![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 1, 2022, 6:50 AM IST
ಎನ್ಎಸಿಎಚ್ ಲಭ್ಯತೆ:
ವೇತನ, ಪಿಂಚಣಿ, ಲಾಭಾಂಶ, ಬಡ್ಡಿ ಮುಂತಾದವುಗಳ ವರ್ಗಾವಣೆಗೆ ಬ್ಯಾಂಕ್ಗಳು ಬಳಸುವಂಥ ದೊಡ್ಡ ಪ್ರಮಾಣದ ಪಾವತಿ ವ್ಯವಸ್ಥೆಯೇ ನ್ಯಾಷನಲ್ ಅಟೋಮೇಟೆಡ್ ಕ್ಲಿಯರಿಂಗ್ ಹೌಸ್(ಎನ್ಎಸಿಎಚ್). ಈವರೆಗೆ ಇದು ಬ್ಯಾಂಕ್ನ ಕೆಲಸದ ದಿನಗಳಲ್ಲಿ ಮಾತ್ರವೇ ಲಭ್ಯವಿರುತ್ತಿತ್ತು. ಆದರೆ, ಸೋಮವಾರದಿಂದ ವಾರದ ಎಲ್ಲ ದಿನಗಳಲ್ಲೂ ಎನ್ಎಸಿಎಚ್ ಲಭ್ಯವಿರಲಿದೆ.
ಎಟಿಎಂ ವಹಿವಾಟು ದುಬಾರಿ:
ಎಟಿಎಂ ಇಂಟರ್ಜೇಂಚ್ ಶುಲ್ಕ ಹೆಚ್ಚಳದ ಬಗ್ಗೆ ಜೂನ್ನಲ್ಲೇ ಆರ್ಬಿಐ ಘೋಷಿಸಿತ್ತು. ಅದರಂತೆ, ಆ.1ರಿಂದ ಇದು ಜಾರಿಯಾಗಲಿದ್ದು, ಎಟಿಎಂ ಕೇಂದ್ರಗಳಲ್ಲಿ ನೀವು ಮಾಡುವ ಹಣಕಾಸು ಹಾಗೂ ಹಣಕಾಸೇತರ ವಹಿವಾಟಿನ ಮೇಲೆ ವಿಧಿಸಲಾಗುವ ಶುಲ್ಕ ಹೆಚ್ಚಳವಾಗಲಿದೆ. ಪ್ರತಿ ಹಣಕಾಸು ವಹಿವಾಟಿಗಿರುವ 15ರೂ. ಶುಲ್ಕವನ್ನು 17ರೂ.ಗೆ, ಹಣಕಾಸೇತರ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಶುಲ್ಕವನ್ನು 5ರೂ.ನಿಂದ 6 ರೂ.ಗೆ ಏರಿಕೆ ಮಾಡಲಾಗಿದೆ.
ಅಂಚೆ ಕಚೇರಿ ಶುಲ್ಕ ಪರಿಷ್ಕರಣೆ:
ಭಾರತೀಯ ಅಂಚೆ ಪಾವತಿ ಬ್ಯಾಂಕ್(ಐಪಿಪಿಬಿ)ನಲ್ಲಿ ಖಾತೆ ಹೊಂದಿರುವವರು ಇನ್ನು ಮುಂದೆ ಮನೆ ಬಾಗಿಲಿನ ಸೇವೆಗೆ ಹೆಚ್ಚಿನ ಶುಲ್ಕ ತೆರಬೇಕು. ಈವರೆಗೆ ಮನೆಗೇ ಬಂದು ಸೇವೆ ಒದಗಿಸಿದರೆ ಶುಲ್ಕವಿರಲಿಲ್ಲ. ಇನ್ನು ಮುಂದೆ ಗ್ರಾಹಕರು ಇಂಥ ಸೇವೆಗಳಿಗೆ 20 ರೂ. ಹಾಗೂ ಜಿಎಸ್ಟಿಯನ್ನು ಪಾವತಿಸಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕ್ ಶುಲ್ಕ ಹೆಚ್ಚಳ:
ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಎಟಿಎಂ ಕೇಂದ್ರಗಳಲ್ಲಿನ ವಹಿವಾಟು ಶುಲ್ಕ ಮತ್ತು ಚೆಕ್ ಬುಕ್ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಆ.1ರಿಂದಲೇ ಇದು ಜಾರಿಯಾಗಲಿದೆ. ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಿಂಗಳಿಗೆ 4 ಬಾರಿಯಷ್ಟೇ ಉಚಿತವಾಗಿ ಹಣ ವಿತ್ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಮಾಡಿದರೆ ಪ್ರತಿ ವಹಿವಾಟಿನ ಮೇಲೆ 150 ರೂ. ಶುಲ್ಕ ವಿಧಿಸಲಾಗುತ್ತದೆ.
ಎಲ್ಪಿಜಿ ಸಿಲಿಂಡರ್ ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಸೋಮವಾರ ಎಲ್ಪಿಜಿ ಸಿಲಿಂಡರ್ ರೇಟ್ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.