ಪುಟಿದೆದ್ದ ಕರ್ನಾಟಕದ ಆರ್ಥಿಕತೆ; ಉತ್ತರಪ್ರದೇಶ, ಕೇರಳದ್ದು ಕಳಪೆ ಸಾಧನೆ
ಕೊರೊನಾಪೂರ್ವ ಮಟ್ಟಕ್ಕೆ ತಲುಪಿದ 19 ರಾಜ್ಯಗಳ ಪ್ರಗತಿ ದರ
Team Udayavani, Aug 23, 2022, 6:45 AM IST
ನವದೆಹಲಿ: ಕೊರೊನಾ ಸೋಂಕಿನ ಆಘಾತದಿಂದ ಪಾತಾಳಕ್ಕಿಳಿದಿದ್ದ ಆರ್ಥಿಕತೆಗಳು ಈಗ ಪುಟಿದೇಳಲಾರಂಭಿಸಿವೆ. ಕರ್ನಾಟಕ ಸೇರಿದಂತೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ನಿಟ್ಟಿನಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿದ್ದು, 2021-22ರ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಯನ್ನು ಸಾಧಿಸಿವೆ.
21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ದತ್ತಾಂಶಗಳ ವಿಶ್ಲೇಷಣೆಯಿಂದ ಈ ಅಂಶ ತಿಳಿದುಬಂದಿದೆ. ಆದರೆ, ಗುಜರಾತ್ ಹಾಗೂ ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳ ಪ್ರಗತಿ ದರದ ಅಂಕಿಅಂಶ ಲಭ್ಯವಾಗಿಲ್ಲ.
ಈ ವಿಶ್ಲೇಷಣೆಯ ಪ್ರಕಾರ, ಕೇಂದ್ರ ಸರ್ಕಾರವು ಕೊರೊನಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲಾಕ್ಡೌನ್ ಹೇರಿದಾಗ ಕುಸಿದಿದ್ದ 19 ರಾಜ್ಯಗಳು- ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಡಿಪಿ(ರಾಜ್ಯದ ಒಟ್ಟು ಆಂತರಿಕ ಉತ್ಪನ್ನ) ದರ 2021-22ರಲ್ಲಿ ಕೊರೊನಾಪೂರ್ವ ಮಟ್ಟಕ್ಕೆ ತಲುಪಿದೆ. ಇಂಥ ಸಾಧನೆ ಮಾಡಿದ ರಾಜ್ಯಗಳೆಂದರೆ, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಬಿಹಾರ, ತೆಲಂಗಾಣ, ದೆಹಲಿ, ಒಡಿಶಾ, ಮಧ್ಯಪ್ರದೇಶ, ಹರ್ಯಾಣ, ತ್ರಿಪುರ, ಸಿಕ್ಕಿಂ, ಹಿಮಾಚಲಪ್ರದೇಶ, ಮೇಘಾಲಯ, ಜಾರ್ಖಂಡ್, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ , ಉತ್ತರಾಖಂಡ ಮತ್ತು ಪುದುಚೇರಿ.
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಈ ಅಂಕಿಅಂಶಗಳನ್ನು ಅಪ್ಲೋಡ್ ಮಾಡಲಾಗಿದೆ.
ಹಿಂದುಳಿದ ಉ.ಪ್ರದೇಶ, ಕೇರಳ:
ವಿಶೇಷವೆಂದರೆ, ಉತ್ತರಪ್ರದೇಶ ಮತ್ತು ಕೇರಳ ರಾಜ್ಯಗಳ ಉತ್ಪಾದಕತೆ ಮಾತ್ರ ಸತತ 3 ವರ್ಷಗಳಿಂದಲೂ ಕುಸಿಯುತ್ತಲೇ ಇವೆ. 2021-22ರಲ್ಲಿ ಈ ಎರಡು ರಾಜ್ಯಗಳ ಜಿಎಸ್ಡಿಪಿ ಕೊರೊನಾಪೂರ್ವ ಮಟ್ಟಕ್ಕಿಂತಲೂ ಕಡಿಮೆ ದಾಖಲಾಗಿದೆ.
ಕರ್ನಾಟಕದ ಜಿಎಸ್ಡಿಪಿ
2019-20ರಲ್ಲಿ – 11,490 ಕೋಟಿ ರೂ.
2020-21ರಲ್ಲಿ – 11,440 ಕೋಟಿ ರೂ.
2021-22ರಲ್ಲಿ – 12,520 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Coal Mine: ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ.. 7 ಮಂದಿ ಮೃತ್ಯು, ಹಲವು ಕಾರ್ಮಿಕರಿಗೆ ಗಾಯ
Maldives: ಮಾಲ್ಡೀವ್ಸ್ ಗೆ ಭಾರತದ ನೆರವು, ರಕ್ಷಣೆ ಬೇಕಾಗಿದೆ: ಮೊಹಮ್ಮದ್ ಮುಯಿಜ್ಜು
Land For Jobs Case: ಲಾಲು ಪ್ರಸಾದ್ ಯಾದವ್ ಸೇರಿ ಇಬ್ಬರು ಪುತ್ರರಿಗೆ ಜಾಮೀನು ಮಂಜೂರು
ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ ವಿಫಲ… ಹಳಿ ಮೇಲೆ ಮಣ್ಣು ಸುರಿದ ಕಿಡಿಗೇಡಿಗಳು
Jani Master: ಲೈಂಗಿಕ ಕಿರುಕುಳ ಕೇಸು; ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಶಸ್ತಿ ರದ್ದು!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್ನಲ್ಲಿ ʼರಾಮಾಯಣʼವೇ ಹೈಲೈಟ್
Kaup: ಉಚ್ಚಿಲ ದಸರೆಗೆ ವಸ್ತುಪ್ರದರ್ಶನ ಮೆರುಗು
ವೈದ್ಯೆಯ ಮೇಲೆ ಅತ್ಯಾ*ಚಾರ ಎಸಗಿ ಕೊಂದಿದ್ದು ಸಂಜಯ್ ರಾಯ್: ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ
Mangaluru: ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡ ಸಿಸಿಬಿ ತಂಡ; ನೈಜಿರಿಯಾ ಪ್ರಜೆ ಬಂಧನ
Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.