ಅಯೋಧ್ಯೆ: ಅನಾಥ, ಬಡಮಕ್ಕಳ ಗುರು ಈ ಪೊಲೀಸ್ ಇನ್ಸ್ಪೆಕ್ಟರ್!
Team Udayavani, Aug 28, 2022, 7:35 AM IST
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಒಬ್ಬ ಗುರುಗಳಿದ್ದಾರೆ. ಅವರಿಗೆ ಸಮವಸ್ತ್ರಧಾರಿ ಶಿಕ್ಷಕ ಎಂದೇ ಜನ ಕರೆಯುತ್ತಾರೆ.
ಆ ವ್ಯಕ್ತಿಯ ಹೆಸರು ರಂಜಿತ್ ಯಾದವ್, ಮಾಡುವ ವೃತ್ತಿ ಸಬ್ ಇನ್ಸ್ಪೆಕ್ಟರ್! ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಇವರು, ಪ್ರತಿದಿನ ಬೆಳಗ್ಗೆ 7ರಿಂದ 9ರವರೆಗೆ ಶಿಕ್ಷಕರಾಗಿರುತ್ತಾರೆ. ಇದು ಹಣಕ್ಕಾಗಿ ಮಾಡುವುದಲ್ಲ, ಭಿಕ್ಷುಕರು, ಅನಾಥರ ಮಕ್ಕಳಿಗಾಗಿ ಹೀಗೆ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳಿಗೆ ಇಂಗ್ಲಿಷ್, ಹಿಂದಿ ಮತ್ತು ಗಣಿತವನ್ನು ಕಲಿಸುತ್ತಾರೆ. ಇವರು ಮೊದಲು ನಯಾಘಾಟ್ ಪೊಲೀಸ್ ಠಾಣೆಗೆ ಅಧಿಕಾರಿಯಾಗಿ ನಿಯುಕ್ತರಾದಾಗ ಈ ಭಿಕ್ಷುಕ, ಅನಾಥ ಮಕ್ಕಳ ಸ್ಥಿತಿ ಅವರ ಗಮನಕ್ಕೆ ಬಂತು. ಈ ಮಕ್ಕಳು ದೇವಸ್ಥಾನಗಳ ಓಣಿಗಳಲ್ಲಿ, ಸರಯೂ ನದಿಯ ಘಟ್ಟಗಳಲ್ಲಿ ತಂದೆತಾಯಂದಿರೊಂದಿಗೆ ಭಿಕ್ಷೆ ಬೇಡುತ್ತಿದ್ದುದ್ದನ್ನು ನೋಡಿದಾಗ ಅಯ್ಯೋ ಅನಿಸಿತು.
ತಕ್ಷಣ ಅವರ ಪೋಷಕರೊಂದಿಗೆ, ನಾನು ಉಚಿತವಾಗಿ ಕಲಿಸುತ್ತೇನೆ ಸೇರಿಸುತ್ತೀರಾ ಎಂದು ಕೇಳಿದರು. ನಿಧಾನಕ್ಕೆ ಎಲ್ಲರೂ ಒಪ್ಪಿಕೊಂಡರು. ಈಗ ಪ್ರತೀದಿನ ಇವರ ಬಳಿಯಲ್ಲಿ 60ಕ್ಕೂ ಅಧಿಕ ಮಕ್ಕಳು ಪಾಠ ಕಲಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.