾಯದ ದಾರಿ ಹಿಡಿದ ಹೆಣ್ಣು ಮಕ್ಕಳಿಗೆ ಪಶ್ಚಾತ್ತಾಪ ಪಡುವಂತೆ ಮಾಡುತ್ತಿದೆ. ಟ್ರೇಲರ್ ನಲ್ಲಿ ಕರಾಳ ಮುಖದ, ಸನ್ನಿವೇಶದ ಪರಿಚಯವಾಗಿದೆ.

ಮೊದಲ ನೋಟದಲ್ಲಿಯೇ ಇವಳೇ ಪರ್ಫೆಕ್ಟ್ ಎಂದುಕೊಂಡು ಮದುವೆಯಾದರೆ ಕೊನೆಗಳಿಗೆಯಲ್ಲಿ ಅವಳೆ ಉರುಳಾಗಿದ್ದಾಳೆ. ಫೈನಲಿ ನ್ಯಾಯ ಯಾರಿಗೆ, ತಪ್ಪಲ್ಲ ಅಂತ ಪ್ರೂವ್ ಮಾಡೋದು ಹೇಗೆ, ತಪ್ಪಿಲ್ಲದೆ ಕೆಟ್ಟ ಹೆಸರು ಬಂದಾಯ್ತು, ಒಂದಷ್ಟು ಶಿಕ್ಷೆಯೂ ಅನುಭವಿಸಿಯಾಯ್ತು, ಇದಕ್ಕೆಲ್ಲಾ ಹೊಣೆ ಯಾರು..? ಈ ಎಲ್ಲಾ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದರೆ ಉತ್ತರಕ್ಕೆ ಜುಲೈ 8ರ ತನಕ ಕಾಯಲೇಬೇಕಾಗಿದೆ. ವೆಡ್ಡಿಂಗ್ ಗಿಫ್ಟ್ ಸಿನಿಮಾಗೆ ವಿಕ್ರಂ ಪ್ರಭು ನಿರ್ದೇಶನ ಮಾಡಿದ್ದು, ಬಂಡವಾಳವನ್ನು ಅವರೇ ಹೂಡಿದ್ದಾರೆ. ಸೋನುಗೌಡ ಮತ್ತು ನಿಶಾನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಪ್ರೇಮಾ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್ ತಾರಾಬಳಗದಲ್ಲಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.