ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ


Team Udayavani, Aug 8, 2022, 6:25 AM IST

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸರ್ದಾರ್‌ ಸಿಂಗ್‌ಜಿ ರಾವ್‌ಜಿ ರಾಣ (1870-1957)
ಶಾಲೆಯಲ್ಲಿ ಮೋಹನ್‌ದಾಸ್‌ ಗಾಂಧಿಯ­ವರ ಸಹಪಾಠಿಯಾಗಿದ್ದ ಸರ್ದಾರ್‌ ಸಿಂಗ್‌ಜಿ ರಾವ್‌ಜಿ ರಾಣ ಅವರು ತಮ್ಮ ಬ್ಯಾರಿಸ್ಟರ್‌ ಓದಿನ ಬಳಿಕ ಪ್ಯಾರಿಸ್‌ಗೆ ತೆರಳಿದರು. ಅಲ್ಲಿನ ಕ್ಯಾಂಬೆ ಆಭರಣ ವ್ಯಾಪಾರಿಗಳಿಗೆ ಸಹಾಯಕರಾಗಿದ್ದರು. ಅನೇಕ ಭಾರತೀಯ ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾ­ದರು. 1905ರಲ್ಲಿ ಇಂಡಿಯನ್‌ ಹೋಮ್‌ರೂಲ್‌ ಸೊಸೈಟಿ ಸಂಸ್ಥಾಪನ ಸದಸ್ಯ­ರಾದರು. ಸಾವರ್ಕರ್‌ ಅವರ ನಿಷೇಧಿತ ಪುಸ್ತಕಗಳ ಮುದ್ರಣ, ಲಾಲಾ ಲಜಪತ್‌ರಾಯ್‌ ಅವರು ತಂಗಲು ಅವಕಾಶ ಸೇರಿದಂತೆ ಭಾರತೀಯ ರಾಷ್ಟ್ರೀಯ ಚಳವಳಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು.

ನರಸಿಂಹ ಚಿಂತಮನ್‌ ಕೇಳ್ಕರ್‌ (1872-1962)
ಬಾಲಗಂಗಾಧರ ತಿಲಕರ ನಿಕಟವರ್ತಿ­ಯಾಗಿದ್ದ ನರಸಿಂಹ ಚಿಂತಮನ್‌ ಕೇಳ್ಕರ್‌ ಮರಾಠಿ ಬರಹಗಾರರಾಗಿ, ವಕೀಲರಾಗಿ, ರಾಷ್ಟ್ರೀಯವಾದಿ ನಾಯಕ­ನಾಗಿ ಕಾಣ ಸಿಗುತ್ತಾರೆ. ಗಾಂಧೀಜಿ ಅವರ ಅಸಹಕಾರ ಚಳವಳಿ ಬಳಿಕ ಸ್ವರಾಜ್‌ ಪಕ್ಷವನ್ನು ಸೇರಿದರು. ತಿಲಕರ ನಿಧನಾನಂತರ ಕೇಸರಿ ಪತ್ರಿಕೆಯ ಸಂಪಾದಕರಾಗಿ, ಟ್ರಸ್ಟಿಯಾಗಿ ಹಲವು ವರ್ಷ ನಡೆಸಿದರು. ಸಾಹಿತಿ ಸಾಮ್ರಾಟ್‌ ತಾತ್ಯಾಸಾಹೇಬ್‌ ಕೇಳ್ಕರ್‌ ಎಂದೇ ಪ್ರಸಿದ್ದ‌ರು.

ಪುರುಷೋತ್ತಮ್‌ ದಾಸ್‌ ತಂಡನ್‌(1882-1962)
ವಂಗಭಂಗ ಚಳವಳಿಯಿಂದ ಪ್ರಭಾವಿತ­ರಾದ ಪುರುಷೋತ್ತಮ್‌ ದಾಸ್‌ ತಂಡನ್‌ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರು. ಕಾಂಗ್ರೆಸ್‌ಗೆ ಹತ್ತಿರವಾಗಿ ಗೋಪಾಲ­ಕೃಷ್ಣಗೋಖಲೆ ಅವರ ಅಂಗ ರಕ್ಷಕರಂತೆ ಅಧಿವೇಶನದಲ್ಲಿ ಭಾಗವಹಿಸಿ ದರು. ವಕೀಲರಾಗಿದ್ದ ಅವರು 1931ರ ದುಂಡು ಮೇಜಿನ ಸಮ್ಮೇಳನದ ಅನಂತರ ಭಾರತದಲ್ಲಿ ಬಂಧಿತರಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಂಡನ್‌ ಕೂಡ ಇದ್ದರು.

