![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 20, 2022, 8:41 PM IST
ಸಿದ್ದಾಪುರ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸೆ.18ರಂದು ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಸುದರ್ಶನ ಶೆಟ್ಟಿ ಬಾಳೆಬೇರು (38) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿದ್ದಾಪುರ ಗ್ರಾಮದ ಬಾಳೆಬೇರಿನ ಸುದರ್ಶನ ಶೆಟ್ಟಿ ಹಾಗೂ ರಘುರಾಮ ಶೆಟ್ಟಿ ಅವರ ಕುಟುಂಬದ ಮಧ್ಯೆ ಜಾಗದ ತಕರಾರು ಇದ್ದು, ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಉಚ್ಚ ನ್ಯಾಯಾಲಯ ಇದರ ಬಗ್ಗೆ ಸೆ. 21ರಂದು ಕುಂದಾಪುರ ತಾಲೂಕು ತಹಶೀಲ್ದಾರ್ಗೆ ಸರ್ವೇ ನಡೆಸುವಂತೆ ಸೂಚಿಸಿದೆ.
ಇದರಿಂದ ಕೋಪಗೊಂಡ ರಘುರಾಮ ಶೆಟ್ಟಿ ಸೆ. 18ರಂದು ಮನೆಯ ಹತ್ತಿರದ ರಸ್ತೆಯ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಸುರೇಶ್ ಶೆಟ್ಟಿ ಅವರ ಮೇಲೆ ಕಾರು ಹತ್ತಿಸುವಂತೆ ರಾಜರಾಮ ಶೆಟ್ಟಿ ಅವರಿಗೆ ಹೇಳಿದ್ದಾರೆ. ರಾಜರಾಮ ಶೆಟ್ಟಿ ಕೊಲ್ಲಲು ಸ್ಕೂಟರ್ ಮೇಲೆ ಕಾರು ಹಾಯಿಸಿದ್ದು, ಬೊಬ್ಬೆ ಹೊಡೆದಾಗ ರಾಜಾರಾಮ ಶೆಟ್ಟಿ ಮತ್ತು ರಘುರಾಮ ಶೆಟ್ಟಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಗಾಯಗೊಂಡ ಸುರೇಶ್ ಶೆಟ್ಟಿ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನನ್ನು ಕೊಲ್ಲಲು ಶ್ರೀಧರ ಶೆಟ್ಟಿ ಮಂಗನಸಾಲು ಮತ್ತು ಬಿ. ಪ್ರಕಾಶ್ಚಂದ್ರ ಶೆಟ್ಟಿ ಕುಮ್ಮಕ್ಕು ಇದೆ ಎಂದು ಸುರೇಶ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.