ಕಳ್ಳಿಗೆ: ಹತ್ತಾರು ಸೌಕರ್ಯ ಹರಿದು ಬರಬೇಕು ಈ ಹಳ್ಳಿಗೆ !

ಕುಡಿಯುವ ನೀರಿಗೆ ಯೋಜನೆ ಬಂದಿದೆ, ಆರೋಗ್ಯ ಕೇಂದ್ರ ಆಗಬೇಕಿದೆ

Team Udayavani, Jul 5, 2022, 10:13 AM IST

2

ಕಳ್ಳಿಗೆ‌: ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇರುವ ನೆತ್ತರಕೆರೆಯನ್ನು ಹೊಂದಿರುವ ಗ್ರಾಮ ಕಳ್ಳಿಗೆ. ದೈವ-ದೇವರ ಬೀಡಾಗಿಯೂ ಪ್ರಸಿದ್ಧಿ ಹೊಂದಿರುವ ಗ್ರಾಮ. ಕೃಷಿಯೇ ಆರ್ಥಿಕತೆಯ ಜೀವಾಳ.

ನೆತ್ತರಕೆರೆಯ ಕುರಿತು ಹಲವಾರು ಕಥೆಗಳಿವೆ. ಹಿಂದೆ ಅರಸು ಮನೆತನಗಳ ಜಗಳದ ಹಿಂದಿನ ಕಥೆ ಈ ಕೆರೆಗಿದೆ ಎನ್ನಲಾಗುತ್ತದೆ. ಐತಿಹಾಸಿಕವಾಗಿ, ಟಿಪ್ಪು ಸುಲ್ತಾನ್‌ ಇದೇ ಊರಿನಲ್ಲಿ ಹಲವರ ಹತ್ಯೆ ನಡೆಸಿ ನೆತ್ತರು ಹರಿಸಿದ ಕಾರಣ ನೆತ್ತರ ಕೆರೆಯಾಗಿದೆ ಎಂಬ ಮಾತೂ ಇದೆ. ಗ್ರಾಮಕ್ಕೂ ಇದೇ ಹೆಸರಿರುವುದು ವಿಶೇಷ.

ಗ್ರಾಮದಲ್ಲಿ ಶತಮಾನವನ್ನು ದಾಟಿದ ನೆತ್ತರಕೆರೆ ಸರಕಾರಿ ಹಿ.ಪ್ರಾ. ಶಾಲೆ ಇದೆ. ಒಂದು ಕಾಲದಲ್ಲಿ ತೀರಾ ಹಿಂದುಳಿದಿತ್ತು. ಆದರೀಗ ಅನೇಕ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಂಡಿದೆ. ಆದರೆ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ, ಕಾಲೇಜು ಅಗತ್ಯವಿದೆ. ಇದು ಗ್ರಾಮಸ್ಥರ ಬೇಡಿಕೆ.

ಈ ಗ್ರಾಮ ತೀರಾ ಅಪರಿಚಿತವಾದದ್ದೇನೂ ಅಲ್ಲ. ಬಂಟ್ವಾಳದ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಇದೇ ಗ್ರಾಮದವರು. ರಾಜ್ಯಸಭಾ ಸದಸ್ಯರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಡಾ| ಕೊಡ್ಮಾಣ್‌ ನಾಗಪ್ಪ ಆಳ್ವ ಅವರೂ ನೆತ್ತರಕೆರೆ ಶಾಲೆಯಲ್ಲಿ ಕಲಿತವರು. ಇವರಲ್ಲದೆ ಹಲವಾರು ಮಂದಿ ಉದ್ಯಮ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಜತೆಗೆ ಸಾರ್ವಜನಿಕ ಮೈದಾನವೂ ಇಲ್ಲ. ಇವೆರಡು ತೀರಾ ಅಗತ್ಯವಿದೆ. ಆರೋಗ್ಯ ಕೇಂದ್ರ ಸ್ಥಾಪನೆಯಾದರೆ ಜನರಿಗೆ ಅನುಕೂಲವಾಗಲಿದೆ. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲವಾಗಿತ್ತು. ಪ್ರಸ್ತುತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜೆಜೆಎಂ ಮೂಲಕ ಅನುದಾನ ಮಂಜೂರಾಗಿದೆ.

