ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
Team Udayavani, Aug 18, 2022, 8:54 AM IST
ಕೋಟ: ಸಾಸ್ತಾನ ಸಮೀಪ ಕೋಡಿ ಕನ್ಯಾಣ ಗ್ರಾ.ಪಂ. ವ್ಯಾಪ್ತಿಯ ಕೋಡಿ ಹೊಸಬೆಂಗ್ರೆ ಪ್ರದೇಶದಲ್ಲಿ ಮತ್ತೆ ಕಡಲ್ಕೊರೆತ ಹೆಚ್ಚಿದ್ದು, ಬುಧವಾರ ಇಲ್ಲಿನ ಸಂಪರ್ಕ ರಸ್ತೆ ಹಾಗೂ ಮನೆ ಅಲೆಗಳ ಹೊಡೆತದಿಂದ ಅಪಾಯಕ್ಕೆ ಸಿಲುಕಿತ್ತು.
ಈ ಹಿಂದೆ ಕೂಡ ಈ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದ್ದು, ಮೀನು ಗಾರಿಕೆ ಸಚಿವ ಎಸ್. ಅಂಗಾರ ಆ. 10ರಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ತತ್ಕ್ಷಣ ಪರಿಹಾರ ದೊರೆತಿರಲಿಲ್ಲ.
ತಾತ್ಕಾಲಿಕ ಪರಿಹಾರ: ಮಂಗಳವಾರ ಕಡಲ್ಕೊರೆತ ಇನ್ನಷ್ಟು ಹೆಚ್ಚುತ್ತಿದ್ದಂತೆ ಗ್ರಾ.ಪಂ. ಮುಖ್ಯಸ್ಥರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಗಮನಕ್ಕೆ ತಂದಿದ್ದು ಶಾಸಕರು ತತ್ಕ್ಷಣ ದಂಡೆಗೆ ಕಲ್ಲು ಅಳವಡಿಸಲು ಕ್ರಮ ಕೈಗೊಂಡರು.
ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್, ಸದಸ್ಯ ಅಂತೋನಿ ಡಿ’ಸೋಜಾ, ಗೀತಾ ಖಾರ್ವಿ, ಪಿಡಿಒ ರವೀಂದ್ರ ರಾವ್, ಮಾಜಿ ಸದಸ್ಯ ಆಣ್ಣಪ್ಪ ಕುಂದರ್, ರಾಘವೇಂದ್ರ ಸುವರ್ಣ, ಗುತ್ತಿಗೆದಾರ ಅರುಣ್ ಹೆಗ್ಡೆ ಯಡಾಡಿ ಇದ್ದರು.
ಇದನ್ನೂ ಓದಿ : ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.