ಕ್ಯಾಮಿಲ್ಲಾ ಇಂಗ್ಲೆಂಡ್ ರಾಣಿ…ಆದರೆ ಅಧಿಕಾರ ಚಲಾಯಿಸುವಂತಿಲ್ಲ; ಏನಿದು Queen Consort?
2010ರಲ್ಲಿ ಎನ್ ಬಿಸಿ ಸಂದರ್ಶನದಲ್ಲಿ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು.
Team Udayavani, Sep 9, 2022, 3:33 PM IST
ಲಂಡನ್(ಯುಕೆ): ಸುಮಾರು ಏಳು ದಶಕಗಳ ನಂತರ ಯುನೈಟೆಡ್ ಕಿಂಗ್ ಡಮ್ ಗೆ ನೂತನ ರಾಣಿಯ ಆಯ್ಕೆಯಾಗಲಿದೆ. ಹೌದು ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾ ಇನ್ಮುಂದೆ ಡಚೆಸ್ಸ್ ಆಫ್ ಕಾರ್ನ್ ವಾಲ್ ಎಂದು ಕರೆಯಲ್ಪಡುತ್ತಾರೆ. ಕ್ವೀನ್ ಕಾನ್ ಸಾರ್ಟ್ ಎಂಬ ಬಿರುದು ಲಭಿಸಿದರೂ ಕೂಡಾ ಕ್ಯಾಮಿಲ್ಲಾಗೆ ಯಾವುದೇ ಸಾರ್ವಭೌಮ ಅಧಿಕಾರ ಚಲಾಯಿಸುವ ಹಕ್ಕು ಹೊಂದಿರುವುದಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನನ್ನ ಅರ್ಧ ಶತಕಗಳನ್ನೂ ವೈಫಲ್ಯ ಎನ್ನುತ್ತಿದ್ದರು..: ಶತಕದ ಹಿಂದಿನ ಕತೆ ಬಿಚ್ಚಿಟ್ಟ ವಿರಾಟ್
ಕ್ಯಾಮಿಲ್ಲಾಗೆ ರಾಣಿ ಬಿರುದು ನೀಡಬೇಕೆ ಬೇಡವೇ ಎಂಬ ಬಗ್ಗೆ ಇಂಗ್ಲೆಂಡ್ ನಲ್ಲಿ ದೀರ್ಘಕಾಲ ಚರ್ಚೆ ನಡೆದಿದ್ದು, ಕೊನೆಗೆ ರಾಣಿ ಎಲಿಜಬೆತ್ II ಮಧ್ಯಪ್ರವೇಶಿಸಿ, ಕ್ವೀನ್ ಕಾನ್ ಸಾರ್ಟ್ ಬಿರುದು ನೀಡುವಂತೆ ಸಲಹೆ ನೀಡುವ ಮೂಲಕ ವಿವಾದ ಬಗೆಹರಿದಿತ್ತು.
ರಾಣಿ ಎಲಿಜಬೆತ್ ಮರಣದ ನಂತರ ಪ್ರಿನ್ಸ್ ಚಾರ್ಲ್ಸ್ ಸಾಂಪ್ರದಾಯಿಕವಾಗಿ ರಾಜನ ಪಟ್ಟಕ್ಕೇರುತ್ತಾರೆ. ಆದರೆ ಚಾರ್ಲ್ಸ್ ರಾಜನಾದ ಮೇಲೆ ಪತ್ನಿ ಕ್ಯಾಮಿಲ್ಲಾ ರಾಣಿಯಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಹಲವು ವರ್ಷಗಳ ಕಾಲ ಚರ್ಚೆಯಲ್ಲಿತ್ತು.
