ಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿ

ಭಾರತಕ್ಕೆ ತೆರೆದಿದೆ ವೈಟ್‌ವಾಶ್‌ ಅವಕಾಶ

Team Udayavani, Oct 4, 2022, 7:50 AM IST

South-Afrಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿica-Vs-India

ಇಂದೋರ್‌: ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ ಮೊದಲ ಸಲ ಟಿ20 ಸರಣಿ ಗೆದ್ದ ಸಡಗರದಲ್ಲಿರುವ ಭಾರತವೀಗ ಇನ್ನೊಂದು ಹೆಜ್ಜೆ ಮುಂದಿರಿಸಿ ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌ ಹಾಕಿದೆ. ಇಂದೋರ್‌ನಲ್ಲಿ ಮಂಗಳವಾರ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದು ವಿಜಯದಶಮಿಯನ್ನು ಆಚರಿಸುವುದು ಹಾಗೂ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಒಂದು ಹಂತದ ಆತ್ಮವಿಶ್ವಾಸ ಗಳಿಸುವುದು ರೋಹಿತ್‌ ಪಡೆಯ ಯೋಜನೆ.

ಭಾರತ ಈ ಪಂದ್ಯಕ್ಕಾಗಿ ಸಣ್ಣ ಮಟ್ಟದ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಆಡದವರನ್ನು ಇಲ್ಲಿ ಆಡಿಸಬಹುದು. ಇಲ್ಲಿ ಶ್ರೇಯಸ್‌ ಅಯ್ಯರ್‌ ಕಣಕ್ಕಿಳಿ ಯುವುದು ಬಹುತೇಕ ಖಚಿತ. ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಮಧ್ಯಮ ಕ್ರಮಾಂಕದ ಸ್ಪೆಷಲಿಸ್ಟ್‌ ಬ್ಯಾಟರ್‌ ಆಗಿರುವವರು ಅಯ್ಯರ್‌ ಮಾತ್ರ. ಉಳಿದಂತೆ ಬೌಲಿಂಗ್‌ ವಿಭಾ ಗದಲ್ಲಿ ಹೆಚ್ಚಿನ ಬದಲಾವಣೆ ಸಂಭವಿ ಸಬಹುದು. ಉಮೇಶ್‌ ಯಾದವ್‌, ಶಾಬಾಜ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಹಲ್‌ ಅವರಲ್ಲಿ ಕೆಲವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಬೌಲಿಂಗ್‌ ಕಳಪೆಯೇ?
ಸರಣಿ ವಶಪಡಿಸಿಕೊಂಡರೂ ಭಾರತದ ಸಮಸ್ಯೆಗಳಿನ್ನೂ ಪರಿಹಾರ ಗೊಂಡಿಲ್ಲ ಎಂಬುದು ಅನೇಕರ ಅಭಿಪ್ರಾಯ. ಮುಖ್ಯವಾಗಿ ಬೌಲಿಂಗ್‌ ಸಮಸ್ಯೆ ಎದ್ದು ಕಾಣುತ್ತದೆ. ಗುವಾಹಟಿ ಯಲ್ಲಿ ಡೇವಿಡ್‌ ಮಿಲ್ಲರ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಮುನುಗ್ಗಿ ಬರುವ ವೇಳೆ ಟೀಮ್‌ ಇಂಡಿಯಾದ ಬೌಲಿಂಗ್‌ ಸಂಪೂರ್ಣ ಚಿಂದಿಯಾಗಿತ್ತು. ಆದರೆ ತಿರುವನಂತಪುರ ಮೊದಲ ಪಂದ್ಯ ದಲ್ಲಿ ದಕ್ಷಿಣ ಆಫ್ರಿಕಾವನ್ನು 106ಕ್ಕೆ ನಿಯಂತ್ರಿಸಿದ್ದು ಇದೇ ಬೌಲಿಂಗ್‌ ಪಡೆ ಎಂಬುದನ್ನು ಮರೆಯು ವಂತಿಲ್ಲ. ಅರ್ಥಾತ್‌, ಬೌಲಿಂಗ್‌ ಟ್ರ್ಯಾಕ್‌ನಲ್ಲಿ ಭಾರತದ ದಾಳಿ ಪರಿಣಾಮಕಾರಿ ಯಾಗಿಯೇ ಇತ್ತು.

ಗುವಾಹಟಿಯ ಬ್ಯಾಟಿಂಗ್‌ ಸ್ವರ್ಗದಲ್ಲಿ ಸಂಪೂರ್ಣ ಹಳಿ ತಪ್ಪಿತು, ಅಷ್ಟೇ. ಗುವಾಹಟಿಯಲ್ಲಿ ಎರಡೂ ತಂಡ ಗಳಿಗೆ ಉರುಳಿಸಲು ಸಾಧ್ಯವಾದದ್ದು ತಲಾ 3 ವಿಕೆಟ್‌ ಮಾತ್ರ. ಇಲ್ಲಿ 6 ವಿಕೆಟಿಗೆ 458 ರನ್‌ ಹರಿದು ಬಂದಿತ್ತು. ಒಂದು ಶತಕ, ಮೂರು ಅರ್ಧ ಶತಕ ದಾಖಲಾಗಿತ್ತು. ಹೀಗಾಗಿ ಇಂಥ ಟ್ರ್ಯಾಕ್‌ನಲ್ಲಿ ಬೌಲಿಂಗ್‌ ವಿಫ‌ಲಗೊಂಡಿತು ಎಂದು ದೂರುವುದರಲ್ಲಿ ಅರ್ಥವಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

