ಉಕ್ಕಲಗೆರೆ ಬಸವಣ್ಣನ ಆರೋಪಕ್ಕೆ ಅಶ್ವಿ‌ನ್‌ ತಿರುಗೇಟು


Team Udayavani, Oct 17, 2022, 4:15 PM IST

ಉಕ್ಕಲಗೆರೆ ಬಸವಣ್ಣನ ಆರೋಪಕ್ಕೆ ಅಶ್ವಿ‌ನ್‌ ತಿರುಗೇಟು

ತಿ.ನರಸೀಪುರ: ನಾನೇನು ಹೆಬ್ಬೆಟ್ಟಲ್ಲ, ಬದಲಿಗೆ ಡಬಲ್‌ ಡಿಗ್ರಿ ಮಾಡಿರುವ ಎಂಟೆಕ್‌ ಗ್ರ್ಯಾಜುಯೇಟ್‌ ಆಗಿದ್ದು ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ಗರಂ ಆದ ಘಟನೆ ನಡೆಯಿತು.

ತಾಲೂಕಿನ ಉಕ್ಕಲಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕನಕ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆಮಾಡಿದ್ದು ಸ್ಥಳೀಯ ಶಾಸಕರಲ್ಲ ಗ್ರಾಮದ ಅಭಿವೃದ್ಧಿಯಲ್ಲಿ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪರ ಕೊಡುಗೆ ಅಪಾರವಾಗಿದ್ದು ಹಾಲಿ ಶಾಸಕರ ಸಾಧನೆ ಶೂನ್ಯ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ ಆರೋಪ ಮಾಡಿ ಶಾಸಕರಿಗೆ ಸೆಡ್ಡು ಹೊಡೆದುಗ್ರಾಪಂ ಅಧ್ಯಕ್ಷರೊಂದಿಗೆ ಕಳೆದ ವಾರವಷ್ಟೇ ಭೂಮಿ ಪೂಜೆ ನೆರವೇರಿಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರು ಕನಕ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಉಕ್ಕಲಗೆರೆ ಬಸವಣ್ಣನವರ ಆರೋಪಕ್ಕೆ ತಿರುಗೇಟು ನೀಡಿ ಮಾತನಾಡಿ, ಗ್ರಾಪಂನಲ್ಲಿ ಬಿಡುಗಡೆಯಾದ ಹಣವನ್ನು ಮುಂದಿನ ಅವಧಿಗೆ ಆಯ್ಕೆಯಾದ ಸದಸ್ಯ ಬೇರೆಡೆಗೆ ವರ್ಗಾವಣೆ ಮಾಡಲು ಸಾಧ್ಯವಿರುವಾಗ ಒಬ್ಬ ಶಾಸಕನಾಗಿ ಅನುದಾನ ಬೇರೆಡೆಗೆ ವರ್ಗಾಯಿಸಲು ಆಗುತ್ತಿರಲಿಲ್ಲವೇ, ಆದರೆ ನನಗೆ ದ್ವೇಷದ ರಾಜಕಾರಣ ಮಾಡಲು ಬಾರದು. ಮತದಾರರಿಂದ ಚುನಾಯಿತನಾಗಿ ಬಂದಿರುವುದು ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ದುಡಿಯಲಷ್ಟೇ. ದ್ವೇಷದ ರಾಜಕಾರಣ ಮಾಡಲಲ್ಲ.

ಆದಷ್ಟು ಜನರ ಕೈಗೆ ಸಿಗುವ ಜೊತೆಗೆ ನನ್ನ ಕೈಲಾದಷ್ಟು ಕೆಲಸ ಮಾಡಬೇಕೆನ್ನುವ ಆಶಯ ಹೊಂದಿದ್ದೇನೆ. ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆಯೇ ಹೊರತು ಕೆಟ್ಟದ್ದನಂತೂ ಮಾಡಲಾರೆ, ಜನರ ಪ್ರೀತಿ ವಿಶ್ವಾಸವಷ್ಟೇ ನನಗೆ ಮುಖ್ಯ ಎಂದರು.