ಇದು ತುಂಬಾ ಸೂಕ್ಷ್ಮ ವಿಚಾರವಾಗಿ ಚರ್ಚೆಯಾಗಲು ಕಾರಣ, ಕ್ಯಾಮಿಲ್ಲಾ ಚಾರ್ಲ್ಸ್ ಅವರ ಎರಡನೇ ಪತ್ನಿಯಾಗಿದ್ದು. 1997ರಲ್ಲಿ ಚಾರ್ಲ್ಸ್ ಮೊದಲ ಪತ್ನಿ ಪ್ರಿನ್ಸೆಸ್ ಡಯಾನಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬಳಿಕ ಚಾರ್ಲ್ಸ್ ಕ್ಯಾಮಿಲ್ಲಾ ಅವರನ್ನು ವಿವಾಹವಾಗಿದ್ದರು.
2010ರಲ್ಲಿ ಎನ್ ಬಿಸಿ ಸಂದರ್ಶನದಲ್ಲಿ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಒಂದು ವೇಳೆ ನೀವು ಸಂಪ್ರದಾಯದಂತೆ ಇಂಗ್ಲೆಂಡ್ ರಾಜನಾದರೆ, ಆಗ ಕ್ಯಾಮಿಲ್ಲಾ ಇಂಗ್ಲೆಂಡ್ ರಾಣಿಯಾಗಲಿದ್ದಾರಾ ಎಂಬ ಪ್ರಶ್ನೆಗೆ ಚಾರ್ಲ್ಸ್ ಅದು ಒಳ್ಳೆಯದೇ ಎಂದು ಹೇಳಿ ನುಣುಚಿಕೊಂಡಿದ್ದರು.
ಕೊನೆಗೆ ರಾಣಿ ಎಲಿಜಬೆತ್ II ಅವರು, ತಮ್ಮ ಮಗ ಚಾರ್ಲ್ಸ್ ಇಂಗ್ಲೆಂಡ್ ರಾಜನಾದ ನಂತರ ಕ್ಯಾಮಿಲ್ಲಾ ಅವರನ್ನು ಕ್ವೀನ್ ಕಾನ್ ಸಾರ್ಟ್ ಎಂದು ಘೋಷಿಸಬೇಕೆಂದು ಇಚ್ಛೆ ವ್ಯಕ್ತಪಡಿಸಿರುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿತ್ತು ಎಂದು ವರದಿ ತಿಳಿಸಿದೆ.
ಕ್ವೀನ್ ಕಾನ್ಸಾರ್ಟ್ ಮತ್ತು ಕ್ವೀನ್ ನಡುವಿನ ವ್ಯತ್ಯಾಸವೇನು?
ಇಂಗ್ಲೆಂಡ್ ಸಂಪ್ರದಾಯದಲ್ಲಿ ರಾಜ ಮತ್ತು ರಾಣಿಯಾಗಿ ಆಡಳಿತ ನಡೆಸುವವರಿಗೆ ಪೂರ್ಣ ಅಧಿಕಾರ ಇರುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಯಾವುದೆಂದರೆ, ಕ್ವೀನ್ ಕಾನ್ಸಾರ್ಟ್ ಅಂದರೆ ರಾಜನ ಸಂಗಾತಿ ಅಥವಾ ಪತ್ನಿ ಎಂದರ್ಥ. ಕಾನ್ಸಾರ್ಟ್ ಯಾವುದೇ ಆಡಳಿತಾತ್ಮಕ ಪಾತ್ರ ಹೊಂದಿಲ್ಲ. ಇದೊಂದು ರಾಜನಿಗೆ ಬೆಂಬಲ ನೀಡುವ ಸಾಂಕೇತಿಕ ಬಿರುದು. ಇಂಗ್ಲೆಂಡ್ ರಾಣಿ ಎಲಿಜಬೆತ್ II ಅವರು ಹೊಂದಿರುವ ಅಧಿಕಾರ ಕ್ವೀನ್ ಕಾನ್ಸಾರ್ಟ್ ಗೆ ಇರುವುದಿಲ್ಲ. ಅವರು ಕೇವಲ ರಾಜನ ಸಂಗಾತಿ ಆಗಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Israel- ಹೆಜ್ಬುಲ್ಲಾ ನಡುವೆ ಬಾಂಬ್ಗಳ ಸುರಿಮಳೆ! ; 100 ರಾಕೆಟ್ ಲಾಂಚರ್ ಧ್ವಂಸ
Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.