ಎರಡು ಪಂದ್ಯ, ನಾಲ್ಕೇ ವಿಕೆಟ್‌!
ದಕ್ಷಿಣ ಆಫ್ರಿಕಾ ಪಾಲಿಗೆ ಇದೊಂದು ಪ್ರತಿಷ್ಠೆಯ ಕಾಳಗ. ಐಪಿಎಲ್‌ ಆಡಿದ ಸಾಕಷ್ಟು ಅನುಭವಿಗಳಿದ್ದರೂ ಅವರಿಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಬೌಲಿಂಗ್‌ ವಿಭಾಗವಂತೂ ಘೋರ ವೈಫ‌ಲ್ಯ ಕಂಡಿದೆ. ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್‌ ಮಾತ್ರ ಎಂಬುದನ್ನು ಗಮನಿಸಬೇಕು. ಒಂದು ರನೌಟ್‌ ಆಗಿತ್ತು.

ಬ್ಯಾಟಿಂಗ್‌ ವಿಭಾಗವೂ ಇದಕ್ಕೆ ಹೊರತಲ್ಲ. ಗುವಾಹಟಿಯಲ್ಲಿ ಕಿಲ್ಲರ್‌ ಮಿಲ್ಲರ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಸಿಡಿದು ನಿಂತಿದ್ದನ್ನು ಹೊರತುಪಡಿಸಿದರೆ ಹರಿಣಗಳ ಬ್ಯಾಟಿಂಗ್‌ “ಟೋಟಲಿ ಫೇಲ್‌’ ಎಂದೇ ಹೇಳಬೇಕು. ಟಿ20 ವಿಶ್ವಕಪ್‌ಗ್ೂ ಮುನ್ನ ಡಿ ಕಾಕ್‌ ಮತ್ತು ಮಿಲ್ಲರ್‌ ಅತ್ಯಗತ್ಯ ಫಾರ್ಮ್ ಕಂಡುಕೊಂಡದ್ದು ಹರಿಣಗಳ ಪಾಲಿನ ಸಮಾಧಾನಕರ ಸಂಗತಿ.

ಆದರೆ ನಾಯಕ ಟೆಂಬ ಬವುಮ ಈ ಸರಣಿಯಲ್ಲಿನ್ನೂ ಖಾತೆಯನ್ನೇ ತೆರೆಯದಿರುವುದು ದಕ್ಷಿಣ ಆಫ್ರಿಕಾ ಪಾಲಿನ ಗಂಡಾಂತರಕಾರಿ ಸುದ್ದಿ. ಎರಡೂ ಪಂದ್ಯಗಳಲ್ಲಿ ಬವುಮ ಸೊನ್ನೆ ಸುತ್ತಿ ಹೋಗಿದ್ದಾರೆ. ಒಂದರಲ್ಲಿ 4 ಎಸೆತ, ಇನ್ನೊಂದರಲ್ಲಿ 7 ಎಸೆತ ಎದುರಿಸಿದ್ದಾರೆ. ದೀಪಕ್‌ ಚಹರ್‌ ಅವರ ಒಂದು ಓವರ್‌ ಅನ್ನು ಮೇಡನ್‌ ಮಾಡಿದ್ದೂ ಇವರೇ!

ಟೆಂಬ ಬವುಮ ಸಾಲಲ್ಲಿರುವ ಮತ್ತೋರ್ವ ಬ್ಯಾಟರ್‌ ರಿಲೀ ರೋಸ್ಯೂ. ಇವರದೂ ಎರಡು ಪಂದ್ಯಗಳಲ್ಲಿ ಶೂನ್ಯ ಸಂಪಾದನೆ.

