ಮಂಗಳೂರು: 6.39 ಲಕ್ಷ ರೂ. ಮೌಲ್ಯದ ಮೊಬೈಲ್ ಖರೀದಿಸಿ ಹಣ ನೀಡದೆ ವಂಚನೆ
Team Udayavani, Oct 21, 2022, 6:55 AM IST
ಮಂಗಳೂರು: ನಗರದ ಹಳೆಯ ಸೆಂಟ್ರಲ್ ಮಾರ್ಕೆಟ್ ಬಳಿ ಮೊಬೈಲ್ ಅಂಗಡಿ ಹೊಂದಿರುವ ಶೇಖ್ ರಿಯಾಜ್ ಎಂಬವರಿಂದ ಕುಂದಾಪುರ ಗಂಗೊಳ್ಳಿಯಲ್ಲಿ ಅಂಗಡಿ ಹೊಂದಿರುವ ಗಯಾಜ್ ಎಂಬಾತ 6.39 ಲಕ್ಷ ರೂ. ಮೌಲ್ಯದ ಮೊಬೈಲ್ ಖರೀದಿಸಿ ಹಣ ನೀಡದೆ ವಂಚಿಸಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2021ರ ಫೆ.12ರಂದು ಗಯಾಜ್ ಅಂಗಡಿಗೆ ಬಂದು 6.39 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಯ 62 ಮೊಬೈಲ್ ಖರೀದಿಸಿದ್ದ. ರಿಯಾಜ್ಗೆ ಅತನ ಪರಿಚಯ ಮೊದಲೇ ಇತ್ತು ಹಾಗೂ ಆತ ಅವರಿಂದಲೇ ಮೊಬೈಲ್ ಖರೀದಿಸುತ್ತಿದ್ದ. ಮೊಬೈಲ್ ಖರೀದಿಸಿದ ಬಳಿಕ ಸ್ವಲ್ಪ ಹಣವನ್ನು ಎಟಿಎಂನಿಂದ ವಿದ್ಡ್ರಾ ಮಾಡಿ ತಂದುಕೊಡುವುದಾಗಿ ಹೇಳಿ ಹೋದಾತ ಹಣವನ್ನೂ ನೀಡದೆ, ಮೊಬೈಲ್ ಹಿಂದಿರುಗಿಸದೆ ತಪ್ಪಿಸಿಕೊಂಡಿದ್ದ.
ಆತನಿಗೆ ಕರೆಮಾಡಿದಾಗ ಸ್ವಿಚ್ಆಫ್ ಆಗಿತ್ತು. ಮರುದಿನ ಮತ್ತೆ ಕರೆಮಾಡಿದಾಗ ಒಂದು ಕಡೆಯಿಂದ ಹಣ ಬರಲು ಬಾಕಿ ಇದೆ ಅದು ಬಂದ ಮೇಲೆ ಕೊಡುತ್ತೇನೆ ಎಂದು ತಿಳಿಸಿದ್ದಾನೆ. ಬಳಿಕ ಹೀಗೆ ದಿನ ದೂಡುತ್ತಿದ್ದ. ನಂತರದ ದಿನಗಳಲ್ಲಿ ಪಿರ್ಯಾದಿದಾರರು ಅಂಗಡಿಯಲ್ಲಿದ್ದ ಸಿಸಿ ಟಿವಿ ಪರಿಶೀಲಿಸಿದಾಗ 57 ಸಾವಿರ ರೂ. ಬೆಲೆ ಬಾಳುವ 3 ಮೊಬೈಲ್ಗಳನ್ನೂ ಯಾರಿಗೂ ತಿಳಿಯದಂತೆ ಗಯಾಜ್ ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ಖರೀದಿಸಿದ ಮೊಬೈಲ್ಗಳ ಹಣ ಕೊಡದೆ ಆತ ವಂಚನೆ ಮಾಡಿವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.