![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 9, 2022, 1:15 PM IST
ಬೈಲಹೊಂಗಲ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (ಎನ್ ಇಪಿ) ಶಿಕ್ಷಣದಲ್ಲಿ ಮೂಲಭೂತ ಬದಲಾವಣೆಗಳಾಗಿ ಮಕ್ಕಳ ಕಲಿಕೆಗೆ ಪೂರಕವಾಗಲಿದ್ದು, ಜ್ಞಾನಾರ್ಜನೆಗೆ ಅನುಕೂಲವಾಗಲಿದೆ ಎಂದು ಶಿಕ್ಷಣ ತಜ್ಞ, ಕಲ್ಪವೃಕ್ಷ ಮಾಡೆಲ್ ಶಾಲೆಯ ಮಾರ್ಗದರ್ಶಕ ಡಾ| ಗುರುರಾಜ ಕರ್ಜಗಿ ಹೇಳಿದರು.
ಅವರು ಪಟ್ಟಣದ ಎ.ವಿ.ಢಮ್ಮಣ್ಣಗಿ ವಿಜನ್ ಪೌಂಡೇಷನ್ದ ಕಲ್ಪವೃಕ್ಷ ಮಾಡೆಲ್ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕುರಿತು ಪಾಲಕರೊಂದಿಗೆ ಸಂವಾದ ನಡೆಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಗ್ರಾಮೀಣ ಮತ್ತು ನಗರ ಒಂದೆ ಸಮನವಾದ ಶಿಕ್ಷಣ ಹೊಂದಲಿದೆ. ಮೊದಲಿದ್ದ ಶಿಸ್ತನ್ನು ಈಗ ಮತ್ತೆ ಅದೇ ರೀತಿಗೆ ತರಲಾಗುತ್ತಿದೆ. ಈ ಶಿಕ್ಷಣ ನೀತಿ ಮಕ್ಕಳಿಗೆ ಪ್ರಯೋಜನವಾಗಲಿದೆ.
ಶಿಕ್ಷಣದ ವಿವಿದ ಘಟಕಗಳು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವಲ್ಲಿ ಮುಂದಿನ ಎರಡು ದಶಕಗಳ ಶೆ„ಕ್ಷಣಿಕ ಕ್ಷೇತ್ರಗಳ ಅವಕಾಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರವಾದ ನೀತಿಗೆ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಲ್ಪವೃಕ್ಷ ಶಾಲೆ ಸಿಬಿಎಸ್ಸಿ 11 ನೇ ತರಗತಿ ಪ್ರಾರಂಭಿಸಿ ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡಿದೆ ಎಂದರು. ಮಕ್ಕಳಲ್ಲಿ ಅಗಾಧ ಪ್ರತಿಭೆ ಇರುತ್ತದೆ. ಪ್ರತಿಯೊಬ್ಬ ಮಗುವಿನಲ್ಲೂ ಇರುವ ವಿವಿಧ ಪ್ರತಿಭೆಗಳನ್ನು ಅರಗಿಸಿಕೊಂಡು ಶಿಕ್ಷಕರು ಪಾಠ ಮಾಡಬೇಕು.
ಮಕ್ಕಳನ್ನು ಸಮಾನತೆಯಿಂದ ಕಾಣುವ ಮನೋಭಾವನೆ ಶಿಕ್ಷಕರಲ್ಲಿ ಇರಲೇಬೇಕು. ಅಂದಾಗ ಮಾತ್ರ ಅವರು ಉತ್ತಮ ಶಿಕ್ಷಕರಾಗಲು ಯೋಗ್ಯರು ಎಂದರು. ಪ್ರಾಚಾರ್ಯ ಹಣಮೇಶ ದುಡ್ಯಾಳ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಹರ್ಷಾ ಬಾಬಣ್ಣ ಢಮ್ಮಣಗಿ, ಡಿ.ಆರ್. ಜೋಶಿ, ಆಡಳಿತಾಧಿ ಕಾರಿ ರಾಜಶೇಖರ ಕೋತಂಬ್ರಿ ಹಾಗೂ ಪಾಲಕರು ಇದ್ದರು. ವಿದ್ಯಾರ್ಥಿ ಭರತ ಪರವಿನಾಯ್ಕರ ಸ್ವಾಗತಿಸಿದರು. ವಿನಯ ಹಾದಿಮನಿ, ಭೂಮಿಕಾ ಬಡಿಗೇರ ನಿರೂಪಿಸಿದರು. ಮದನ ಸಿದ್ನಾಳ ವಂದಿಸಿದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.