![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Aug 29, 2022, 11:18 PM IST
ದುಬಾೖ: ನಾಲ್ಕು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಪಾಕಿಸ್ಥಾನ ವಿರುದ್ಧವೇ ಆಡಿದ ವೇಳೆ ಬೆನ್ನುನೋವಿಗೆ ಒಳಗಾಗಿದ್ದರಿಂದ ಆಘಾತವಾಗಿತ್ತು. ಆದರೆ ಇದೀಗ ಪಾಕಿಸ್ಥಾನ ವಿರುದ್ಧವೇ ಏಷ್ಯಾ ಕಪ್ನ ಆರಂಭಿಕ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಗೆಲುವು ದಾಖಲಿಸಿರುವುದು ನನ್ನ ಪಾಲಿಗೆ ಸಾಧನೆಯ ಅನುಭವವನ್ನು ನೀಡುತ್ತಿದೆ ಎಂದು ಗೆಲುವಿ ರೂವಾರಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಬೆನ್ನುನೋವಿನಿಂದಾಗಿ ಅವರು ಸುಮಾರು ಮೂರು ವರ್ಷ ಕ್ರಿಕೆಟ್ನಿಂದ ದೂರ ಉಳಿಯಬೇಕಾಗಿತ್ತು.
ಈ ಗೆಲುವು ದಾಖಲಿಸಿರುವುದು ತುಂಬಾ ಸಂತೋಷ, ತೃಪ್ತಿ ನೀಡಿದೆ. ಯಾಕೆಂದರೆ ಇದು ನಮ್ಮ ಪಾಲಿಗೆ ಅತೀಮುಖ್ಯವಾಗಿತ್ತು. ನಾವು ಬಹಳ ಎಚ್ಚರಿಕೆಯಿಂದ ಈ ಪಂದ್ಯವನ್ನು ಆಡಿದ್ದೇವು. ಯಾಕೆಂದರೆ ಅಷ್ಟೊಂದು ಒತ್ತಡ ನಮ್ಮ ಮೇಲಿತ್ತು. ರವೀಂದ್ರ ಜಡೇಜ ನಿಜವಾಗಿಯೂ ಉತ್ತಮ ಆಟ ಪ್ರದರ್ಶಿಸಿದರು. ಅವರ ಆಟದ ಚಂದವೇ ಬೇರೆ ಎಂದು ಹಾರ್ದಿಕ್ ಹೇಳಿದರು.
ನಾಲ್ಕು ವರ್ಷಗಳ ಹಿಂದೆ ಇದೇ ಡ್ರೆಸ್ಸಿಂಗ್ ರೂಂನಲ್ಲಿ ಸ್ಟ್ರೆಚರ್ನಲ್ಲಿ ಸಾಗಿರುವುದು ಎಲ್ಲ ನೆನಪಿಗೆ ಬರುತ್ತಿದೆ. ಭಾರತ ತಂಡದ ಮಾಜಿ ಫಿಸಿಯೊ ನಿತಿನ್ ಪಟೇಲ್ ಮತ್ತು ಹಾಲಿ ಶಕ್ತಿವರ್ಧಕ ಮತ್ತು ಅಭ್ಯಾಸ ಕೋಚ್ ಸೋಹಮ್ ದೇಸಾಯಿ ಅವರ ಮಾರ್ಗದರ್ಶನದಿಂದಾಗಿ ನಾನು ಯಶಸ್ವಿಯಾಗಿ ಕ್ರಿಕೆಟಿಗೆ ಮರಳುವಂತಾಗಿದೆ ಎಂದು ಹಾರ್ದಿಕ್ ತಿಳಿಸಿದರು.
15 ರನ್ ಇದ್ದರೂ…
ಒಂದು ಸಮಯಕ್ಕೆ ಒಂದು ಓವರ್ ಬಗ್ಗೆ ಮಾತ್ರ ಯೋಜನೆ ಮಾಡುತ್ತೇನೆ. ಅಂತಿಮ ಓವರಿನಲ್ಲಿ ಗೆಲ್ಲಲು 7 ರನ್ ಅಲ್ಲ ಒಂದು ವೇಳೆ 15 ರನ್ ಇದ್ದರೂ ಗೆಲ್ಲಲು ಪ್ರಯತ್ನಿಸುತ್ತಿದ್ದೆ ಎಂದು ಹಾರ್ದಿಕ್ ತಿಳಿಸಿದರು. ಬೌಲಿಂಗ್ ಮಾಡುವವರಿಗೂ ಹೆಚ್ಚಿನ ಒತ್ತಡ ಇರುತ್ತದೆ. ಹಾಗಾಗಿ ನಾವು ಎಚ್ಚರಿಕೆಯಿಂದ ಆಡಿದರೆ 7 ರನ್ ಅಲ್ಲ 15 ರನ್ ಇದ್ದರೂ ಪ್ರಯತ್ನಿಸಬಹುದು ಎಂದು ಹಾರ್ದಿಕ್ ತಿಳಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.