ಆರೋಪ ಮಾಡುವವರು ವಾಸ್ತವಾಂಶ ಅರಿತು ಮಾತಾಡಲಿ, ನಾನೇನು ಅನಕ್ಷರಸ್ಥನಲ್ಲ,ನಾನು ಡಬಲ್‌ ಡಿಗ್ರಿ ಮಾಡಿರುವ ಗ್ರ್ಯಾಜುಯೇಟ್‌ ಅನುದಾನ ಬಿಡುಗಡೆ ಮಾಡಿಸಿದ್ದು ಯಾರು, ಅನುದಾನ ಎಲ್ಲಿತ್ತು, ಯಾವ ಸಾಲಿನಲ್ಲಿ ಬಂತು, ಯಾಕೆ ಸ್ಥಗಿತವಾಗಿತ್ತು, ಅನುದಾನ ಬಿಡುಗಡೆ ಮಾಡಿಸಲು ನಾವೇನು ಮಾಡಿದ್ವಿ ಎಂದು ಹೇಳುವ ಮೂಲಕ ಅನುದಾನ ಬಿಡುಗಡೆ ಮಾಡಿಸಿದ್ದು ನಾನೇ ಎಂಬ ಬಗ್ಗೆ ಸುಳಿವು ನೀಡಿದರು.

ಗ್ರಾಮದಲ್ಲಿ ಕನಕ ಭವನ ನಿರ್ಮಾಣ ಮಾಡಲು ಹಿಂದುಳಿದ ವರ್ಗದಿಂದ 10 ಲಕ್ಷ ಹಾಗೂ ಗ್ರಾಮ ವಿಕಾಸ ಯೋಜನೆಯಡಿ 23 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, ಗ್ರಾಮಸ್ಥರು ಹಾಗೂ ಸಮುದಾಯದ ಮುಖಂಡರ ಸಲಹೆ, ಆಶಯದಂತೆ ಉತ್ತಮ ಗುಣಮಟ್ಟದ ಭವನ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.

ಉಕ್ಕಲಗೆರೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಡುಗೆ ಕುಮಾರ್‌, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌. ಸಿದ್ಧಾರ್ಥ, ಸದಸ್ಯ ಜೈಪಾಲ್‌ ಭರಣಿ, ಎಪಿಎಂಸಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಗ್ರಾಪಂ ಮಾಜಿ ಸದಸ್ಯ

ಶಿವಕುಮಾರ್‌, ಸದಸ್ಯ ಪುಟ್ಟಮ್ಮ, ಎಸ್‌ಡಿಎಂಸಿ ಅಧ್ಯಕ್ಷ ರಾಜು, ಗಡಿಗೆ ನಟರಾಜ್, ಎಸ್‌.ಪಿ.ಕುಮಾರ್‌, ಹೋಟೆಲ್‌ ರಾಜಶೇಖರ್‌, ಶಿವಶಂಕರಪ್ಪ, ಕೆ.ಶಿವಣ್ಣ, ಅಂಗಡಿ ಕುಮಾರ್‌, ಹೋಟೆಲ್‌ ಮಲ್ಲಿಕಾರ್ಜುನಪ್ಪ, ನಂದಿ, ಬೆನಕಪ್ಪ, ರುದ್ರಸ್ವಾಮಿ, ವಕೀಲ ಸುರೇಶ್‌, ವಿನೋದ್‌, ಸಾಧು ಬಸವರಾಜ್, ಗೌಡಿಕೆ ಶ್ರೀನಿವಾಸ್‌, ಇಟ್ಟಿಗೆ ಶಿವಸ್ವಾಮಿ, ಕೊಪ್ಪಲು ಸ್ವಾಮಿ, ಪಿ.ರಾಜು, ಕೆಂಪಣ್ಣ, ಮಹದೇವಸ್ವಾಮಿ, ಸಿದ್ದರಾಮ, ಮಹದೇವ ಶೆಟ್ಟಿ, ಭೀಮ, ಮಹದೇವಶೆಟ್ಟಿ, ಶುಭನ್‌, ಗಣೇಶ್‌, ಅರ್ಚಕ ನಾಗರಾಜಪ್ಪ, ಪರಶಿವಮೂರ್ತಿ, ನಾಗರಾಜು, ಸಿದ್ದಣ್ಣ, ಸಿದ್ದಲಿಂಗಸ್ವಾಮಿ, ಮರಪ್ಪ, ಮಲ್ಲೇಶ್‌, ಮಹ ದೇವಸ್ವಾಮಿ, ಮಹೇಶ್‌, ನಾಗರಾಜು, ರಘು, ಶಿವಣ್ಣ ತಮ್ಮಯ್ಯ, ಬಸವರಾಜ್‌ ಶೆಟ್ಟಿ, ರಾಜ ಶೆಟ್ಟಿ ಇತರರು ಇದ್ದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.