ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ
Team Udayavani, Jul 1, 2022, 10:00 PM IST
ಮಂಗಳೂರು: ಕೋವಿಡ್ ಬಳಿಕ ನಿಂತುಹೋಗಿದ್ದ ಮಂಗಳೂರು-ದಿಲ್ಲಿ ನೇರ ವಿಮಾನ ಯಾನ ಕೊನೆಗೂ ಪುನರಾರಂಭಗೊಂಡಿದೆ.
ಇಂಡಿಗೋ ಏರ್ ವೇಸ್ ನ ವಿಮಾನವು ಜು.1ರಿಂದ ಮಂಗಳೂರು-ದಿಲ್ಲಿ ನಡುವೆ ವಿಮಾನಯಾನ ಆರಂಭಿಸಿದೆ. 6ಇ 2164 ವಿಮಾನದಲ್ಲಿ 77 ಪ್ರಯಾಣಿಕರು ದಿಲ್ಲಿಯಿಂದ ಮಂಗಳೂರು ತಲುಪಿದ್ದರೆ, 6ಇ 2165 ವಿಮಾನದಲ್ಲಿ 140 ಪ್ರಯಾಣಿಕರು ಮಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸಿದರು.
ಕ್ಯಾಪ್ಟನ್ ಅನುಭವ್ ಬ್ಯಾನರ್ಜಿ ಈ ವಿಮಾನ ಸಂಚಾರದ ನೇತೃತ್ವ ವಹಿಸಿದ್ದರು. 6ಇ 2164 ಮತ್ತು 6ಇ 2165 ವಿಮಾನಗಳು ರವಿವಾರ, ಸೋಮವಾರ, ಬುಧವಾರ ಮತ್ತು ಸಂಚರಿಸಲಿವೆ.
6ಇ 2164 ವಿಮಾನ ದಿಲ್ಲಿಯಿಂದ ಬೆಳಗ್ಗೆ 7.40ಕ್ಕೆ ಹೊರಟು 10.45ಕ್ಕೆ ಮಂಗಳೂರು ತಲುಪಲಿದೆ. 6ಇ 2165 ವಿಮಾನವು ಮಂಗಳೂರಿನಿಂದ ಬೆಳಗ್ಗೆ 10.45ಕ್ಕೆ ಹೊರಟು 1.20ಕ್ಕೆ ದಿಲ್ಲಿಗೆ ತಲುಪಲಿದೆ.
ಈ ನೇರ ವಿಮಾನ ಯಾನವು ಚಂಡೀಗಢ, ಡೆಹ್ರಾಡೂನ್, ಪಾಟ್ನಾ, ರಾಂಚಿ, ಲಕ್ನೋ, ಭೋಪಾಲ್, ದಮಾಮ್, ಜೆದ್ದಾ ಮತ್ತು ರಿಯಾದ್ನಂತಹ ಸ್ಥಳಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಸುಗಮಗೊಳಿಸಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MRPL: ಕರಾವಳಿಗೆ ಮೊದಲ “ಗ್ರೀನ್ ಹೈಡ್ರೋಜನ್’ ಘಟಕ
Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.