![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 15, 2022, 10:26 PM IST
ಕೊಲಂಬೊ: ನೇಪಾಲವನ್ನು 4-0 ಗೋಲುಗಳಿಂದ ಪರಾಭವಗೊಳಿಸಿದ ಹಾಲಿ ಚಾಂಪಿಯನ್ ಭಾರತ ಸ್ಯಾಫ್ ಅಂಡರ್-17 ಫುಟ್ಬಾಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಾಬಿ ಸಿಂಗ್, ಕೋರೂ ಸಿಂಗ್, ನಾಯಕ ವನ್ಲಲ್ಕೇಕ ಗೈಟ್ ಮತ್ತು ಅಮಾನ್ ಭಾರತದ ಪರ ಒಂದೊಂದು ಗೋಲು ಹೊಡೆದರು. ಇದರೊಂದಿಗೆ ಲೀಗ್ ಹಂತ ದಲ್ಲಿ ನೇಪಾಲ ವಿರುದ್ಧ ಅನುಭವಿಸಿದ 3-1 ಅಂತರದ ಸೋಲಿಗೂ ಭಾರತ ಸೇಡು ತೀರಿಸಿಕೊಂಡಂತಾಯಿತು.
ಪ್ರಶಸ್ತಿ ಸಮರದಲ್ಲಿ ಭಾರತ ಆರಂಭ ದಿಂದಲೇ ನೇಪಾಲ ಮೇಲೆ ಆಕ್ರಮಣಗೈದು ಸಂಪೂರ್ಣ ಹಿಡಿತ ಸಾಧಿಸಿತು. 18ನೇ ನಿಮಿಷದಲ್ಲಿ ಬಾಬಿ ಸಿಂಗ್ ಗೋಲು ಖಾತೆ ತೆರೆದರು.
ನೇಪಾಲಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಉತ್ತಮ ಅವಕಾಶವಿತ್ತು. ಬದಲಿ ಆಟಗಾರ ದಾನ್ ಸಿಂಗ್ ಗರಿಷ್ಠ ಪ್ರಯತ್ನ ಪಟ್ಟರಾದರೂ ಯಶಸ್ವಿಯಾಗಲಿಲ್ಲ. ಆದರೆ ಭಾರತದ ಬದಲಿ ಆಟಗಾರ ಅಮಾನ್ ಧಾರಾಳ ಯಶಸ್ಸು ಕಂಡರು. ನೇಪಾಲದ ರಕ್ಷಣಾ ವಿಭಾಗಕ್ಕೆ ಸಡ್ಡು ಹೊಡೆದು 4ನೇ ಗೋಲು ಹೊಡೆದರು. ನಾಯಕ ವನÉಲ್ಪೇಕ ಗೈಟ್ “ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್’, ಸಾಹಿಲ್ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿಗೆ ಭಾಜನರಾದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.