ಭಾವೈಕ್ಯತೆ ಹರಿಕಾರ ವರವಿ ಮೌನೇಶ್ವರ ಜಾತ್ರೆ ನಾಳೆ

ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ಮಹಾರಥೋತ್ಸವ- ನಾಡಿದ್ದು ಕಡುಬಿನ ಕಾಳಗ

Team Udayavani, Aug 21, 2022, 1:01 PM IST

10

ಶಿರಹಟ್ಟಿ: ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರ ಆ.22 ರಂದು ತಾಲೂಕಿನ ಸುಕ್ಷೇತ್ರ ವರವಿಯಲ್ಲಿ ಮೌನೇಶ್ವರ ದೇವಸ್ಥಾನದಲ್ಲಿ ಬೆ.9 ರಿಂದ 11 ರವರೆಗೆ ಮಹಾಯಜ್ಞ, 11 ಗಂಟೆಗೆ ಮೌನೇಶ್ವರ ಲೀಲಾ ಪ್ರವಚನ, ಸಂಜೆ 5 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾರಥೋತ್ಸವ ಜರುಗಲಿದೆ. ಆ.23 ರಂದು ಮಂಗಳವಾರ ಕಡುಬಿನ ಕಾಳಗ ನಡೆಯಲಿದೆ.

ಕ್ಷೇತ್ರದ ಮಹತ್ವ: ಚರಿತ್ರೆಯಲ್ಲಿ ತಿಳಿಸಿರುವಂತೆ ಹಿಂದೊಮ್ಮೆ ಮೌನೇಶ್ವರ ಸ್ವಾಮಿಗಳೊಂದಿಗೆ ಇಡೀ ಶಿಷ್ಯ ಸಮೂಹ “ಓಂ ಏಕಲಾಕ ಐಂಸೀ ಹಜಾರ ಮುಸಾ ಪೈಗಂಬರ, ಪಾಂಚೋ ಪೀಠ ಜಗದ್ಗುರು ಮೌನೇಶ್ವರಕಾ ಸೀಪತಿ ಗಂಗಾಧರ ಹರಹರ ಮಹಾದೇವ’ ಎಂಬ ಜಯಘೋಷಗಳೊಂದಿಗೆ ಹೊರಟಿದ್ದರು. ಒಂದು ದಿನ ಆ ಹಳ್ಳಿಯ ಹೊರವಲಯದಲ್ಲಿದ್ದ ಗೂಟ ಗಲ್ಲಿಗೆ ಬಲಗಾಲು ತಾಕಿ ಮೌನೇಶರರು ಅಲ್ಲಿಯೇ ಸ್ವಲ್ಪ ಕಾಲ ವಿಶ್ರಮಿಸಲು ಮುಂದಾದರು. ಸರ್ವಾಂತರ್ಯಾಮಿಯಾದ ನೀನೇ ಹೀಗೆ ಕಲ್ಲೆಡವಬೇಕೇ? ಇದರ ಹಿನ್ನೆಲೆ ಏನು ಎಂದು ಶಿಷ್ಯ ಗಣ ವಿಚಾರಿಸಿದಾಗ, ಮುಂದೊಂದು ದಿನ ಈ ಗ್ರಾಮ ಸರ್ವಶ್ರೇಷ್ಠ ಕ್ಷೇತ್ರವೆಂಬ ಕೀರ್ತಿ ಪಡೆಯಲಿದೆ. ನಾನೀಗ ಎಡವಿದ ಕಲ್ಲು ಸ್ವಯಂ ಉದ್ಭವವಾದ ಶಿವಲಿಂಗ. ನನ್ನ ಸರ್ವ ಶಕ್ತಿಯನ್ನೆಲ್ಲ ಈ ಶಿವಲಿಂಗದಲ್ಲಿ ಸಮಾವೇಶಗೊಳಿಸಿದ್ದೇನೆ. ಈ ಗ್ರಾಮದ ಪ್ರತಿಯೊಂದು ಕಲ್ಲು ಪರಮಪವಿತ್ರ ಶಿವಲಿಂಗವಾಗುವುದು. ಹರಿಯುವ ನೀರು ಪುಣ್ಯಪ್ರದ ತೀರ್ಥಕ್ಕೆ ಸಮಾನ ಎಂದು ಮೌನೇಶ್ವರರು ಹೇಳಿದ ಗ್ರಾಮವೇ ವರವಿ ಎಂಬ ಪ್ರತೀತಿ ಇದೆ.

