13 ವರ್ಷದ ಬಳಿಕ ಮತ್ತೆ ರೀ-ರಿಲೀಸ್‌ ಆಗುತ್ತಿದೆ “ಅವತಾರ್”‌ : ಹೊಸ ಟ್ರೇಲರ್‌ ಔಟ್

ಚಿತ್ರ ಥಿಯೇಟರ್‌ ರಿಲೀಸ್‌ ಆಗುತ್ತಿರುವುದಿಂದ ಕೆಲ ಓಟಿಟಿಯಲ್ಲಿ ಅವತಾರ್‌ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ

Team Udayavani, Aug 24, 2022, 3:33 PM IST

13 ವರ್ಷದ ಬಳಿಕ ಮತ್ತೆ ರೀ-ರಿಲೀಸ್‌ ಆಗುತ್ತಿದೆ “ಅವತಾರ್”‌ : ಹೊಸ ಟ್ರೇಲರ್‌ ಔಟ್

ಹೊಸದಿಲ್ಲಿ: 2009 ರಲ್ಲಿ ಹಾಲಿವುಡ್‌  ನಲ್ಲಿ ಸಂಚಲನ ಸೃಷ್ಟಿಸಿದ್ದ ಸೈನ್ಸ್‌ -ಫಿಕ್ಷನ್ ‘ಅವತಾರ್‌ʼ ಚಿತ್ರ ಮತ್ತೊಮ್ಮೆ ಥಿಯೇಟರ್‌ ನಲ್ಲಿ ಮರು ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ.

ಅದ್ಧೂರಿ ತಂತ್ರಜ್ಞಾನ, ಎಡಿಟಿಂಗ್‌,‌ ಗ್ರಾಫಿಕ್ಸ್  ಛಾಯಗ್ರಹಣ,‌ ಸೌಂಡ್‌ ಎಫೆಕ್ಟ್‌ ಹೀಗೆ ಎಲ್ಲಾ ವಿಭಾಗದಲ್ಲೂ ಸಿನಿ ರಸಿಕರನ್ನು ಮೋಡಿ ಮಾಡಿ, ಥಿಯೇಟರ್‌ ನಲ್ಲಿ ಕೂರಿಸಿ, ಬೇರೆ ಲೋಕಕ್ಕೆ ಪಯಣ ಬೆಳೆಸಿದ್ದ ಜೇಮ್ಸ್‌ ಕ್ಯಾಮೆರಾನ್ ಅವರ ʼಅವತಾರ್‌ʼ ಚಿತ್ರ ಹಾಲಿವುಡ್‌ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಮ್ಯಾಜಿಕ್‌ ಮಾಡಿತ್ತು. ಚಿತ್ರ ಬಿಡುಗಡೆಯಾಗಿ 13 ವರ್ಷಗಳು ಕಳೆದಿವೆ. ಚಿತ್ರದ ಮುಂದಿನ ಭಾಗವೂ ಬಿಡುಗಡೆಗೆ ಸಿದ್ದವಾಗಿದೆ. ಆದರೆ ಮತ್ತೊಮ್ಮೆ ʼಅವತಾರ್‌ʼ  ಕಾಡಿನ ಲೋಕದ ಸಫಾರಿ ಮಾಡಿಸಲು ಥಿಯೇಟರ್‌ ಗೆ ಲಗ್ಗೆಯಿಡಲಿದೆ.

ಹಾಲಿವುಡ್‌ ಸ್ಟಾರ್‌ ಗಳಾದ ಸ್ಯಾಮ್ ವರ್ಥಿಂಗ್ಟನ್, ಜೊಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್, ಜಿಯೋವಾನಿ ರಿಬಿಸಿ ಮುಂತಾದವರು ನಟಿಸಿದ್ದ ಅವತಾರ್‌ ಚಿತ್ರ 3 ಆಸ್ಕರ್‌ ಪ್ರಶಸ್ತಿಯೊಂದಿಗೆ ಹತ್ತು ಹಲವಾರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಎರಡನೇ ಭಾಗದ ಮೊದಲು ನಿರ್ದೇಶಕ ಜೇಮ್ಸ್‌ ಕ್ಯಾಮೆರಾನ್‌ ಅವತಾರ್‌ ಮೊದಲ ಭಾಗವನ್ನು ಮತ್ತೊಮ್ಮೆ ಥಿಯೇಟರ್‌ ನಲ್ಲಿ ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.  4K ಮಾದರಿಯ ತಂತ್ರಜ್ಞಾನ ಹಾಗೂ ಗ್ರಾಫಿಕ್ಸ್‌ ಅಳವಡಿಸಿ ಚಿತ್ರ ಸೆಪ್ಟೆಂಬರ್‌ 23  ರಂದು ರೀ- ರಿಲೀಸ್‌ ಆಗಲಿದೆ. ಮತ್ತೊಮ್ಮೆ ಚಿತ್ರ ಥಿಯೇಟರ್‌ ರಿಲೀಸ್‌ ಆಗುತ್ತಿರುವುದಿಂದ ಕೆಲ ಓಟಿಟಿಯಲ್ಲಿ ಅವತಾರ್‌ ಚಿತ್ರದ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ. ಅಂದ ಹಾಗೆ ಚಿತ್ರ ರೀ- ರಿಲೀಸ್‌ ಆಗಿ ಎರಡು ವಾರ ಮಾತ್ರ ಥಿಯೇಟರ್‌ ನಲ್ಲಿರುತ್ತದೆ. ಚಿತ್ರದ ಹೊಸ ಟ್ರೇಲರ್‌ ಕೂಡ ರಿಲೀಸ್‌ ಮಾಡಲಾಗಿದೆ.

ಈ ಹಿಂದೆ ನಿರ್ದೇಶಕ ಜೇಮ್ಸ್‌ ಕ್ಯಾಮೆರಾನ್‌ ಅವತಾರ್‌ ಚಿತ್ರ ಒಟ್ಟು 5 ಭಾಗಗಳಾಗಿ ಬರಲಿದೆ ಎಂದು ಹೇಳಿದ್ದರು. ಅದರಂತೆ ಚಿತ್ರದ 2ನೇ ಭಾಗಕ್ಕೆ “ಅವತಾರ್ ​: ದಿ ವೇ ಆಫ್​ ವಾಟರ್​” ಎಂದು ಟೈಟಲ್‌ ಇಡಲಾಗಿದ್ದು, ಇದೇ ವರ್ಷ ಡಿಸೆಂಬರ್‌ 16 ರಂದು ಚಿತ್ರ ರಿಲೀಸ್‌ ಆಗಲಿದೆ ಎಂದು ಚಿತ್ರ ತಂಡ ಘೋಷಿಸಿದೆ.

 

 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.