ಗುಡಿಬಂಡೆ: ಕೆಮಿಕಲ್ ಮಿಶ್ರಿತ ಬಣ್ಣವಾದ ಕೆರೆ ನೀರು
Team Udayavani, Oct 9, 2022, 3:15 PM IST
ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ನೀರು ದಿನದಿಂದ ದಿನಕ್ಕೆ ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ತಿರುಗುತ್ತಿದ್ದು, ನೀರಿಗೆ ಯಾರಾದರೂ ಕೆಮಿಕಲ್ ಮಿಶ್ರಣ ಮಾಡಿದ್ದಾರೆಯೇ ಎಂದು ಸಾರ್ವಜನಿಕರಲ್ಲಿ ಅನುಮಾನಗಳು ಎಡ ಮಾಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ, ಭಾರತದ ಭೂಪಟವನ್ನು ಹೋಲುವ ಅಮಾನಿಬೈರಸಾಗರ ಕೆರೆ 2022ನೇ ವರ್ಷದಲ್ಲಿ ನಿಲ್ಲದೇ ಕೋಡಿ ಹರಿಯುತ್ತಿದ್ದು, ಇದೇ ಕೆರೆಯಲ್ಲಿ ಜೀವ ಜಲಚರಗಳು ವಾಸಸ್ಥಾನವಾಗಿದ್ದು, ಇದೇ ಕೆರೆಯ ನೀರನ್ನು ಸುಮಾರು ಹಳ್ಳಿಗೆ ಕುಡಿಯುವ ನೀರು ಬಳಕೆಗೆ ಬಳಸಲು ಯೋಜನೆ ಸಹ ಸಿದ್ದಪಡಿಸುತ್ತಿದೆ, ಆದರೆ ಈ ಕೆರೆಯ ನೀರು ಕಳೆದ ಶನಿವಾರ ರಾತ್ರಿಯಿಂದ ಬಣ್ಣ ಬದಲಾವಣೆಯಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಕೆರೆಯ ನೀರು ಕೆಮಿಕಲ್ ಮಿಶ್ರಣದ ಬಣ್ಣದ ರೂಪಕ್ಕೆ ತಿರುಗಿದ್ದು, ಬೆಳಿಗಿನ ಜಾವ ವಾಯು ವಿವಹಾರಕ್ಕೆ ತೆರಳಿದ್ದು, ಸಾರ್ವಜನಿಕರು ಕೆರೆಯ ನೀರಿನ ಬಣ್ಣ ಬದಲಾಗಿರುವುದನ್ನು ಕಂಡು, ಕೆಮಿಕಲ್ ಮಿಶ್ರಣವಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ, ಹೆಚ್ಚಿನ ಅನಾಹುತ ಸಂಬಂವಿಸುವ ಮೊದಲೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಗುಡಿಬಂಡೆ ಪಟ್ಟಣದ ಹತ್ತಿರದ ವಾಟದಹೊಸಹಳ್ಳಿ ಕೆರೆಗೆ ಕೆಮಿಕಲ್ ಮಿಶ್ರಣ ಮಾಡಲು ಬಂದಿದ್ದ ಟ್ಯಾಂಕರ್ಅನ್ನು ಅಲ್ಲಿಯ ಸುತ್ತಮುತ್ತಲ ಗ್ರಾಮ ಸ್ಥರು ಹಿಡಿದು ಗುಡಿಬಂಡೆ ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಘಟನೆ ನಡೆದಿದು, ಈ ಘಟನೆ ಮರೆ ಮಾಚುವಷ್ಟರಲ್ಲೇ ಅಮಾನಿಬೈರಸಾಗರ ಕೆರೆ ನೀರು ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬದಲಾಗುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಜಿ.ಕೆ.ಜಗನ್ನಾಥ್, ಬಿ.ಜೆ.ಪಿ. ಮುಖಂಡ ಹೇಳಿಕೆ: ಇತಿಹಾಸ ಪ್ರಸಿದ್ದ ಅಮಾನಿಬೈರಸಾಗರ ಕೆರೆ ನೀರಿನ ಬಣ್ಣ ಕೆಮಿಕಲ್ ಮಿಶ್ರಣದಂತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ರಾಜ್ಯದಲ್ಲಿ ಆರ್ಟಿಇ ಸೀಟಿಗಿಲ್ಲ ಕಿಮ್ಮತ್ತು!
Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ
Chikkaballapur: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ!
Chikkaballapur: ಪೋಕ್ಸೋ ಆರೋಪಿ ಜತೆಗೆ 16 ವರ್ಷದ ಬಾಲಕಿ ಆತ್ಮಹತ್ಯೆ!
Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.