ಎಡವಿದ ಕಲ್ಲೇ ಇಂದು ಪವಿತ್ರ ಕ್ಷೇತ್ರ ವರವಿ ಮೌನೇಶ್ವರ ಕ್ಷೇತ್ರವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ. ವರವಿ ಭಕ್ತರಲ್ಲದೇ ಸುತ್ತಮುತ್ತಲಿನ ಆಸ್ತಿಕರೆಲ್ಲ ಆ ಶಿವಲಿಂಗವನ್ನು ಕಟ್ಟಡವಿಲ್ಲದೇ ಬರೀ ಬಯಲಲ್ಲೇ ಪೂಜಿಸಲಾರಂಭಿಸಿದರು. ಶಿವಲಿಂಗದ ಪವಾಡ ನೂರಾರು, ಸಾವಿರಾರು ಜನರ ವಾಡಿಕೆಯಲ್ಲಿ ಬೆಳೆಯತೊಡಗಿತು. ಆಗ ಆ ಶಿವಲಿಂಗಕ್ಕೊಂದು ಮಂದಿರವಾಗಬೇಕೆಂದು ಮನದಲ್ಲಿ ಯೋಚಿಸಿಕೊಂಡರು. ವಿಜಯಪುರದ ಬಾದಶಹಾನ ಸ್ವಪ್ನದಲ್ಲಿ ಮೌನೇಶ್ವರ ಪ್ರಕಟನಾಗಿ ಶಿವನ ವಿಗ್ರಹ ಬಯಲಲ್ಲಿ ನಿಂತಿದೆ. ಅದಕ್ಕೊಂದು ದಿವ್ಯ, ಭವ್ಯ ಕಟ್ಟಡ ನಿರ್ಮಿಸಬೇಕೆಂದು ಆಜ್ಞಾಪಿಸುತ್ತಾನೆ. ಆಗ ಬಾದಶಹಾನ ವರವಿಗೆ ಬಂದು ಭವ್ಯವಾದ ಆಕರ್ಷಕ ಮಂದಿರ ನಿರ್ಮಿಸುತ್ತಾರೆ. ಅದೇ ಇಂದಿನ ವರವಿಯಲ್ಲಿರುವ ಮೌನೇಶ್ವರ ಮಠ.

ಮೌನೇಶ್ವರರು ವಿಜಯಪುರದಲ್ಲಿ ಆಳ್ವಿಕೆ ಮಾಡುತ್ತಿದ್ದ ಆದಿಲ್‌ಶಾಹಿ ಆಸ್ಥಾನಕ್ಕೆ ಬಂದು ಪವಾಡಗಳನ್ನು ಮೆರೆಯುವ ಮೂಲಕ ರಾಜಾಧಿರಾಜ ಆಸ್ಥಾನಿಕರಿಂದ ಫಕೀರನಾಗಿ ಪೂಜೆಗೊಳ್ಳುತ್ತಾರೆ. ಇಂದಿಗೂ ಅವರ ಉಭಯ ಜನಾಂಗಕ್ಕೆ ಫಕ್ಕೀರನಾಗಿ,ಪರಮಾತ್ಮನಾಗಿ ಪೂಜೆಗೊಳ್ಳುತ್ತಾರೆ. ಅಂದಿನ ನೆನಪಿನ ಅಂಗವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರ ಮಹಾರಥೋತ್ಸವ, ಮಂಗಳವಾರ ವಿಜೃಂಭಣೆಯಿಂದ ಕಡುಬಿನ ಕಾಳಗದೊಂದಿಗೆ ಜಾತ್ರೆ ನಡೆಯುತ್ತದೆ.

-ಪ್ರಕಾಶ ಶಿ.ಮೇಟಿ

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Jagadish Shettar: ಕಾಂಗ್ರೆಸ್‌ನವರಿಂದಲೇ ಸಿಎಂ ಕೆಳಗಿಳಿಸಲು ಯತ್ನ

Jagadish Shettar: ಕಾಂಗ್ರೆಸ್‌ನವರಿಂದಲೇ ಸಿಎಂ ಕೆಳಗಿಳಿಸಲು ಯತ್ನ

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.