![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 11, 2022, 3:15 PM IST
ಪಣಜಿ: ದೂಧ್ಸಾಗರ ಪ್ರವಾಸೋದ್ಯಮ ಕಾಲ ಆರಂಭವಾಗಿದ್ದು, ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗುತ್ತಿರುವುದರಿಂದ ಇಲ್ಲಿ ವ್ಯಾಪಾರ ಮಾಡುವ ಜೀಪ್ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಡಾ. ಗಣೇಶ ಗಾಂವ್ಕರ್ ಹೇಳಿದರು.
ಮಳೆಯಿಂದಾಗಿ ಗೋವಾ ದೂಧ್ಸಾಗರ ಪ್ರವಾಸೋದ್ಯಮ ಆರಂಭಕ್ಕೆ ಎಂಟು ದಿನ ವಿಳಂಬವಾಗಿದ್ದು, ಇದೀಗ ದೂಧ್ಸಾಗರ ಪ್ರವಾಸೋದ್ಯಮಕ್ಕೆ ಚಾಲನೆ ದೊರೆತಿದೆ. ದೂಧ್ಸಾಗರ ಬಳಿಯ ಕುಳೆಯಲ್ಲಿ ಅರಣ್ಯ ಇಲಾಖೆಯ ಪ್ರವೇಶ ದ್ವಾರವನ್ನು ಶಾಸಕ ಡಾ. ಗಣೇಶ ಗಾಂವಕರ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಳೆ ಶಿಗಾಂವದ ಪಂಚಾಯತ್ ಅಧ್ಯಕ್ಷ ಗೋವಿಂದ ಶಿಗಾಂವಕರ್, ದೂಧ್ಸಾಗರ ಜಿ.ಪಂ. ಅಧ್ಯಕ್ಷ ಅಶೋಕ ಖಂಡೇಪಾರ್ಕರ್, ಕಾರ್ಯದರ್ಶಿ ಸತ್ಯವಾನ್ ನಾಯ್ಕ್, ಖಜಾಂಚಿ ಮಂಗಳದಾಸ್ ಚಿರಿ, ದಿಲೀಪ್ ಮೈರೇಕರ್, ಟ್ರೈಬೆಲೊ ಸೋಜಾ, ಅಶೋಕ್ ಗಾಂವ್ಕರ್, ಸತೀಶ್ ಸತ್ಪಾಲಕರ್, ಮತ್ತಿತರರು ಉಪಸ್ಥಿತರಿದ್ದರು.
ಈ ವರ್ಷದ ಪ್ರವಾಸೋದ್ಯಮ ಸೀಸನ್ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಒಟ್ಟು 156 ಜೀಪ್ಗಳ ಮೂಲಕ ಆಗಮಿಸಿ 1092 ಪ್ರವಾಸಿಗರು ದೂಧಸಾಗರ ಜಲಪಾತವನ್ನು ವೀಕ್ಷಿಸಿದ್ದು, ಮೊದಲ ದಿನ ಕುಳೆ-ಶಿಗಾಂವ ಪಂಚಾಯತ್ ಗೆ 43,6,80 ರೂ. ಆದಾಯ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸಕ್ತ ಗೋವಾ ಪ್ರವಾಸ ಆರಂಭವಾದ ಕಾಲದ ಹಿನ್ನೆಲೆ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶ ಪ್ರವಾಸಿಗರು ಆಗಮಿಸುವ ನಿರೀಕ್ಷೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಹೊಂದಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.