ವಿನಾಯಕ ದಾಮೋದರ ಸಾವರ್ಕರ್‌(1883-1966)
ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್‌ ಚೇತನ ವಿನಾಯಕ ದಾಮೋ ದರ ಸಾವರ್ಕರ್‌. ದೇಶದ ವಿವಿಧ ವಿಷಯಗಳ ಬಗ್ಗೆ ಚಿಂತಿಸಿದ ವಾಗ್ಮಿ, ಲೇಖಕ, ಇತಿಹಾಸಕಾರ, ಕವಿ, ತತ್ವಶಾ ಸ್ತ್ರಜ್ಞ. ಕ್ರಾಂತಿಕಾರಿ­ಯಾಗಿ ಅವರು ಬರೆದ ಪುಸ್ತಕಗಳನ್ನು ಬ್ರಿಟಿಷ್‌ ಸರಕಾರ ನಿಷೇಧಿಸಿತ್ತು. ಭಾರತೀಯರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಿದ ಕಾರಣ ಅವರನ್ನು ಕೋಮುವಾದಿ ಎಂದು ಬಣ್ಣಿಸಲಾಗಿತ್ತು.

ಜಿತೇಂದ್ರನಾಥ ಮುಖರ್ಜಿ (1879-1915)
ಬ್ರಿಟಿಷರ ವಿರುದ್ಧ ಸಿಡಿದೆದ್ದ ಯುವಕ ಜಿತೇಂದ್ರನಾಥ್‌ ಮುಖರ್ಜಿ. ಇವರನ್ನು ಬಾಗಾ ಜತಿನ್‌ ಎಂದು ಕರೆಯುತ್ತಿದ್ದರು. 1900ರಲ್ಲಿ ಅನುಶೀಲನ ಸಮಿತಿಯ ರಚನೆಗೆ ಕಾರಣರಾದ ಅವರು, ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆದು ರಹಸ್ಯ ಸಭೆಗಳ ಮೂಲಕ ರಾಷ್ಟ್ರೀಯ ಚಿಂತನೆಗಳನ್ನು ಬಿತ್ತಿದರು. ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಬಂದೂಕು, ಬಾಂಬ್‌ಗಳನ್ನು ಬಳಸಿ ಸ್ಫೋಟಗಳನ್ನು ನಡೆಸುತ್ತಿದ್ದರು. ಅಲಿಪೋರ್‌ ಬಾಂಬ್‌ ಪ್ರಕರಣದಲ್ಲಿ ಇವರೂ ಆರೋಪಿ.

ಅರವಿಂದ ಘೋಷ್‌ (1872-1950)
ಸ್ವಾತಂತ್ರ್ಯ­ಕ್ಕಾಗಿ ಹೋರಾಡಿ ನಂತರದಲ್ಲಿ ಅಧ್ಯಾತ್ಮದೆಡೆಗೆ ಪರಿವರ್ತನೆಗೊಂಡ ಚೇತನ ಅರವಿಂದ ಘೋಷರು. ಇಂಡಿಯನ್‌ ಸಿವಿಲ್‌ ಸರ್ವಿಸ್‌ನಲ್ಲಿ ಅನುತ್ತೀರ್ಣರಾದ ಅರವಿಂದರೂ ಆಂಗ್ಲ ಪ್ರಾಧ್ಯಾಪಕರಾದರು. ಆ ವೇಳೆಗೆ ಬ್ರಿಟಿಷರು ದೇಶಕ್ಕೆ ಮಾಡುತ್ತಿದ್ದ ಅನ್ಯಾಯವನ್ನು ಅರಿತರು. ವಂದೇ ಮಾತರಂ ಪತ್ರಿಕೆ ಹೊರತಂದು ಬ್ರಿಟಿಷರ ವಿರುದ್ಧ ಕ್ರಾಂತಿ ಕಾರಿ ಚಿಂತನೆಗಳನ್ನು ಜಾಗೃತಗೊಳಿಸಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.