50 ವರ್ಷ ಬಳಿಕ ಇದೇ ಮೊದಲ ಬಾರಿಗೆ ಚಂದ್ರನ ಬಳಿ ಪ್ರಯಾಣ ಬೆಳಸಿದ ಗಗನ ನೌಕೆ


Team Udayavani, Aug 30, 2022, 7:40 AM IST

50 ವರ್ಷ ಬಳಿಕ ಇದೇ ಮೊದಲ ಬಾರಿಗೆ ಚಂದ್ರನ ಬಳಿ ಪ್ರಯಾಣ ಬೆಳಸಿದ ಗಗನ ನೌಕೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 1972ರ ಬಳಿಕ ಇದೇ ಮೊದಲ ಬಾರಿಗೆ ಚಂದ್ರನಲ್ಲಿಗೆ ಗಗನ ನೌಕೆಯನ್ನು ಕಳುಹಿಸಿಕೊಡಲಿದೆ. ಈ ಯಾತ್ರೆಯ ಹೊಸ ಅಂಶವೆಂದರೆ ಮಾನವ ರಹಿತ ಯಾನ ಇದಾಗಿದೆ ಮತ್ತು ಶಶಾಂಕನ ಅಂಗಳಕ್ಕೆ ಹೋಗಿ, ಅಲ್ಲಿಂದ ಮಂಗಳ ಮೇಲೆ ಇಳಿಯಬೇಕು ಎನ್ನುವುದು ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಉದ್ದೇಶ.

ಆರ್ತೆಮಿಸ್‌1 ಯೋಜನೆ
ಚಂದ್ರನ ಮೇಲೆ ಮಾನವನು ಇಳಿಯುವುದು ಇದು ಮೊದಲ ಬಾರಿ ಏನೂ ಅಲ್ಲ. 1969ರಲ್ಲಿ ನೀಲ್‌ ಆರ್ಮ್ಸ್ಟ್ರಾಂಗ್‌ ಮತ್ತು ಬಜ್‌ ಅಲ್ಡಿನ್‌ ಅವರು ಇಳಿದಿದ್ದರು. ಮಾನವ ಮತ್ತು ರೋಬೋಟಿಕ್‌ ಸಹಿತವಾಗಿರುವ ಪ್ರಯೋಗ ಎಂದು ನಾಸಾದ ಟ್ವಿಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಯೋಜನೆಯ ಹೆಗ್ಗಳಿಕೆ ಏನೆಂದರೆ 21ನೇ ಶತಮಾನದಲ್ಲಿ ಕೈಗೊಳ್ಳಲಾಗುತ್ತಿರುವ ಮೊದಲ ಯೋಜನೆ ಇದು ಮತ್ತು ಆರ್ತೆಮಿಸ್‌1 ಎಂಬ ಹೆಸರಿನ ಈ ಯೋಜನೆಯಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಚಂದ್ರನಲ್ಲಿ ಕಳುಹಿಸಲು ಉದ್ದೇಶಿಸಿದೆ.ಸದ್ಯದ ಗಗನ ನೌಕೆ ಚಂದ್ರನಲ್ಲಿಗೆ ಹೋಗಿ ವಾಪಸಾದ ಬಳಿಕ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ. 1972ರಲ್ಲಿ ಅಪೋಲೋ 17 ಗಗನಯಾತ್ರೆಯ ಬಳಿಕ ಚಂದ್ರನಲ್ಲಿಗೆ ಮೊದಲ ಪ್ರಯಾಣವಿದು. ಗ್ರೀಕ್‌ ದೇವತೆ ಅಪೋಲೋ ಹೊಂದಿದ್ದಾಳೆ ಎಂದು ನಂಬಲಾಗಿರುವ ಅವಳಿ ಹೆಸರು “ಆರ್ತೆಮಿಸ್‌’ ಅನ್ನು ಈ ಯೋಜನೆಗೆ ಇರಿಸಲಾಗಿದೆ.