ಸೂರ್ಯಕುಮಾರ್‌ ಸಿಕ್ಸರ್‌ ದಾಖಲೆ
ಭಾರತದ ನೂತನ ಡ್ಯಾಶಿಂಗ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ದಾಖಲೆಗಳ ಮೇಲೆ ದಾಖಲೆ ಪೇರಿಸುತ್ತ ಹೋಗುತ್ತಿದ್ದಾರೆ. ಗುವಾಹಟಿ ಪಂದ್ಯದಲ್ಲಿ ಅವರು ನೂತನ ಸಿಕ್ಸರ್‌ ಮೈಲುಗಲ್ಲಿ ನೆಟ್ಟರು. ಕ್ಯಾಲೆಂಡರ್‌ ವರ್ಷವೊಂದರ ಟಿ20 ಪಂದ್ಯಗಳಲ್ಲಿ 50 ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗನೆನಿಸಿದರು.
ಕಳೆದ ವರ್ಷ ಮೊಹಮ್ಮದ್‌ ರಿಜ್ವಾನ್‌ 42 ಸಿಕ್ಸರ್‌ ಬಾರಿಸಿದ್ದು ದಾಖಲೆಯಾಗಿತ್ತು. ಇದನ್ನು ಸೂರ್ಯ ಆಸ್ಟ್ರೇಲಿಯ ಎದುರಿನ ಹೈದರಾಬಾದ್‌ ಪಂದ್ಯದಲ್ಲಿ ಹಿಂದಿಕ್ಕಿದ್ದರು. ಗುವಾಹಟಿ ಪಂದ್ಯದ ಬಳಿಕ ಇದು 52ಕ್ಕೆ ಏರಿದೆ. ನ್ಯೂಜಿಲ್ಯಾಂಡ್‌ ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ 2021ರಲ್ಲಿ 41 ಸಿಕ್ಸರ್‌ ಬಾರಿಸಿದ್ದು, 3ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಗುವಾಹಟಿ ಪಂದ್ಯದಲ್ಲಿ ಸೂರ್ಯ ಕೇವಲ 22 ಎಸೆತಗಳಿಂದ 61 ರನ್‌ ಮಾಡಿದ್ದರು. ಇದು 5 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಇಂದೋರ್‌ನಲ್ಲಿದು ಮೂರನೇ ಪಂದ್ಯ
ಇಂದೋರ್‌ನ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯ ಇದಾಗಿದೆ. ಹಿಂದಿನೆರಡೂ ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಆಡಲಾಗಿತ್ತು. ಎರಡನ್ನೂ ಭಾರತ ಗೆದ್ದಿತ್ತು.

ಮೊದಲ ಮುಖಾಮುಖಿ ಏರ್ಪಟ್ಟದ್ದು 2017ರಲ್ಲಿ. ಭಾರತದ ಗೆಲುವಿನ ಅಂತರ 88 ರನ್‌. ರೋಹಿತ್‌ ಶರ್ಮ (118) ಮತ್ತು ಕೆ.ಎಲ್‌. ರಾಹುಲ್‌ (89) ಜೋಡಿಯ ಅಸಾಮಾನ್ಯ ಬ್ಯಾಟಿಂಗ್‌ ಸಾಹಸದಿಂದ ಭಾರತ 5ಕ್ಕೆ 260 ರನ್‌ ರಾಶಿ ಹಾಕಿತು. ಶ್ರೀಲಂಕಾ 17.2 ಓವರ್‌ಗಳಲ್ಲಿ 172ಕ್ಕೆ ಆಲೌಟ್‌ ಆಯಿತು. ಚಹಲ್‌ 4, ಕುಲದೀಪ್‌ ಯಾದವ್‌ 3 ವಿಕೆಟ್‌ ಉರುಳಿಸಿದರು.

2020ರ ಕೊನೆಯ ಮುಖಾಮುಖಿಯಲ್ಲಿ ಭಾರತದ ಗೆಲುವಿನ ಅಂತರ 7 ವಿಕೆಟ್‌. ಶ್ರೀಲಂಕಾ 9ಕ್ಕೆ 142 ರನ್‌ ಗಳಿಸಿದರೆ, ಕೊಹ್ಲಿ ಪಡೆ 17.3 ಓವರ್‌ಗಳಲ್ಲಿ 3ಕ್ಕೆ 144 ರನ್‌ ಮಾಡಿತು. ಶಾದೂìಲ್‌ 3, ಸೈನಿ, ಕುಲದೀಪ್‌ ತಲಾ 2 ವಿಕೆಟ್‌ ಉರುಳಿಸಿದರು. ಚೇಸಿಂಗ್‌ ವೇಳೆ ರಾಹುಲ್‌ ಪಂದ್ಯದಲ್ಲೇ ಸರ್ವಾಧಿಕ 45, ಧವನ್‌ 32, ಅಯ್ಯರ್‌ 34, ಕೊಹ್ಲಿ ಅಜೇಯ 30 ರನ್‌ ಮಾಡಿದರು.

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Paralympics closing ceremony: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌, ಪ್ರೀತಿ ಧ್ವಜಧಾರಿಗಳು

Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌ ಸಿಂಗ್‌, ಪ್ರೀತಿ ಪಾಲ್‌ ಧ್ವಜಧಾರಿಗಳು

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

Paris Paralympics; Another gold for India; Praveen Kumar won gold in high jump

Paralympics; ಭಾರತಕ್ಕೆ ಮತ್ತೊಂದು ಬಂಗಾರ; ಹೈಜಂಪ್‌ ನಲ್ಲಿ ಚಿನ್ನ ಗೆದ್ದ ಪ್ರವೀಣ್‌ ಕುಮಾರ್

Vikram Rathore; Former coach of Team India joined New Zealand team

Vikram Rathour; ನ್ಯೂಜಿಲ್ಯಾಂಡ್‌ ತಂಡ ಸೇರಿದ ಟೀಂ ಇಂಡಿಯಾ ಮಾಜಿ ಕೋಚ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.