![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 7, 2022, 7:05 AM IST
ಬೀಜಿಂಗ್: ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್ ವಿರುದ್ಧ ತಿರುಗಿಬಿದ್ದಿರುವ ಚೀನ ಶನಿವಾರ ಮತ್ತೆ ಪ್ರಚೋದನೆಯನ್ನು ಹೆಚ್ಚಿಸಿದೆ.
ಸೇನಾ ಕವಾಯತು ಹೆಸರಿನಲ್ಲಿ ತೈವಾನ್ ಜಲಸಂಧಿಯಲ್ಲಿ ಭಾರೀ ಸಂಖ್ಯೆಯ ಚೀನ ವಿಮಾನಗಳು ಮತ್ತು ನೌಕೆಗಳು ಸಂಚರಿಸತೊಡಗಿದ್ದು, ಅಮೆರಿಕವು ನಮ್ಮ ಮೇಲೆ ದಾಳಿ ನಡೆಸಲು ತುದಿಗಾಲಲ್ಲಿ ನಿಂತಿದೆ ಎಂದು ತೈವಾನ್ ಆರೋಪಿಸಿದೆ.
ಇದರ ಬೆನ್ನಲ್ಲೇ ತೈವಾನ್ ಕೂಡ ಸಶಸ್ತ್ರ ಪಡೆಗಳಿಗೆ ಅಲರ್ಟ್ ಜಾರಿ ಮಾಡಿದ್ದು, ದ್ವೀಪದ ಸುತ್ತಲೂ ವೈಮಾನಿಕ ಮತ್ತು ನೌಕಾ ಗಸ್ತು ಆರಂಭಿಸಿದೆ. ತನ್ನಲ್ಲಿರುವ ಕ್ಷಿಪಣಿ ವ್ಯವಸ್ಥೆಯನ್ನೂ ಸಕ್ರಿಯಗೊಳಿಸಿದೆ.
ಇನ್ನೊಂದೆಡೆ, ಶುಕ್ರವಾರ ರಾತ್ರಿ ಕಿನ್ಮೆನ್ ದ್ವೀಪದ ಸಮೀಪ ಚೀನಾದ್ದು ಎನ್ನಲಾದ ನಾಲ್ಕು ಡ್ರೋನ್ಗಳು ಹಾರಾಟ ನಡೆಸಿವೆ. ಇದು ಕಣ್ಣಿಗೆ ಬೀಳುತ್ತಿದ್ದಂತೆ ತೈವಾನ್ ಸೇನೆಯು ಗುಂಡಿನ ದಾಳಿ ನಡೆಸಿ, ಎಚ್ಚರಿಕೆ ನೀಡಿದೆ.
“ಪ್ರಜಾಸತ್ತಾತ್ಮಕ ತೈವಾನ್ಗೆ ಅಂತಾರಾಷ್ಟ್ರೀಯ ಸಮುದಾಯವು ಬೆಂಬಲ ನೀಡಬೇಕು. ಪ್ರಾದೇಶಿಕ ಭದ್ರತಾ ಪರಿಸ್ಥಿತಿಗೆ ಧಕ್ಕೆ ತರುವಂಥ ಪ್ರಚೋದನಾತ್ಮಕ ಕ್ರಮಗಳಿಗೆ ತಡೆ ತರಬೇಕು’ ಎಂದು ತೈವಾನ್ ಅಧ್ಯಕ್ಷರಾದ ಸೈ ಇಂಗ್-ವೆನ್ ಮನವಿ ಮಾಡಿದ್ದಾರೆ.
ತೈವಾನ್ ರಕ್ಷಣಾ ಇಲಾಖೆ ಅಧಿಕಾರಿ ಶವವಾಗಿ ಪತ್ತೆ!
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪಾಧ್ಯಕ್ಷರಾದ ಔ ಯಾಂಗ್ ಲಿ-ಸಿಂಗ್ ಅವರು ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತೈವಾನ್ನ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಔ ಯಾಂಗ್ ಅವರು ಕೆಲಸದ ನಿಮಿತ್ತ ದಕ್ಷಿಣ ತೈವಾನ್ಗೆ ಹೋಗಿದ್ದರು. ಶನಿವಾರ ಹೋಟೆಲ್ ಕೊಠಡಿಯಲ್ಲಿ ಅವರ ಮೃತದೇಹ ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚೀನ-ತೈವಾನ್ ನಡುವೆ ಯುದ್ಧದ ಕಾರ್ಮೋಡ ಹಬ್ಬಿರುವಾಗಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.