ಕೋಲ್ಕತದ ಅಮಿತಾಭ್ ಬಚ್ಚನ್ ದೇವಾಲಯದಲ್ಲಿ 80 ವರುಷದ ಹರುಷ !
Team Udayavani, Oct 11, 2022, 7:41 PM IST
ಕೋಲ್ಕತ: ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸದಿಂದ ಸುಮಾರು 2000 ಕಿಮೀ ದೂರದ ಕೋಲ್ಕತ ದಲ್ಲಿ ಬಚ್ಚನ್ ಧಾಮ್ ಇದೆ. ಪ್ರತಿ ದಿನ ಎರಡು ಬಾರಿ (ಬೆಳಗ್ಗೆ 10 ರಿಂದ 11 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ) ಎರಡು ಗಂಟೆಗಳ ಕಾಲ ಅಭಿಮಾನಿಗಳಿಗೆ ದರ್ಶನ ಅವಕಾಶ ನೀಡಲಾಗಿದೆ. ಬಚ್ಚನ್ ಧಾಮ್ನಲ್ಲಿ, ಹವಾನಿಯಂತ್ರಿತ ಒಳ ಕೋಣೆಗೆ ಪ್ರವೇಶಿಸಿದಾಗ ಅಭಿಮಾನಿಗಳು ಚಪ್ಪಲಿ ಮತ್ತು ಶೂ ಗಳನ್ನು ತೆಗೆದು ಪ್ರವೇಶಿಸುವ ಪದ್ದತಿ ಅನುಷ್ಠಾನಗೊಳಿಸಲಾಗಿದೆ.
ದೇಶವು ಅಮಿತಾಭ್ ಬಚ್ಚನ್ ಅವರ 80 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ, ಕೋಲ್ಕತ ಸೂಪರ್ಸ್ಟಾರ್ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಈ ಬಿಗ್ ಬಿ ಪ್ರತಿಮೆ ಸ್ಥಾಪಿಸಿ ಆರಾಧಿಸಲಾಗುತ್ತಿದೆ. ಅಖಿಲ ಬಂಗಾಳದ ಅಮಿತಾಭ್ ಬಚ್ಚನ್ ಅಭಿಮಾನಿಗಳ ಸಂಘದ ಮುಖ್ಯ ಕಾರ್ಯದರ್ಶಿ ಸಂಜಯ್ ಪಟೋಡಿಯಾ, ಬಚ್ಚನ್ ಸ್ವತಃ ಶ್ರೀಕೃಷ್ಣನ ಅವತಾರ ಎಂದು ಹೇಳಿಕೊಂಡಿದ್ದಾರೆ. “ನಾವು ದೇವಾಲಯದ ಹೊರಗೆ ಜನರಿಗೆ ಆಹಾರವನ್ನು ನೀಡುತ್ತೇವೆ, ಚಳಿಗಾಲದಲ್ಲಿ ನಾವು ಕಂಬಳಿಗಳನ್ನು ವಿತರಿಸುತ್ತೇವೆ” ಎಂದು ಪಟೋಡಿಯಾ ಹೇಳಿದ್ದಾರೆ.
On @SrBachchan ‘s birthday, his fans in Kolkata celebrate with enthusiasm and perform arti at the temple built in his name…Watch the video! pic.twitter.com/O7Y6QWLxbW
— Indian Express Entertainment ? (@ieEntertainment) October 11, 2022
22 ವರ್ಷಗಳಿಂದ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಅಭಿಮಾನಿಗಳ ಸಂಘವು ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಾ ಬಂದಿದೆ. “ಈ ವರ್ಷ ಅಮಿತಾಭ್ ಬಚ್ಚನ್ 80 ವರ್ಷಕ್ಕೆ ಕಾಲಿರಿಸಿದ್ದ ಕಾರಣ, ಆರ್ಥಿಕವಾಗಿ ದುರ್ಬಲ ಹಿನ್ನೆಲೆ ಹೊಂದಿದ 80 ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ನಂತರ ನಾವು ನಗರದ ಮಲ್ಟಿಪ್ಲೆಕ್ಸ್ನಲ್ಲಿ ಅಮಿತಾಭ್ ಬಚ್ಚನ್ ಚಲನಚಿತ್ರ ಪ್ರದರ್ಶನಗಳನ್ನು ನಡೆಸುತ್ತೇವೆ ಎಂದು ಪಟೋಡಿಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.