ಓರಿಯಾನ್‌ ಸ್ಪೇಸ್‌ ಕ್ರಾಫ್ಟ್
ಬೃಹದಾಕಾರದ ಗಗನ ಯಾತ್ರೆ ವ್ಯವಸ್ಥೆ (ಎಸ್‌ಎಲ್‌ಎಸ್‌)ಯ ಓರಿಯಾನ್‌ ಸ್ಪೇಸ್‌ ಕ್ರಾಫ್ಟ್ ಮೂಲಕ ಮಾನವ ರಹಿತ ಗಗನ ನೌಕೆ ಚಂದ್ರನಲ್ಲಿಗೆ ನೆಗೆಯಲಿದೆ. ಅದು ಫ್ಲೋರಿಡಾದಲ್ಲಿರುವ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಅದು 322 ಅಡಿ ಉದ್ದ ಹೊಂದಿದ್ದು, ನಾಸಾ ಇದುವರೆಗೆ ನಿರ್ಮಿಸಿದ ಅತ್ಯಧಿಕ ಶಕ್ತಿಶಾಲಿ ರಾಕೆಟ್‌ ಆಗಿದೆ. ಒಟ್ಟು ಆರು ಮಂದಿ ಯಾತ್ರಿಗಳು ಅದರಲ್ಲಿ ಪ್ರಯಾಣ ಮಾಡುವಂತೆ ವಿನ್ಯಾಸವನ್ನೂ ಮಾಡಲಾಗಿದೆ.

ಚಂದ್ರನಲ್ಲಿ ಇಳಿದ ಬಳಿಕ
ಚಂದ್ರನಲ್ಲಿ ಇಳಿದ ಬಳಿಕ ಗಗನನೌಕೆ ಚಂದ್ರನ ಮೇಲೆ°„ನಲ್ಲಿ ಸುತ್ತು ಬಂದು 42 ದಿನಗಳ ಬಳಿಕ ಭೂಮಿಗೆ ವಾಪಸಾಗಲಿದೆ. ಒಟ್ಟು 1.3 ದಶಲಕ್ಷ ಮೈಲು ಪ್ರಯಾಣ ಮಾಡಲಿದೆ.

1969ರಿಂದ 1972ರ ವರೆಗೆ ನಡೆದಿದ್ದ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವರು ಇಳಿದಿದ್ದ ವೇಳೆ 12 ಮಂದಿ ಗಗನ ಯಾತ್ರಿಗಳು ಇದ್ದರು. 2024ರ ವೇಳೆಗೆ ಹೊಸ ಸಾಹಸದಲ್ಲಿ ಶಶಾಂಕನ ಮೇಲೆ ಯಾತ್ರೆ 2024ಕ್ಕೆ ಶುರುವಾಗುವ ನಿರೀಕ್ಷೆ ಇದೆ. ಚಂದ್ರನ ದಕ್ಷಿಣ ಭಾಗಕ್ಕೆ ತೆರಳುವ ಉದ್ದೇಶ ನಾಸಾ ವಿಜ್ಞಾನಿಗಳಿಗೆ ಇದೆ.

ಉದ್ದೇಶವೇನು?
ಆರ್ತೆಮಿಸ್‌-1ರ ಉದ್ದೇಶವೇನೆಂದರೆ ಚಂದ್ರನಿಂದಲೂ ಕೂಡ ಮಂಗಳ ಗ್ರಹಕ್ಕೆ ಗಗನ ಯಾತ್ರಿಗಳನ್ನು ಕಳುಹಿಸಲು ಸಾಧ್ಯವಿದೆಯೇ ಎಂಬುದನ್ನು ಅಧ್ಯಯನ ನಡೆಸಲಾಗುತ್ತದೆ.

42 ದಿನ- ಒಟ್ಟು ದಿನಗಳು
1.3 ದಶಲಕ್ಷ ಮೈಲುಗಳು- ಪ್ರಯಾಣ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.