![Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ](https://www.udayavani.com/wp-content/uploads/2024/07/COW-a-415x224.jpg)
ವೈಷ್ಣವರ ಪವಿತ್ರ ದಿನ ‘ಶಯನಿ ಏಕಾದಶಿ’
Team Udayavani, Jul 10, 2022, 1:31 PM IST
![shayani ekadashi](https://www.udayavani.com/wp-content/uploads/2022/07/shayani-620x342.jpg)
ಶಯನಿ ಏಕಾದಶಿಯನ್ನು ಮಹಾ ಏಕಾದಶಿ ಎಂದು ಕರೆಯುತ್ತಾರೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯು ವಿಷ್ಣುವಿನ ಅನುಯಾಯಿಗಳಿಗೆ ಪರಮ ಪವಿತ್ರವಾಗಿದೆ.
ಈ ದಿನದಂದು ಭಗವಾನ್ ಶ್ರೀ ವಿಷ್ಣು ಶೇಷನಾಗನ ಮೇಲೆ ಮಲಗುತ್ತಾನೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು ಪ್ರಬೋಧಿನಿ ಏಕಾದಶಿಯ ದಿನದಂದು ನಾಲ್ಕು ತಿಂಗಳ ನಂತರ ಅಂತಿಮವಾಗಿ ಎಚ್ಚರಗೊಳ್ಳುತ್ತಾನೆ. ಭಗವಂತನ ಕ್ಷೀರಸಾಗರದಲ್ಲಿ ಮಲಗುವ ಈ ನಾಲ್ಕು ತಿಂಗಳ ಅವಧಿಯನ್ನು ‘ಚಾತುರ್ಮಾಸ್ಯ’ ಎಂದು ಕರೆಯಲಾಗುತ್ತದೆ.
ದೇವಶಯನಿ ಏಕಾದಶಿ ಅಥವಾ ಶಯನಿ ಏಕಾದಶಿಯು ಚಾತುರ್ಮಾಸ್ಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಈ ದಿನ, ಭಕ್ತರು ವಿಷ್ಣುವಿನ ಆಶೀರ್ವಾದವನ್ನು ಕೋರಲು ಪವಿತ್ರ ಉಪವಾಸ ಆಚರಿಸುತ್ತಾರೆ. ಹಾಗೆಯೇ ಶಂಖ ಚಕ್ರಾದಿ ಲಾಂಛನಗಳನ್ನು ತಪ್ತ ಮುದ್ರಾಧಾರಣೆಯನ್ನೂ ಮಾಡುತ್ತಾರೆ. ಇದು ಪಾಪಗಳನ್ನು ಸುಡುತ್ತದೆ ಮತ್ತು ಎಲ್ಲಾ ರೀತಿಯ ದುಷ್ಟರಿಂದ ರಕ್ಷಿಸುತ್ತದೆ ಎಂಬುದು ನಂಬಿಕೆ ಆಚರಣೆಯು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಈ ಸಮಯದಲ್ಲಿ ಭಗವಂತನನ್ನು ಪೂಜಿಸಿ “ಸುಪ್ತೇತ್ವಯಿ ಜಗನ್ನಾಥೇ ಜಗತ್ಸುಪ್ತಂಭವೇದಿದಂ ವಿಬುದ್ಧೇತ್ವಯಿ ಬುಧ್ಯೇತ ಪ್ರಸನ್ನೋಮೇ ಭವಾಚ್ಯುತ” ಅಂದರೆ ಹೇ ಜಗನ್ನಾಥನೇ ನೀನು ಮಲಗಿದರೆ ಜಗತ್ತೇ ಮಲಗಿದಂತೆ ಯಾವಾಗ ನೀನು ಎಚ್ಚರಗೊಳ್ಳುತ್ತೀಯೋ ಆಗ ನಾವು ಎಚ್ಚರಗೊಳ್ಳುತ್ತೇವೆ. ಆದ್ದರಿಂದ ಎಲೈ ಅಚ್ಯುತನೇ ನೀನು ಪ್ರಸನ್ನನಾಗು ಎಂದು ಪ್ರಾರ್ಥಿಸಬೇಕು. ಸಂತೋಷ, ಸಮೃದ್ಧಿ ಮತ್ತು ಯಶಸ್ವಿ ಜೀವನದೊಂದಿಗೆ ಈ ವ್ರತವನ್ನು ಆಚರಿಸುವುದರಿಂದ ಭಕ್ತರು ಮೋಕ್ಷವನ್ನು ಸಹ ಪಡೆಯಬಹುದು.
ವೈಷ್ಣವೀ.ಜೆ.ರಾವ್
ತೃತೀಯ ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ, ಪುತ್ತೂರು
ಟಾಪ್ ನ್ಯೂಸ್
![Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ](https://www.udayavani.com/wp-content/uploads/2024/07/COW-a-415x224.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ](https://www.udayavani.com/wp-content/uploads/2024/07/COW-a-150x81.jpg)
Surathkal: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ: ಮೂವರು ಆರೋಪಿಗಳು ಪರಾರಿ
![Kharajola](https://www.udayavani.com/wp-content/uploads/2024/07/Kharajola-150x90.jpg)
MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ
![Dravid–gavskar](https://www.udayavani.com/wp-content/uploads/2024/07/Dravid-gavskar-150x90.jpg)
Indian Cricket; ರಾಹುಲ್ ದ್ರಾವಿಡ್ಗೆ ಭಾರತ ರತ್ನ ಕೊಡಿ: ಗವಾಸ್ಕರ್
![rain 21](https://www.udayavani.com/wp-content/uploads/2024/07/rain-21-150x95.jpg)
Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ
![Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/Bha-150x73.jpg)
Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.