ಕಸ ನಿರ್ವಹಣೆ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಗ್ರಾಮದಲ್ಲಿ ಜಾರಿಯಾಗಿಲ್ಲ. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಜಾರಿ ಮಾಡಬೇಕಿದೆ. ಅದರಿಂದ ಗ್ರಾಮ ಮಾಲಿನ್ಯ ಮುಕ್ತಗೊಳ್ಳಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಇದರೊಂದಿಗೆ ಇನ್ನೊಂದು ಸಮಸ್ಯೆಯೆಂದರೆ, ಗ್ರಾಮಸ್ಥರು ಉದ್ಯೋಗಕ್ಕಾಗಿ ಹತ್ತಿರದ ಪೇಟೆಗಳನ್ನೇ ಆಶ್ರಯಿಸಬೇಕಿದೆ. ಯುವಜನರಿಗೆ ಉದ್ಯೋಗ ಕಲ್ಪಿಸು ವಂಥ ಕೆಲವು ಯೋಜನೆಗಳು ಬಂದರೆ ಪೇಟೆ ವಲಸೆ ತಪ್ಪುತ್ತದೆ ಎಂಬುದು ಹಲವು ಗ್ರಾಮಸ್ಥರ ಅಭಿಪ್ರಾಯ. 2011ರ ಜನಗಣತಿ ಪ್ರಕಾರ 4205 ಜನರಿದ್ದಾರೆ. ಗ್ರಾಮವು ಒಟ್ಟಾರೆ 620.64 ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ.

ನೀರಿಗೆ ಯೋಜನೆ ಮಂಜೂರು: ಗ್ರಾಮವು ಪ್ರೌಢಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ಸಾರ್ವಜನಿಕ ಮೈದಾನದ ಕೊರತೆ ಯನ್ನು ಅನುಭವಿಸುತ್ತಿದೆ. ಮುಖ್ಯವಾಗಿ ಕುಡಿ ಯುವ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜೆಜೆಎಂ ಅನುದಾನ ಮಂಜೂರಾಗಿದ್ದು, ಶೀಘ್ರವೇ ಅನುಷ್ಠಾನ ವಾಗಲಿದೆ. – ದಾಮೋದರ್‌ ನೆತ್ತರಕೆರೆ., ಉಪಾಧ್ಯಕ್ಷರು, ಗ್ರಾ.ಪಂ.ಕಳ್ಳಿಗೆ

ಯುವಕರಿಗೆ ಇಲ್ಲೇ ಕೆಲಸ ಸಿಗಲಿ: ಗ್ರಾಮಕ್ಕೆ ಹೊಸ ಯೋಜನೆಗಳು ಬಂದು ಯುವ ಜನರು ಊರಲ್ಲೇ ನೆಲಸುವಂತಾಗಬೇಕು. ಮೂಲ ಸೌಕರ್ಯಗಳ ಜತೆಗೆ ಉದ್ಯೋಗ ಸೃಷ್ಟಿಯ ಕಾರ್ಯ ಆಗಬೇಕು. ಆಗ ಗ್ರಾಮದ ಅಭಿವೃದ್ಧಿ ಸಾಧ್ಯ. ಕೃಷಿ, ಪಶುಸಂಗೋಪನೆಯ ವಿಷಯದಲ್ಲೂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯಬೇಕು ಹಾಗೂ ಅದರಂತೆ ಸಲಹೆ ನೀಡಬೇಕು. ಹಾಗೆಯೇ ಕೃಷಿ ಯಂತ್ರೋಪಕರಣಗಳು ಕೂಡ ಇಲ್ಲೇ ಸಿಗುವಂತಾಗಬೇಕು. – ನಾರಾಯಣ ಹೊಳ್ಳ ನೆತ್ತರಕೆರೆಗುತ್ತು., ಗ್ರಾಮಸ್ಥರು

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.