ನಿರ್ವಿಕಲ್ಪ ಸಮಾಧಿಯಾದ ಹಳಕರ್ಟಿ ರಾಜಶೇಖರ ಶ್ರೀ
Team Udayavani, Aug 21, 2022, 12:12 PM IST
ವಾಡಿ (ಚಿತ್ತಾಪುರ): ಸಮೀಪದ ಹಳಕರ್ಟಿ ಸಿದ್ದೇಶ್ವರ ಧ್ಯಾನಧಾಮದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿ ಅವರು ತಮ್ಮ ಸಂಕಲ್ಪದಂತೆ ಶನಿವಾರ ಒಂಬತ್ತು ದಿನಗಳ ಜೀವ ನಿರ್ವಿಕಲ್ಪ ಸಮಾಧಿಯಾದರು.
ಶನಿವಾರ ಸಂಜೆ ಧ್ಯಾನಧಾಮದಲ್ಲಿ ಸೇರಿದ್ದ ವಿವಿಧ ಗ್ರಾಮಗಳ ನೂರಾರು ಜನ ಭಕ್ತರು, ಪೂಜ್ಯರ ಧ್ಯಾನ ಮತ್ತು ತಪ್ಪಿಸಿನಲ್ಲಿ ಭಾಗಿಯಾಗುವ ಮೂಲಕ ಭಜನೆ ಹಾಗೂ ಪ್ರವಚನಗಳ ಆಯೋಜನೆ ಮಾಡಿ ಭಕ್ತಿ ಮೆರೆದರು. ಆ.11 ರಿಂದ ಒಂಬತ್ತು ದಿನಗಳ ಕಾಲ ಮೌನಾನುಷ್ಟಾನಕ್ಕೆ ಮುಂದಾದ ಶ್ರೀರಾಜಶೇಖರ ಸ್ವಾಮೀಜಿಯವರು ಪ್ರತಿದಿನ ಸಂಜೆ ಒಂದು ಲೋಟ ಹಾಲು ಮತ್ತು ಜಲಪಾನವನ್ನು ಮಾತ್ರ ಸ್ವೀಕರಿಸಿದ್ದರು. ಆ.20 ರಂದು ನಿರ್ವಿಕಲ್ಪ ಸಮಾಧಿಗೆ ಮುಂದಾದರು. ಆ.28ರ ವರೆಗೆ ಈ ಸಮಾಧಿ ಯೋಗ ನಡೆಯಲಿದ್ದು, ಪೂಜ್ಯರು ಸಮಾದಿಯೊಳಗೆ ಕುಳಿತು ದೇವಿ ಪಾರಾಯಣ ಅಧ್ಯಯನ ಮಾಡುವರು ಎಂದು ಮಠದ ಭಕ್ತರು ಪ್ರಕಟಿಸಿದರು.
ಇದಕ್ಕೂ ಮೊದಲು ಪೂಜ್ಯ ರಾಜಶೇಖರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಯಡ್ರಾಮಿ ತಾಲೂಕಿನ ಆಲೂರು ಸಂಸ್ಥಾನ ಮಠದ ಶ್ರೀಕೆಂಚವೃಷಭೇಂದ್ರ ಶಿವಾಚಾರ್ಯರು, ಸ್ವಾಮೀಜಿಯವರು ಭಕ್ತರ ಒಳಿತಿಗಾಗಿ ಪ್ರಾರ್ಥಿಸಲು ಕಠಿಣ ತಪಸ್ಸಿಗೆ ಮುಂದಾಗಿದ್ದಾರೆ. ಜೀವ ನಿರ್ವಿಕಲ್ಪ ಸಮಾಧಿ ಯೋಗ ಅಷ್ಟು ಸುಲಭದ್ದಲ್ಲ. ಹಾಗಂತ ಪೂಜ್ಯರ ಪ್ರಾಣಕ್ಕೆ ಅಪಾಯವಿಲ್ಲ. ಒಂಬತ್ತು ದಿನಗಳ ನಿರ್ವಿಕಲ್ಪ ಸಮಾಧಿ ಯೋಗ ಧ್ಯಾನ ಸಾಧಕರಿಗೆ ಸಹಜವಾದ ತಪ್ಪಸ್ಸಾಗಿದೆ. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಬಾರದು. ಒಂಬತ್ತು ದಿನಗಳ ನಂತರ ಗೋಡೆ ಒಡೆದ ಬಳಿಕ ಪೂಜ್ಯರು ಹೊರ ಬರುತ್ತಾರೆ. ಅಲ್ಲಿಯ ವರೆಗೂ ಭಕ್ತರು ಪ್ರತಿದಿನ ಭಜನೆ ಹಾಗೂ ಅನ್ನದಾಸೋಹ ಮುಂದುವರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ ಆಲೂರು ಸ್ವಾಮೀಜಿ, ಪೂಜ್ಯರು ಕುಳಿತ ಧ್ಯಾನದ ಕೋಣೆಯ ಬಾಗಿಲನ್ನು ಕಾಂಕ್ರೀಟ್ ಹಾಗೂ ಇಟ್ಟಿಗೆಗಳಿಂದ ಮುಚ್ಚಿದ ನಂತರ ಹೂಮಾಲೆ ಅರ್ಪಿಸಿ ಕರ್ಪೂರ ಬೆಳಗಿದರು.
ಅಳ್ಳೊಳ್ಳಿಯ ಗದ್ದುಗೆ ಮಠದ ಶ್ರೀನಾಗಪ್ಪಯ್ಯ ಸ್ವಾಮೀಜಿ, ಯರಗೋಳದ ಸಂಗನಬಸವ ಸ್ವಾಮೀಜಿ, ಬೆನಕನಹಳ್ಳಿಯ ವಿರಕ್ತ ಮಠದ ಶ್ರೀಕೇದಾರಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಬಸವರಾಜ ಸಜ್ಜನ್, ರಾಘವೇಂದ್ರ ಅಲ್ಲಿಪುರ, ಮಣಿಕಂಠ ರಾಠೋಡ, ರವಿ ನಾಯಕ, ಡಾಕು ರಾಠೋಡ, ವೀರಣ್ಣ ಯಾರಿ, ಭೀಮರಾಯ ನಾಯ್ಕೋಡಿ, ಬಸವರಾಜ ಲೋಕನಳ್ಳಿ, ಶ್ರೀನಾಥ ಇರಗೊಂಡ, ಚಂದ್ರಶೇಖರ ಮೇಲಿನಮನಿ, ವೀರೇಶ ಜೀವಣಗಿ, ನಿಂಗಣ್ಣ ಮಾಸ್ತಾರ, ವೀರೇಶ ಕಪ್ಪಾರ, ಸಿದ್ದು ಬಾವಿಕಟ್ಟಿ ಸೇರಿದಂತೆ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Chikkaballapura: ವಿಶ್ವ ಶಾಂತಿ ದಿನದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ನಡಿಗೆ
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
Bengaluru; ಬಸ್ ಡ್ರೈವರ್ಗೆ ಎದೆನೋವು: ಬ್ರೇಕ್ ಹಾಕಿ ಅಪಾಯ ತಪಿಸಿದ ಎಎಸ್ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.