![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 12, 2022, 11:48 AM IST
ಮೂಡುಬಿದಿರೆ: ನೂರ ಹದಿನೈದು ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಮೂಡುಬಿದಿರೆಯಲ್ಲಿ ನಿರ್ಮಾಣವಾಗಿದ್ದ ಸರ್ ಆರ್ಥರ್ ಲಾಲಿ ಬಂಗಲೆ (ಪ್ರವಾಸಿ ಬಂಗ್ಲೆ/ ತನಿಖಾಧಿಕಾರಿಗಳ ತಂಗುದಾಣ)ಯ ಬದಲಿಗೆ ಹೊಸ ಕಟ್ಟಡ ನಿರ್ಮಾಣವಾಗುವ ಸಾಧ್ಯತೆ ಇದೆ. ಅದೇ ವೇಳೆ ಹಳೆ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂಬ ವರದಿಯಿಂದ ನಾಗರಿಕರು ಕಳವಳ ಕ್ಕೀಡಾಗಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಮಂಗಳೂರಿನಿಂದ ಕುದುರೆ ಸಾರೋಟಿನಲ್ಲಿ ಹೊರಡುವ ಜಿಲ್ಲಾ ಕಲೆಕ್ಟರ್ ಸಾಹೇಬರು ಹಾಗೂ ಬ್ರಿಟಿಷ್ ಅಧಿಕಾರಿಗಳಿಗೆ ತಂಗಲು ಮಂಗಳೂರಿನಿಂದ ಗುರುಪುರ, ಮೂಡುಬಿದಿರೆ, ಕಾರ್ಕಳ ಹೀಗೆ ಸುಮಾರು ಹನ್ನೆರಡರಿಂದ ಹದಿನೆಂಟು ಕಿ.ಮೀ. ಅಂತರದಲ್ಲಿ ತನಿಖಾಧಿಕಾರಿಗಳ ಬಂಗ್ಲೆ ನಿರ್ಮಿಸಲಾಗಿತ್ತು. ಆಗಿನ ಮದ್ರಾಸ್ ಪ್ರಾಂತದ ಗವರ್ನರ್ ಆಗಿದ್ದ ಸರ್ ಆರ್ಥರ್ ಲಾಲಿ ಅವರು ಮೂಡುಬಿದಿರೆಗೆ ಭೇಟಿ ನೀಡಿದ್ದುದರ ನೆನಪಿಗಾಗಿ ಈ ಬಂಗ್ಲೆ 1907ರ ನವೆಂಬರ್ 8ರಂದು ನಿರ್ಮಾಣವಾಗಿತ್ತು. ಆಗಿನ ಜಿಲ್ಲಾ ಕಲೆಕ್ಟರ್ ಮತ್ತು ಡಿಸ್ಟ್ರಿಕ್ಟ್ ಬೋರ್ಡ್ ಪ್ರಸಿಡೆಂಟ್ ಅಝೀಝುದ್ದೀನ್ ಅವರು ಈ ಬಂಗ್ಲೆ ನಿರ್ಮಿಸಿದವರು.
ಸಾಧ್ಯತೆಗಳಿವೆ
1. ವಿದೇಶಗಳಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಪರಂಪರೆಯ ಕುರಿತಾದ ಕಾಳಜಿ ಇರುವಂತೆ ಇಲ್ಲೂ ಇಂಥ ಕಟ್ಟಡಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ಕಟ್ಟಡ ತಕ್ಕ ಮಟ್ಟಿಗೆ ಸದೃಢ, ಸುಂದರವಾಗಿಯೇ ಇರುವ ಕಾರಣ, ಅಲ್ಪ ಸ್ವಲ್ಪ ದುರಸ್ತಿ ನಡೆಸಿ ಇದನ್ನು ಇದ್ದಲ್ಲೇ ಉಳಿಸಿಕೊಳ್ಳಬಹುದು.
ಪಾರಂಪರಿಕ ಕಟ್ಟಡ ಉಳಿಸಿ: ದ.ಕ. ಜಿಲ್ಲೆ ಯ 32 ಪಾರಂಪರಿಕ ಪ್ರಾಚೀನ ಪಟ್ಟಣಗಳಲ್ಲಿ ಜೈನ ಕಾಶಿ ಮೂಡುಬಿದಿರೆಯೂ ಒಂದಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳನ್ನು ಉಳಿಸುವ, ಕಾಯಕಲ್ಪ ನೀಡುವ ಕಾರ್ಯ ನಡೆಯಬೇಕಾಗಿದೆ. ಅಂತೆಯೇ ಶತಮಾನ ಕಂಡ ಐತಿಹಾಸಿಕ ಕಟ್ಟಡ ಪ್ರವಾಸಿ ಬಂಗ್ಲೆಗೆ ಅವಶ್ಯವಿದ್ದರೆ ಕಾಯಕಲ್ಪ ನೀಡಲು ಸರಕಾರ ಮುಂದಾಗಬೇಕಾಗಿದೆ. – ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಶ್ರೀ ಜೈನ ಮಠಾಧೀಶರು
ಧನಂಜಯ ಮೂಡುಬಿದಿರೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.