ಸಣ್ಣ ಚೇಸಿಂಗ್‌; ಭಾರತವೇ ಸರಣಿ ಕಿಂಗ್‌:  ಭಾರತಕ್ಕೆ ಸತತ 2ನೇ ಗೆಲುವು

ಏಕದಿನ ಸರಣಿ ವಶ ; ಮಿಂಚಿದ ಠಾಕೂರ್‌, ಸ್ಯಾಮ್ಸನ್‌

Team Udayavani, Aug 20, 2022, 11:04 PM IST

ಸಣ್ಣ ಚೇಸಿಂಗ್‌; ಭಾರತವೇ ಸರಣಿ ಕಿಂಗ್‌:  ಭಾರತಕ್ಕೆ ಸತತ 2ನೇ ಗೆಲುವು

ಹರಾರೆ: ಮತ್ತೊಂದು ಜಬರ್ದಸ್ತ್ ಬೌಲಿಂಗ್‌ ಆಕ್ರಮಣದ ಮೂಲಕ ಆತಿಥೇಯ ಜಿಂಬಾಬ್ವೆಯನ್ನು ಹಿಡಿದು ನಿಲ್ಲಿಸಿದ ಭಾರತ ಏಕದಿನ ಸರಣಿಯನ್ನು ಸುಲಭದಲ್ಲಿ ವಶಪಡಿಸಿ ಕೊಂಡಿತು. ಶನಿವಾರ ನಡೆದ ದ್ವಿತೀಯ ಮುಖಾಮುಖಿಯಲ್ಲಿ ಭಾರತದ ಗೆಲುವಿನ ಅಂತರ 5 ವಿಕೆಟ್‌.

ಬಹುತೇಕ ಇದು ಮೊದಲ ಪಂದ್ಯದ ಪುನರಾವರ್ತನೆಯಾಗಿತ್ತು. ಅಲ್ಲಿಯೂ ಮೊದಲು ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ಸಣ್ಣ ಮೊತ್ತಕ್ಕೆ ಕುಸಿದಿತ್ತು. ಬಳಿಕ ಭಾರತ ನೋಲಾಸ್‌ ಜಯ ಭೇರಿ ಮೊಳಗಿಸಿತ್ತು. ಇಲ್ಲಿಯೂ ಜಿಂಬಾಬ್ವೆ 161 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಸರ್ವಪತನ ಕಂಡಿತು (38.1 ಓವರ್‌). ಆದರೆ ಪ್ರವಾಸಿಗರ 5 ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾದದ್ದು ಜಿಂಬಾಬ್ವೆ ಪಾಲಿನ ಸಮಾಧಾನಕರ ಸಂಗತಿ. ಭಾರತ 25.4 ಓವರ್‌ಗಳಲ್ಲಿ 5 ವಿಕೆಟಿಗೆ 167 ರನ್‌ ಬಾರಿಸಿತು.

ರಾಹುಲ್‌ ಓಪನಿಂಗ್‌
“ಫಾರ್‌ ಎ ಚೇಂಜ್‌’ ಎಂಬಂತೆ ದ್ವಿತೀಯ ಪಂದ್ಯದಲ್ಲಿ ಶಿಖರ್‌ ಧವನ್‌ ಜತೆ ನಾಯಕ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿಳಿದರು. ಅವರ ಬ್ಯಾಟಿಂಗ್‌ ಫಾರ್ಮ್ ಟೀಮ್‌ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿತ್ತು. ಆದರೆ ರಾಹುಲ್‌ 5 ಎಸೆತ ಎದುರಿಸಿ ಕೇವಲ ಒಂದು ರನ್‌ ಮಾಡಿ ವಾಪಸಾದರು. ವೆಸ್ಟ್‌ ಇಂಡೀಸ್‌ ಎದುರಿನ ಫೆ. 9ರ ಅಹ್ಮದಾಬಾದ್‌ ಪಂದ್ಯದ ಬಳಿಕ ರಾಹುಲ್‌ ಬ್ಯಾಟಿಂಗ್‌ ನಡೆಸಿದ್ದು ಇದೇ ಮೊದಲು.

ಕಳೆದ ಪಂದ್ಯದ ಹೀರೋಗಳಾದ ಶಿಖರ್‌ ಧವನ್‌ ಮತ್ತು ಶುಭಮನ್‌ ಗಿಲ್‌ ತಲಾ 33 ರನ್‌ ಬಾರಿಸಿದರು. ಗಿಲ್‌ ಇಲ್ಲಿ ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದರು.

ರಾಹುಲ್‌ ಅವರಂತೆ ಇಶಾನ್‌ ಕಿಶನ್‌ ಅವರ ಬ್ಯಾಟಿಂಗ್‌ ಫಾರ್ಮ್ ಕೂಡ ಭಾರತಕ್ಕೆ ಮಹತ್ವದ್ದಾಗಿತ್ತು. ಆದರೆ ಅವರೂ ನಿರಾಸೆ ಮೂಡಿಸಿದರು. ಕೇವಲ 6 ರನ್‌ ಮಾಡಿ ಪೆವಿಲಿಯನ್‌ ಸೇರಿಕೊಂಡರು. 97 ರನ್ನಿಗೆ 4 ವಿಕೆಟ್‌ ಬಿತ್ತು.

