ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್: 7ನೇ ಸ್ಥಾನಕ್ಕೆ ಕುಸಿದ ಮುರಳಿ ಶ್ರೀಶಂಕರ್
Team Udayavani, Jul 17, 2022, 11:58 PM IST
ಯೂಜೀನ್ (ಯುಎಸ್ಎ): ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ ಲಾಂಗ್ಜಂಪ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪುರುಷ ಆ್ಯತ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುರಳಿ ಶ್ರೀಶಂಕರ್ 7ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. 7.96 ಮೀಟರ್ ಅವರ ನೆಗೆತದ ಗರಿಷ್ಠ ದೂರವಾಗಿತ್ತು.
ಶ್ರೀಶಂಕರ್ ಪದಕವೊಂದನ್ನು ಗೆದ್ದು ಇತಿಹಾಸ ನಿರ್ಮಿಸಬಹುದೆಂಬ ದೂರದ ನಿರೀಕ್ಷೆಯೊಂದಿತ್ತು. ಆದರೆ ಇಲ್ಲಿ ಅವರ ಸಾಧನೆ ಪ್ರಸಕ್ತ ಋತುವಿನ ಶ್ರೇಷ್ಠ ವೈಯಕ್ತಿಕ ದಾಖಲೆಯಾದ 8.36 ಮೀಟರ್ಗಿಂತಲೂ ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ಅರ್ಹತಾ ಸುತ್ತಿಗಿಂತಲೂ (8 ಮೀಟರ್) ಕಡಿಮೆ ಸಾಧನೆಯಾಗಿತ್ತು.
ಮುರಳಿ ಶ್ರೀಶಂಕರ್ 3 ಕ್ರಮಬದ್ಧ ನೆಗೆತ ದಾಖಲಿಸಿದರು. ಇದರಲ್ಲಿ ಗರಿಷ್ಠ ದೂರದ ಮೊದಲ ನೆಗೆತವೂ ಸೇರಿತ್ತು (7.96 ಮೀ.). ಬಳಿಕ 4ನೇ ಜಂಪ್ನಲ್ಲಿ 7.89 ಮೀ. ಹಾಗೂ ಕೊನೆಯ ಜಂಪ್ನಲ್ಲಿ 7.83 ಮೀ. ದೂರ ದಾಖಲಿಸಿದರು. ಉಳಿದ 3 ನೆಗೆತಗಳು ಫೌಲ್ ಆದವು.
ಚೀನದ ಜಿಯಾನಾನ್ ವಾಂಗ್ ಚಿನ್ನ (8.36 ಮೀ.) ಮತ್ತು ಗ್ರೀಸ್ನ ಒಲಿಂಪಿಕ್ಸ್ ಚಾಂಪಿಯನ್ ಮಿಲ್ಟಿಯಾಡಿಸ್ ಟೆಂಟೋಗ್ಲೂ ಬೆಳ್ಳಿ (8.30 ಮೀ.), ಸ್ವಿಜರ್ಲೆಂಡ್ನ ಸೈಮನ್ ಇಹ್ಯಾಮರ್ ಕಂಚು ಗೆದ್ದರು (8.16 ಮೀ.).
ತಂದೆಗೆ ನಿರಾಸೆ
“6 ಪ್ರಯತ್ನಗಳಲ್ಲಿ ಒಮ್ಮೆಯೂ 8 ಮೀಟರ್ ಗಡಿ ತಲುಪಲು ಸಾಧ್ಯ ವಾಗ ದಿದ್ದುದು ನಿಜಕ್ಕೂ ಆತನ ದುರದೃಷ್ಟ’ ಎಂಬುದಾಗಿ ಶ್ರೀಶಂಕರ್ ಅವರ ಅವರ ತಂದೆ ಹಾಗೂ ಕೋಚ್ ಕೂಡ ಆಗಿರುವ ಎಸ್. ಮುರಳಿ ಹೇಳಿದರು.
“ಆತನ 3ನೇ ಜಂಪ್ ಕೇವಲ 3 ಎಂ.ಎಂ. ಅಂತರದಿಂದ ಫೌಲ್ ಆಯಿತು. ಇದು ಕ್ರಮಬದ್ಧ ನೆಗೆತವಾಗಿದ್ದರೆ ಕನಿಷ್ಠ 8.16 ಮೀ. ದೂರದ ಸಾಧನೆ ದಾಖಲಾಗುವ ಮೂಲಕ ಪದಕವೊಂದನ್ನು ಜಯಿಸುತ್ತಿದ್ದ’ ಎಂಬುದು ಮುರಳಿ ಅನಿಸಿಕೆ.
ಪಾರುಲ್ ಚೌಧರಿ 12ನೇ ಸ್ಥಾನ
3,000 ಮೀ. ಸ್ಟೀಪಲ್ಚೇಸ್ನಲ್ಲಿ ಪಾರುಲ್ ಚೌಧರಿ 9:38.09 ಸೆಕೆಂಡ್ಸ್ ಗಳ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರ್ಪಡಿ ಸಿದರೂ ಫೈನಲ್ ಪ್ರವೇಶಿಸುವಲ್ಲಿ ವಿಫಲ ರಾದರು. ಹೀಟ್ನಲ್ಲಿ 12ನೇ, ಒಟ್ಟಾರೆ ಯಾಗಿ 31ನೇ ಸ್ಥಾನಕ್ಕೆ ಕುಸಿದರು.
ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ಎಂ.ಪಿ. ಜಬೀರ್ ನಿರ್ವಹಣೆಯೂ ಕಳಪೆ ಯಾಗಿತ್ತು. ಹೀಟ್ನಲ್ಲಿ ಕೊನೆಯವರಾದರೆ (7ನೇ ಸ್ಥಾನ), ಒಟ್ಟಾರೆಯಾಗಿ 31ನೇ ಸ್ಥಾನಕ್ಕೆ ಇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?
Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ
Delhi: ಬೈಕ್ ನಲ್ಲಿದ್ದ ಪೊಲೀಸ್ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ
Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ
Ibbani Tabbida Ileyali 50 ಸ್ಕ್ರೀನ್ನಿಂದ 200 ಸ್ಕ್ರೀನ್ವರೆಗೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.