![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 28, 2022, 8:37 PM IST
ಕುಣಿಗಲ್ : ತಂದೆ, ತಾಯಿ ಇಲ್ಲದ ಅಪ್ರಾಪ್ತ 17 ವರ್ಷದ ಬಾಲಕಿಯನ್ನು ಅಪಹರಿಸಿ 40 ವರ್ಷದ ವ್ಯಕ್ತಿಯೊಂದಿಗೆ ಮಧುವೆ ಮಾಡಿದ ಎಂಟು ಮಂದಿ ಆರೋಪಿಗಳ ವಿರುದ್ದ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಕೊತ್ತಗೆರೆ ಹೋಬಳಿ ಜಾಣಗೆರೆ ಗ್ರಾಮದ ವಧು ರಂಗಸ್ವಾಮಿ (40) ಹಾಗೂ ಮಧುವೆಗೆ ಸಹಕಾರ ನೀಡಿದ ಹನುಮಂತಯ್ಯ, ಕಳಸಮ್ಮ, ರಂಗಮ್ಮ, ರಾಮೇಗೌಡನಪಾಳ್ಯ ಗ್ರಾಮದ ಜಿ.ನಾಗರಾಜು, ಗುನ್ನಾಗರೆ ಗ್ರಾಮದ ಮಾಯಣ್ಣ, ಗಂಗಮ್ಮ, ಸಿಂಗೋನಹಳ್ಳಿ ಗ್ರಾಮದ ನಿಂಗಮ್ಮ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಘಟನೆ ವಿವರ : ಅಪ್ರಾಪ್ತ ಬಾಲಕಿಯ ತಂದೆ, ತಾಯಿ ಆನಾರೋಗ್ಯ ನಿಮಿತ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ, ತಂದೆ, ತಾಯಿ ಇಲ್ಲದ ಬಾಲಕಿ ತನ್ನ ಮನೆಯಲ್ಲಿ ಸಂಬಂಧಿಕರೊಂದಿಗೆ ವಾಸವಾಗಿದ್ದಳು ಇತ್ತೀಚಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿದ್ದಳು.
ಈಕೆಯ ಸಂಬಂಧಿಕರು ರಂಗಸ್ವಾಮಿಯೊಂದಿಗೆ ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸಿದರು ಎನ್ನಲಾಗಿದ್ದು, ಇದಕ್ಕೆ ಬಾಲಕಿ ಒಪ್ಪದಿದ್ದಾಗ ಸಂಬಂಧಿಕರಾದ ಜಿ.ನಾಗರಾಜು, ಹನುಮಂತಯ್ಯ ಈತನ ಹೆಂಡತಿ ಕಳಸಮ್ಮ, ಮಾಯಣ್ಣ, ನಿಂಗಮ್ಮ, ರಂಗಮ್ಮ, ಗಂಗಮ್ಮ ಸೇರಿ ಬಾಲಕಿಯನ್ನು ಅಪಹರಿಸಿ ಬೆಂಗಳೂರಿನ ಮನೆಯೊಂದರಲ್ಲಿ ಕೂಡಿ ಹಾಕಿ ಬಳಿಕ ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿ ಗ್ರಾಮ ಒಂದಕ್ಕೆ ಕರೆ ತಂದು ದೇವಾಲಯದಲ್ಲಿ ರಂಗಸ್ವಾಮಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ : ಚಿಂಚೋಳಿ : ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಗ್ರಾಮದೇವತೆಯ ಗೂಳಿ, ಮರುಗಿದ ಜನ
ಈ ವಿಚಾರ ಬಾಲಕಿಯ ಸೋದರ ಮಾವನಿಗೆ ತಿಳಿದು ಬಾಲಕಿ ಇರುವ ಗ್ರಾಮಕ್ಕೆ ತೆರಳಿ ಆಕೆಯನ್ನು ಕರೆತಂದು ವಿಚಾರಿಸಿದಾಗ ನಡೆದಿರುವ ಘಟನೆಯನ್ನು ತನ್ನ ಸೋದರ ಮಾವನಿಗೆ ಬಾಲಕಿ ತಿಳಿಸಿದ್ದಾಳೆ, ಈ ಸಂಬಂಧ ಬಾಲಕಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮದುವೆ ಬಳಿಕ ರಂಗಸ್ವಾಮಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಘಟನೆ ಕುರಿತು ಎಂಟು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.