ಮಧ್ಯಮ ಕ್ರಮಾಂಕದ ದೀಪಕ್‌ ಹೂಡಾ ಮತ್ತು ಸಂಜು ಸ್ಯಾಮ್ಸನ್‌ ಎಂದಿನ ಲಯದಲ್ಲಿ ಸಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಹೂಡಾ ತುಸು ಎಚ್ಚರಿಕೆಯಿಂದ ಆಡಿದರೆ, ಸ್ಯಾಮ್ಸನ್‌ ಮುನ್ನುಗ್ಗಿ ಬಾರಿಸತೊಡಗಿದರು. 39 ಎಸೆತಗಳಿಂದ 43 ರನ್‌ ಬಾರಿಸಿದ ಸ್ಯಾಮ್ಸನ್‌ ಈ ಪಂದ್ಯದ ಟಾಪ್‌ ಸ್ಕೋರರ್‌. ಸಿಡಿಸಿದ್ದು 4 ಸಿಕ್ಸರ್‌ ಹಾಗೂ 3 ಬೌಂಡರಿ. ಸಿಕ್ಸರ್‌ ಬಾರಿಸುವ ಮೂಲಕ ಅವರು ಭಾರತದ ಗೆಲುವು ಸಾರಿದರು.

ಪಂದ್ಯಶ್ರೇಷ್ಠ ಗೌರವವೂ ಒಲಿದು ಬಂತು. ದೀಪಕ್‌ ಹೂಡಾ ಗಳಿಕೆ 36 ಎಸೆತಗಳಿಂದ 25 ರನ್‌ (3 ಬೌಂಡರಿ).

ಮಿಂಚಿದ ಶಾರ್ದೂಲ್
ಭಾರತದ ಬೌಲಿಂಗ್‌ ದಾಳಿಗೆ ಜಿಂಬಾಬ್ವೆ ಮತ್ತೊಮ್ಮೆ ತತ್ತರಿಸಿತು. ಈ ಬಾರಿ ಭಾರತದ ಬೌಲಿಂಗ್‌ ಹೀರೋ ಆಗಿ ಮೂಡಿಬಂದವರು ಶಾರ್ದೂಲ್ ಠಾಕೂರ್. ಅವರು ದೀಪಕ್‌ ಚಹರ್‌ ಬದಲು ಆಡುವ ಬಳಗದಲ್ಲಿ ಕಾಣಿಸಿಕೊಂಡು 3 ವಿಕೆಟ್‌ ಕಿತ್ತರು. ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್ ಕೃಷ್ಣ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ದೀಪಕ್‌ ಹೂಡಾ ಒಂದೊಂದು ವಿಕೆಟ್‌ ಕಿತ್ತರು. ಬೌಲಿಂಗ್‌ ದಾಳಿಗಿಳಿದ ಆರೂ ಮಂದಿ ವಿಕೆಟ್‌ ಉರುಳಿಸಿದ್ದೊಂದು ವಿಶೇಷ.

ಜಿಂಬಾಬ್ವೆ ಅಗ್ರ ಕ್ರಮಾಂಕದಲ್ಲಿ ತೀವ್ರ ಕುಸಿತ ಅನುಭವಿಸಿತು. 31 ರನ್ನಿಗೆ 4 ವಿಕೆಟ್‌ ಬಿತ್ತು. ಅನುಭವಿ ಸೀನ್‌ ವಿಲಿಯಮ್ಸ್‌ 42 ಮತ್ತು ರಿಯಾನ್‌ ಬರ್ಲ್ ಅಜೇಯ 39 ರನ್‌ ಮಾಡಿದರು.
ಸರಣಿಯ ಅಂತಿಮ ಪಂದ್ಯ ಸೋಮವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ಜಿಂಬಾಬ್ವೆ-38.1 ಓವರ್‌ಗಳಲ್ಲಿ 161 (ಸೀನ್‌ ವಿಲಿಯಮ್ಸ್‌ 42, ರಿಯಾನ್‌ ಬರ್ಲ್ 39, ಇನೊಸೆಂಟ್‌ ಕಯ 16, ಸಿಕಂದರ್‌ ರಾಜ 16, ಠಾಕೂರ್‌ 38ಕ್ಕೆ 3).

ಭಾರತ-25.4 ಓವರ್‌ಗಳಲ್ಲಿ 5 ವಿಕೆಟಿಗೆ 167 (ಧವನ್‌ 33, ರಾಹುಲ್‌ 1, ಗಿಲ್‌ 33, ಇಶಾನ್‌ 6, ಹೂಡಾ 25, ಸ್ಯಾಮ್ಸನ್‌ ಔಟಾಗದೆ 43, ಅಕ್ಷರ್‌ ಔಟಾಗದೆ 6, ಇತರ 20, ಲ್ಯೂಕ್‌ ಜೊಂಗ್ವೆ 33ಕ್ಕೆ 2).

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌.

ಟಾಪ್ ನ್ಯೂಸ್

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.