ದಿಲ್ಲಿ ಅಬಕಾರಿ ನೀತಿ ಆಪ್ ಸರಕಾರಕ್ಕೆ ಸಂಕಷ್ಟ
Team Udayavani, Aug 22, 2022, 5:50 AM IST
ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರ ರಹಿತ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ದಿಲ್ಲಿ ಆಪ್ ಸರಕಾರಕ್ಕೀಗ ಹೊಸ ಅಬಕಾರಿ ನೀತಿಯ ಸಂಕಷ್ಟ ತಲೆದೋರಿದೆ. ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೂ ಈ ನೀತಿ ಸಂಕಟವಾಗಿದೆ. ಹಾಗಾದರೆ, ಏನಿದು ಹೊಸ ಅಬಕಾರಿ ನೀತಿ? ಈ ಬಗ್ಗೆ ಒಂದು ನೋಟ ಇಲ್ಲಿದೆ.
ಏನಿದು ಅಬಕಾರಿ ನೀತಿ?
ತಜ್ಞರ ಸಮಿತಿಯೊಂದು ನೀಡಿದ ವರದಿ ಪ್ರಕಾರ, ಕೇಜ್ರಿವಾಲ್ ಸರಕಾರ, 2021ರ ನವೆಂಬರ್ 17ರಂದು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಅದರಂತೆ ಖಾಸಗಿ ಕಂಪೆನಿಗಳಿಗೆ ಓಪನ್ ಟೆಂಡರ್ ಮೂಲಕ 849 ಲಿಕ್ಕರ್ ವೆಂಡ್ಸ್ಗಳನ್ನು ನೀಡಲಾಗಿತ್ತು. ಅಲ್ಲದೆ, ದಿಲ್ಲಿ ನಗರವನ್ನು 32 ವಲಯಗಳಾಗಿ ವಿಂಗಡಿಸಿ, ಪ್ರತೀ ವಲಯಕ್ಕೆ 27 ಮಾರಾಟ ಮಳಿಗೆಗಳನ್ನು ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂದು ಶಂಕೆಯಿಂದ ದಿಲ್ಲಿ ಲೆ| ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ವಿಚಿತ್ರವೆಂದರೆ, ಈಗ ಹೊಸ ನೀತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ಹಳೇ ನೀತಿಯನ್ನೇ ಜಾರಿಗೆ ತರಲಾಗಿದೆ.
ಸೀಸೋಡಿಯಾ ವಿರುದ್ಧದ ಆರೋಪ ಏನು?
ಎಫ್ಐಆರ್ ನಲ್ಲಿ ದಾಖ ಲಿಸಿರುವಂತೆ ಮನೀಷ್ ಸಿಸೋ ಡಿಯಾ ಅವರ ಆಪ್ತರು, ಅಬಕಾರಿ ಪರವಾನಗಿಗಳನ್ನು ತಮಗೆ ಬೇಕಾದವರಿಗೆ ನೀಡಿದ್ದು, ಇವರಿಗೆ 4 ರಿಂದ 5 ಕೋಟಿ ರೂ.ಗಳಷ್ಟು ಹಣ ಸಂದಾಯ ಮಾಡಲಾಗಿದೆ. ಡಿಸಿಎಂ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್ ಹಾಕಲಾಗಿದೆ.
ಆಗಿರುವ ಅಕ್ರಮವೇನು?
ಸಿಬಿಐ ಪ್ರಕಾರ, ಅಬಕಾರಿ ನೀತಿ 2021-22 ಅನ್ನು ದಿಲ್ಲಿ ಸರಕಾರ ಸಂಬಂಧಿತರ ಒಪ್ಪಿಗೆ ಪಡೆಯದೆಯೇ ಜಾರಿ ಮಾಡಿದೆ. ಹಾಗೆಯೇ ಅಬಕಾರಿ ಪರವಾನಗಿ ವಿಚಾರದಲ್ಲಿ ಕೆಲವೊಬ್ಬರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಇಂಡೋ ಸ್ಪಿರಿಟ್ನ ಮಾಲಕ ಸಮೀರ್ ಮಹೇಂದು ಅವರ ಆಪ್ತರಿಗೆ ಕೋಟಿಗಳ ಲೆಕ್ಕಾಚಾರದಲ್ಲಿ ಹಣ ಪಾವತಿ ಮಾಡಲಾಗಿದೆ. ಅಲ್ಲದೆ, ಈ ಸಮೀರ್ ಮಹೇಂದು ಅವರೇ ಹೊಸ ಅಬಕಾರಿ ನೀತಿಯ ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.