![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 15, 2022, 7:29 PM IST
ಸೋಮವಾರಪೇಟೆ: ಮಹಿಳೆಯೋರ್ವರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿ ಗುರುವಾರ ನಡೆದಿದೆ.
ಜಂಬೂರು ನಿವಾಸಿ ಹಂಸ ಅವರ ಪತ್ನಿ ಸಾಹಿರಾ (35) ಕೊಲೆಯಾದ ಮಹಿಳೆ. ಅದೇ ಗ್ರಾಮದ ನಿವಾಸಿ ಪೂವಯ್ಯ(ಬೊಳ್ಳು) ಕೊಲೆ ಆರೋಪಿ. ಕಳೆದ 5 ವರ್ಷದ ಹಿಂದೆ ಹಂಸ ಪತ್ನಿಯನ್ನು ತ್ಯಜಿಸಿ ಹೋಗಿದ್ದ. ನಂತರ ಪೂವಯ್ಯ ಹಾಗೂ ತಾಹಿರಾ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.
ಕಳೆದ ಎರಡು ದಿನದಿಂದ ತಾಹಿರಾ ದೂರವಾಣಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪೂವಯ್ಯ ವಿಚಲಿತನಾಗಿದ್ದ. ಮಾತನಾಡಿಸಲೆಂದು ಗುರುವಾರ ಬೆಳಗ್ಗೆ 9.30ಕ್ಕೆ ತಾಹಿರಾ ಮನೆಗೆ ತೆರಳಿದಾಗ ಅಲ್ಲಿ ಇನ್ನೊಬ್ಬ ಪುರುಷ ಇದ್ದ ಹಿನ್ನೆಲೆಯಲ್ಲಿ ರೋಷಗೊಂಡು ಮನೆಗೆ ಬಂದು ಚಾಕು ಹಿಡಿದು ತೆರಳಿದ್ದನು. ಅಷ್ಟೊತ್ತಿಗಾಗಲೇ ಮನೆಯಲ್ಲಿದ್ದ ವ್ಯಕ್ತಿ ಹೊರ ಹೋಗಿದ್ದಾನೆ. ಈ ಬಗ್ಗೆ ತಾಹಿರಾಳೊಂದಿಗೆ ಜಗಳ ಮಾಡಿದ ಆರೋಪಿ ಪೂವಯ್ಯ ಕುತ್ತಿಗೆ ಹಾಗು ಕಂಕುಳ ಭಾಗಕ್ಕೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಮಕ್ಕಳು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ತಾಹಿರಾ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಅಯ್ಯಪ್ಪ, ಡಿವೈಎಸ್ಪಿ ಗಂಗಾದರಪ್ಪ, ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅರೋಪಿ ಪೂವಯ್ಯ ವಿವಾಹಿತನಾಗಿದ್ದು ಎರಡು ಗಂಡು ಮಕ್ಕಳಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.