ನನ್ನನ್ನಾಗಲಿ, ನನ್ನ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
ನನ್ನ ತಾಳ್ಮೆ ನೋಡಿ ಇ.ಡಿ. ಅಧಿಕಾರಿಗಳೇ ದಂಗಾಗಿದ್ದರು ಎಂದ ಕಾಂಗ್ರೆಸ್ ನಾಯಕ
Team Udayavani, Jun 23, 2022, 7:15 AM IST
ಹೊಸದಿಲ್ಲಿ: “ನನ್ನನ್ನು ವಿಚಾರಣೆ ಗೊಳ ಪಡಿಸುವ ಮೂಲಕ ನನ್ನನ್ನಾಗಲಿ, ನನ್ನ ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವಿಲ್ಲ ಎಂಬುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮನದಟ್ಟಾಗಿದೆ’ ಹೀಗೆಂದು 5 ದಿನಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿ ಭಟನೆಯಲ್ಲಿ ಭಾಗವಹಿಸಿ, ಪಕ್ಷದ ನಾಯಕ ರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುವ ಬಿಜೆಪಿ, ಅಗ್ನಿಪಥ ಯೋಜನೆ ಮೂಲಕ ಸೇನಾ ಪಡೆಗಳನ್ನು ದುರ್ಬಲಗೊಳಿಸಲು ಹೊರಟಿದೆ. ಪ್ರಧಾನಿ ಈ ಯೋಜನೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದರು. ವಿಚಾರಣೆ ಸಮಯದಲ್ಲಿ ಪ್ರತಿಭಟನೆ ಮಾಡಿದ ನಾಯ ಕರು, ಕಾರ್ಯಕರ್ತರಿಗೆ ಧನ್ಯವಾದಗಳನ್ನೂ ಅರ್ಪಿಸಿದರು.
“12 ಗಂಟೆಗಳ ಕಾಲ ಸತತವಾಗಿ ವಿಚಾರಣೆ ಮಾಡಿದರೂ ನಾನು ಸುಸ್ತಾಗದೇ ಇರುವುದನ್ನು ನೋಡಿ ಖುದ್ದು ಇ.ಡಿ. ಅಧಿಕಾರಿಗಳೇ ದಂಗಾಗಿದ್ದರು. ನನ್ನ ತಾಳ್ಮೆ ಹಾಗೂ ಸಹನೆಯನ್ನು ಕೊಂಡಾಡಿದರು’ ಎಂದ ರಾಹುಲ್, ನಾನು ದಿನನಿತ್ಯ ವಿಪಶ್ಯನ ಮಾಡುತ್ತೇನೆ. ಹಾಗಾಗಿ ಸತತ ವಾಗಿ ಒಂದೇ ಜಾಗದಲ್ಲಿ ಕೂರಬಲ್ಲೆ ಎಂದು ಅಧಿಕಾರಿಗಳಿಗೆ ತಿಳಿಸಿದೆ ಎಂದರು.
ಜತೆಗೆ ಪಕ್ಷ ನನಗೆ ಸಹನೆ ಕಲಿಸಿದೆ ಎಂದ ರಾಹುಲ್, ರಾಜ ಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ರನ್ನು ತೋರಿಸುತ್ತಾ “ಕಾಂಗ್ರೆಸ್ನಲ್ಲಿ ರುವ ಎಲ್ಲರೂ ಸಹನಾಶೀಲರು ಎಂಬುದಕ್ಕೆ ಪೈಲಟ್ ಅವರೇ ಸಾಕ್ಷಿ’ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಂ ರಮೇಶ್, “”ರಾಷ್ಟ್ರವ್ಯಾಪಿ ಪಕ್ಷ ಜೋಡಣೆಗಾಗಿ ಕೈಗೊಳ್ಳ ಲಾಗುವ ಭಾರತ್ ಜೋಡೋ ಯಾತ್ರೆಯು ಅ. 2ರಂದು ಕಾಶ್ಮೀರದಿಂದ ಶುರುವಾಗಲಿದೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maldives: ಮಾಲ್ಡೀವ್ಸ್ ಗೆ ಭಾರತದ ನೆರವು, ರಕ್ಷಣೆ ಬೇಕಾಗಿದೆ: ಮೊಹಮ್ಮದ್ ಮುಯಿಜ್ಜು
Land For Jobs Case: ಲಾಲು ಪ್ರಸಾದ್ ಯಾದವ್ ಸೇರಿ ಇಬ್ಬರು ಪುತ್ರರಿಗೆ ಜಾಮೀನು ಮಂಜೂರು
ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ… ಹಳಿ ಮೇಲೆ ಮಣ್ಣು ಸುರಿದ ಕಿಡಿಗೇಡಿಗಳು
Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಶಸ್ತಿ ರದ್ದು!
Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು
Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!
Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್ ಟಾಟಾ
Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.