ಕುಂಬಳೆ: ವಂಚನೆ ಆರೋಪ; ನೈಜೀರಿಯ ಪ್ರಜೆಯ ಬಂಧನ
Team Udayavani, Aug 3, 2022, 12:06 AM IST
ಕುಂಬಳೆ: ಹರ್ಬಲ್ ಉತ್ಪನ್ನ ವ್ಯಾಪಾರದಲ್ಲಿ ಲಾಭಾಂಶ ನೀಡುವುದಾಗಿ ಆಮಿಷ ತೋರಿಸಿ 43.2 ಲಕ್ಷ ರೂ. ಪಡೆದು ಬಳಿಕ ಹಿಂದಿರುಗಿಸದೆ ವಂಚಿಸಿದ ಆರೋಪದಲ್ಲಿ ನೈಜೀರಿಯ ಪ್ರಜೆ ಅಂತೋನಿ ಒಗನೆ ರೋಬೊ ಎಫಿದರ್ (43)ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಈತನಿಂದ ಲ್ಯಾಪ್ಟಾಪ್, 4 ಮೊಬೈಲ್ ಫೋನ್, 7 ಎಟಿಎಂ ಕಾರ್ಡ್, 3 ಪಾಸ್ಪೋರ್ಟ್ ಮತ್ತು ಡಾಲರ್ ಜೆರಾಕ್ಸ್ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವು ಬೆಂಗಳೂರಿಗೆ ತೆರಳಿ ತನಿಖೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನೆದರ್ಲ್ಯಾಂಡ್ ಪ್ರಜೆಗಳಾದ ಎಲಿನ್ ಜಾನ್ಸನ್, ಮೆಲ್ವಿನ್ ಪೆರಿ, ಫೋಲ್ ವೈಯಿಲ್, ಇಂಗ್ಲೆಂಡ್ ಕೆಂಬ್ರಿಡ್ಜ್ ನಿವಾಸಿ ಡಾ| ಜೋರ್ಜ್ ಎಡ್ವರ್ಡ್, ತಮಿಳುನಾಡಿನ ವೆಲ್ಲೂರಿನ ಅನಿಲ್ ಪ್ರಕರಣದ ಇತರ ಆರೋಪಿಗಳಾಗಿದ್ದು ಇವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾಸರಗೋಡು ವಿದ್ಯಾನಗರದ ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ಮಾಧವನ್ ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.