ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು; ಜನ ಜಾಗೃತರಾಗಲು ಸೂಚನೆ
Team Udayavani, Jul 7, 2022, 7:46 PM IST
ರಬಕವಿ-ಬನಹಟ್ಟಿ : ಮಳೆಗಾಲ ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದರೂ ಅಷ್ಟೇನು ದೊಡ್ಡಪ್ರಮಾಣದ ಮಳೆ ಇಲ್ಲದೆ ಸೊರಗಿರುವ ಈ ಭಾಗದ ಜನಕ್ಕೆ ಈಗ ಸಮೀಪದ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲು ಪ್ರಾರಂಭಿಸಿದೆ.
ಗುರುವಾರ ಸಂಜೆಯವರೆಗೆ ಕೃಷ್ಣೆ ಈಗ ತನ್ನ ಎರಡು ವಡಲುಗಳ ಮೈದುಂಬಿಕೊಂಡು ಹರಿಯುತ್ತಿದ್ದಾಳೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಹಾಗೂ ದೂದಗಂಗಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದರಿಂದ ಈಗ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಎಂದು ತಹಸೀಲ್ದಾರ ಎಸ್. ಬಿ. ಇಂಗಳೆ ತಿಳಿಸಿದರು.
ಪ್ರವಾಹ ಬೀತಿ ಇಲ್ಲ; ಮುಂದಿನ ವಾರದಲ್ಲಿ ನದಿಯು ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಈಗ ಪ್ರವಾಹದ ಯಾವುದೇ ಭಯಬೇಡ, ೨ ಲಕ್ಷ ಕ್ಯೂಸೆಕ್ಸ ನೀರು ನದಿಗೆ ಬಂದಾಗ ಮಾತ್ರ ಪ್ರವಾಹ ಎದುರಿಸಬೇಕಾಗುತ್ತದೆ. ಈಗ ನದಿ ಪಾತ್ರದ ಪ್ರತಿ ಗ್ರಾಮದಲ್ಲಿಯೂ ಒಬ್ಬ ನೋಡಲ ಅಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ನೀರಿನ ಏರಿಳಿತಗಳ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹತಿ ರವಾನೆಯಾಗುತ್ತಿರುತ್ತದೆ. ಈ ಬಾರಿಯೂ ತಾಲೂಕು ಆಢಳಿತ ಪ್ರವಾಹ ಮುನ್ನೆಚ್ಚರಿಕಾ ಕ್ರಮಗಳನ್ನು ಭಹಳ ಜಾಗರುಕತೆಯಿಂದ ನಿಭಾಯಿಸಲಿದೆ. ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡು ನದಿದಡದಲ್ಲಿನ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ತೀರ ನದಿ ಹತ್ತಿರದಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಉತ್ತಮ ಎಂದು ತಹಸೀಲ್ದಾರ ಎಸ್. ಬಿ. ಇಂಗಳೆ ಪತ್ರಿಕೆಗೆ ತಿಳಿಸಿದರು.
ಗುರುವಾರ ದುದಗಂಗಾ ಜಲಾಶಯದಿಂದ 14120 ಕ್ಯೂಸೆಕ್ಸ , ರಾಜಾಪುರ ಡ್ಯಾಂ ದಿಂದ 65870 ಕ್ಯೂಸೆಕ್ಸ ನೀರು ನದಿಗೆ ಹರಿದು ಬರುತ್ತಿದ್ದು, ಗುರುವಾರ ಸಂಜೆಯಿಂದ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ನೀರಿನ ಪ್ರಮಾಣದಲ್ಲಿ ಅಂದರೆ 65000 ಕ್ಯೂಸೆಕ್ಸ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಎಸ್. ನಾಯಕ ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.